ಇಡ್ಕಿದು(ವಿಶ್ವ ಕನ್ನಡಿಗ ನ್ಯೂಸ್): ರಾಜ್ಯದ ಎಲ್ಲಾ ಕಡೆಗಳಲ್ಲಿ ಪಂಚಾಯತ್ ಚುನಾವಣ ಪ್ರಚಾರದ ಕಾವು ಏರುತ್ತಿದಂತೆ ಇತ್ತಾ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಡಿಸೇಂಬರ್ 22 ರಂದು ನಡೆಯುವ ಚುನಾವಣೆಗೆ ಇಡ್ಕಿದು ಗ್ರಾಮ ಪಂಚಾಯತ್ 4 ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ಬೆಂಬಲಿತ ಹಿದುಳಿದ ವರ್ಗ ‘ಎ’ ವಿಭಾಗದಿಂದ ಅಬ್ದುಲ್ ನಾಸಿರ್ ಕೋಲ್ಪೆ, ಸಾಮಾನ್ಯ ಕ್ಷೇತ್ರದಿಂದ ಅಬ್ದುಲ್ ಲತೀಫ್ ದಲ್ಕಾಜೆ ಹಾಗೂ ಸಾಮಾನ್ಯ ಮಹಿಳಾ ವಿಭಾಗದದಿಂದ ಬೇಬಿ ಗೌಡ ಅವರ ನಾಮಪತ್ರಗಳ ಪರಿಶೀಲನೆ ಪ್ರಕ್ರಿಯೆ ಅಂತಿಮಗೊಂಡಿದೆ.
ನಾಲ್ಕನೇ ವಾರ್ಡಿಗೆ ಒಳಪಡುವ ಪ್ರದೇಶದ ಅಭಿವೃದ್ಧಿ ಕಾರ್ಯಗಳಾದ ರಸ್ತೆ ನಿರ್ಮಾಣ, ರಸ್ತೆ ಡಾಮರೀಕರಣ, ಕಾಂಕ್ರೀಟ್ ರಸ್ತೆ ನಿರ್ಮಾಣ, ಬೀದಿ ದೀಪ ಅಳವಡಿಕೆ, ಸಂಪರ್ಕ ರಸ್ತೆಗೆ ಸೇತುವೆ ನಿರ್ಮಾಣ, ಕುಡಿಯುವ ನೀರು ಯೋಜನೆಯಡಿಯಲ್ಲಿ ಟ್ಯಾಂಕ್ ನಿರ್ಮಾಣ, ಕಿಂಡಿ ಆಣೆಕಟ್ಟು ಹಾಗೂ ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಮುಂಚೂಣಿಯಲ್ಲಿ ನಿಂತು ಶ್ರಮಸಿದ ಯುವ ಉತ್ಸಾಯಿ ಅಭ್ಯರ್ಥಿಗಳಾದ ಅಬ್ದುಲ್ ನಾಸಿರ್ ಕೋಲ್ಪೆ ಹಾಗೂ ಅಬ್ದುಲ್ ಲತೀಫ್ ದಲ್ಕಾಜೆ ಅವರು ವಾರ್ಡಿನ ಸರ್ವ ಜನರ ಪ್ರೀತಿಗೆಪಾತ್ರರಾಗಿರುತ್ತಾರೆ.
ಪಂಚಾಯತ್ ಚುನಾವಣಾ ಹತ್ತಿರಬರುತ್ತಿದ್ದಂತೆ ವಾರ್ಡಿನ ನಾಡಿಮಿಡಿತ ಅರಿಯದ ಕೆಲವರು ಜನರ ನಡುವೆ ಅಪಪ್ರಚಾರದಿಂದ ಗೆಲ್ಲಬಹುದೆಂಬ ಮೋಹದಿಂದ ಸ್ಪರ್ಧೆಗೆ ಇಳಿದಿದ್ದಾರೆ ಆದರೆ ನಾವು ಪಕ್ಷದ ಹಿರಿಯರ ಆಶೀರ್ವಾದ, ಊರಿನ ಜನರ ಬೆಂಬಲದೊಂದಿಗೆ ಗೆಲುವು ನಮ್ಮದೇ ಎಂಬ ಆತ್ಮ ವಿಶ್ವಾಸವನ್ನು ವಿಶ್ವ ಕನ್ನಡಿಗ ನ್ಯೂಸ್ ನೊಂದಿಗೆ ಈ ಯುವ ಸ್ಪರ್ಧಾಳುಗಳು ವ್ಯಕ್ತಪಡಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.