(www.vknews.com) : ವೀಡಿಯೋ ನೋಡಿದರೆ ಯಾರೂ ಅತ್ತ ಸುಳಿಯಲಾರರು. ಬೆಂಕಿಯ ಜ್ವಾಲೆ ಯಿಂದ ಧಗಧಗಿಸುತ್ತಾ ಹೊತ್ತಿ ಉರಿಯುವ ಲಾರಿ.ಪಕ್ಕದಲ್ಲಿ ಇರುವವರು ಯಾರೂ ಹತ್ತಿರ ಹೋಗುವ ಧೈರ್ಯ ತೋರಲಿಲ್ಲ.ಆ ಸಂದರ್ಭದಲ್ಲಿ ಮಂಗಳೂರಿನಿಂದ ಅನೀಸ್ ಎಂಬ ಮಗುವಿನ ಚಿಕಿತ್ಸೆ ಯ ನಿಮಿತ್ತ ಬೆಂಗಳೂರಿಗೆ ತೆರಳುತ್ತಿದ್ದ ಎಂ ಎನ್ ಜಿ ಫೌಂಡೇಶನ್ ಟೀಮ್ ಯುವ ತರುಣರು ಪರಿಸ್ಥಿತಿ ಯ ಗಂಭೀರತೆಯನ್ನು ಅರಿತು ಸಹಾಯಕ್ಕೆ ಮುಂದಾಗುತ್ತಾರೆ.
ಅವರು ಅಲ್ಲೇ ಇದ್ದ ನವೀನ್ ಎಂಬ ಧೈರ್ಯವಂತ ಪೋಲಿಸ್ ಪೇದೆಯ ನೆರವಿಗೆ ಧಾವಿಸಿದರು.ಬಕೇಟ್ ನೀರನ್ನಾದರೂ ಹಾಯಿಸಿ ನೋಡೋಣ ಎಂದು ಬೆಂಕಿಯನ್ನು ನಂದಿಸಲು ಮುಂದಾದರು.ನಂತರ Fire extinguisher ಕೂಡಾ ಸಹಾಯಕ್ಕೆ ಬಂತು.ಹಾಗೇ ಎಲ್ಲರೂ ಜೊತೆ ಸೇರಿದಾಗ ಆಗಬಹುದಾದಂತಹ ಅನಾಹುತ ತಪ್ಪಿಹೋಯಿತು.ಅನೀಸ ಎಂಬ ಮಗುವಿನ ಜೊತೆಗಿದ್ದ ಟೀಮು ನವೀನ ಎಂಬ ಸಾಹಸಿಯ ಜೊತೆ ಸೇರಿದಾಗ ಯಾರದೋ ಒಬ್ಬರಿಗೆ ಸೇರಿದ ಟ್ರಕ್ಕು ಮತ್ತು ಮಾಲು ಅಚ್ಚರಿಯ ರೀತಿಯಲ್ಲಿ ನಾಶವಾಗದೇ ಉಳಿಯಿತು.ಇದು ನಮ್ಮ ದೇಶದ ಮಾದರಿ.ಪರಸ್ಪರ ಸಹಾಯ ಮತ್ತು ಸೇವೆ ಮಾಡುತ್ತಾ ಮುಂದುವರಿವುದರೆ ಎಲ್ಲಾ ಸಂಘರ್ಷವನ್ನು ಮೆಟ್ಟಿ ನಿಲ್ಲಬಹುದೆನ್ನುವುದಕ್ಕೆ ಈ ಘಟನೆಯು ಉತ್ತಮ ನಿದರ್ಶನ ವಾಗಿದೆ.
ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು
ಅನೀಸ್ ಎಂಬ ಮಗು ಭಾಗ್ಯವಂತ, ನವೀನ ಮತ್ತು MNG ಫೌಂಡೇಶನ್ ನವರು ಅಪತ್ಭಾಂಧವರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.