(www.vknews.com) : 16/08/2020 ಮೂಲರಪಟ್ಟಣದ ಆಚಾರಿಬೆಟ್ಟು ಎಂಬಲ್ಲಿ ಒಂದು ಗ್ರಹ ಪ್ರವೇಶ ಕಾರ್ಯಕ್ರಮಕ್ಕೆ ನನ್ನ ಸ್ನೇಹಿತರು ಕರೆದಿದ್ದರು.ಹಾಗೇ ಅಲ್ಲಿ ಹೋಗಿ ನೋಡಿದರೆ ನನಗೇ ಅಚ್ಚರಿಯಾಗಿತ್ತು.ಸುಮಾರು ಏಳೆಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಅಚ್ಚುಕಟ್ಟಾದ ಮನೆ ಎರಡು ವಿಧವೆಯರಿಗಾಗಿ ಉದ್ಘಾಟನೆ ಗೆ ಸಿದ್ದ ವಾಗಿತ್ತು. ಮಾನ್ಯ ಶಾಸಕರಾದ ರಾಜೇಶ್ ನಾಯಕ್ ರವರ ಮೂಲಕ ಮನೆಯನ್ನು ಹಸ್ತಾಂತರ ಮಾಡಲಾಯಿತು.ಆನಂತರ ಸೌಹಾರ್ದ ಕಾರ್ಯಕ್ರಮ ವೂ ಜರಗಿತು.ಕಾರ್ಯಕ್ರಮ ದಲ್ಲಿ ಮುಖ್ಯ ಮಂತ್ರಿ ದುರಂತ ಪರಿಹಾರ ನಿಧಿಗೆ ಚೆಕ್ ನ್ನು ಶಾಸಕರ ಮೂಲಕ ನೀಡಲಾಯಿತು.ಆ ಮೇಲೆ ಊರಿನ ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯವೂ ನಡೆಯಿತು.ಈ ಫೌಂಡೇಶನ್ ಕಳೆದ ವರ್ಷ ಕೂಡಾ ಒಂದು ಮನೆಯನ್ನು ಕಟ್ಟಿ ಹಸ್ತಾಂತರ ಮಾಡಿತ್ತು.ಊರಿನ ಬಡ ಕುಟುಂಬಗಳಿಗೆ ರೇಷನ್ ಸಾಮಾಗ್ರಿಗಳನ್ನು ಕೂಡ ಸಂಸ್ಥೆ ಕೊಡುತ್ತಾ ಬರುತ್ತಿದೆ. ವಿಶೇಷವೇನೆಂದರೆ ಈ ರೀತಿಯ ಅನೇಕ ಸೇವೆಯ ಕಾರ್ಯ ಗಳಲ್ಲಿ ಅನ್ಯ ಧರ್ಮಿಯರಿಗೂ ಸಹಾಯಹಸ್ತ ವನ್ನು ಸಂಸ್ಥೆ ನೀಡುತ್ತಿದೆ.
ಹೀಗೆ ಹತ್ತು ಹಲವು ಕಾರ್ಯಕ್ರಮ ಗಳ ಮೂಲಕ ಜನಮನ್ನಣೆ ಗೆ ಜಿ ಹೆಚ್ ಎಮ್ ಫೌಂಡೇಶನ್ ಪಾತ್ರವಾಗಿದೆ. ಸಂಸ್ಥೆ ಯ ಅಧ್ಯಕ್ಷರಾದ ಹಂಝ ಗುತ್ತು ಮತ್ತು ಮರ್ಹೂಮ್ ಹಸನ್ ಮುಸ್ಲಿಯಾರ್ ಸುಪುತ್ರ ಶರೀಫ್ ದುಬೈ ಹಾಗೂ ಎಲ್ಲಾ ಯುವ ಸದಸ್ಯರು ಇನ್ನಷ್ಟು ಸಾಧನೆಯ ಮೂಲಕ ಜನಪರ ಕೆಲಸ ಮಾಡುವಂತಾಗಲಿ.ಮುಂದೆ ಉನ್ನತ ಸಂಸ್ಥೆ ಯಾಗಿ ಬೆಳೆಯಲಿ ಎಂದು ಹಾರೈಸೋಣ.
ಮೌಲಾನಾ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.