(www.vknews.com) : ಕರ್ನಾಟಕ ವಿಧಾನ ಸಭೆಯಲ್ಲಿ ಅಂಗೀಕಾರ ಪಡೆದ ಗೋಹತ್ಯಾ ನಿಷೇಧ ಮಸೂದೆಯ ವಿರುದ್ದ ಅತ್ಯುಗ್ರ ಜನಾಂದೋಲನ ನಡೆಯುವ ಲಕ್ಷಣಗಳು ಗೋಚರಿಸುತ್ತಿದ್ದು ಆದರೆ ಯಾವುದೇ ಕಾರಣಕ್ಕೂ ಇದರ ನೇತೃತ್ವವನ್ನು ಮುಸ್ಲಿಮರು ವಹಿಸಿ ಕೊಳ್ಳಬಾರದು. ಅಭಿವೃದ್ದಿ ಏನೆಂದೇ ಗೊತ್ತಿಲ್ಲದ ,ಶ್ರಮ ಪಡದೇ ಮತ ಬಾಚಲು ಸುಲಭದಲ್ಲಿ ಅನುವು ಮಾಡಿ ಕೊಡುವ ಕೋಮು ದ್ರುವೀಕರಣ ಏನಿದೆಯೋ ಅದನ್ನೇ ಉಸಿರಾಗಿಸಿ ಅಧಿಕಾರ ಗಿಟ್ಟಿಸಿ ಕೊಂಡವರು ಈ ಮಸೂದೆಯನ್ನು ಮಂಡಿಸಿ ಪಾಸು ಮಾಡಿದ್ದು ನಿಜವಾಗಿಯೂ ಗೋ ಪ್ರೇಮದಿಂದೇನೂ ಅಲ್ಲ ಎಂಬುದು ಹಗಲು ಸೂರ್ಯನಷ್ಟೇ ಸತ್ಯ.
ಇತಿಹಾಸದಲ್ಲಿ ಗತಿಸಿ ಹೋದ ಕೆಲ ಘಟನೆಗಳನ್ನು ಮುಂದಿಟ್ಟು ಮುಸ್ಲಿಮರನ್ನು ಖಳನಾಯಕರನ್ನಾಗಿ ಚಿತ್ರೀಕರಿಸಿ ಇಸ್ಲಾಂ ಧರ್ಮವನ್ನು ಎದುರು ಹಾಕಿಕೊಂಡು ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಮುಗ್ದರನ್ನು ನಂಬಿಸಿ ಅವರನ್ನು ಮಂಕುಮರಳು ಮಾಡಿದರೇ ಮಾತ್ರ ಅಧಿಕಾರದ ಸಿಹಿಯನ್ನು ಶಾಸ್ವತವಾಗಿ ಸವಿಯಬಹುದು ಎಂಬ ನರಿಬುದ್ದಿ ತೋರಿಸಿ ದೇಶವನ್ನು ಅಪಾಯಕ್ಕೊಡ್ಡುತ್ತಿರುವ ದೇಶದ್ರೋಹಿಗಳನ್ನು ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕಾಗಿದೆ. ಯಾವುದೇ ವೈಜ್ಞಾನಿಕ,ಮಾನವೀಯ,ಧಾರ್ಮಿಕ ಹಿನ್ನಲೆ ಇಲ್ಲದ ಈ ಗೋಹತ್ಯಾ ನಿಷೇಧ ಎಂಬ ಪ್ರಹಸನದ ಸಂತ್ರಸ್ತರು ಖಂಡಿತ ಮುಸ್ಲಿಮರು ಅಲ್ಲವೇ ಅಲ್ಲ. ಈ ಮಸೂದೆಯ ಪ್ರಥಮ ಸಂತ್ರಸ್ತರು ಯಾರೆಂದರೆ ಅದು ಗೋವುಗಳೇ ಆಗಿವೆ!
ಎರಡನೇ ಸಂತ್ರಸ್ತರು ರೈತರು! ಆನಂತರ ಇಲ್ಲಿನ ದಲಿತ ,ಹಿಂದುಳಿದ,ಬಡ ಜನರಾಗಿದ್ದಾರೆ. ಆದ್ದರಿಂದ ತಾವು ಸಾಕುತ್ತಿರುವ ಗೋವುಗಳ ಸಮೇತ ಈ ಬಹು ಸಂಖ್ಯಾತ ಜನರು ಬೀದಿಗಿಳಿದರೆ ಖಂಡಿತ ಈ ಮಸೂದೆ ವಾಪಾಸು ಪಡೆಯಲು ಸರಕಾರಕ್ಕೆ ಅನಿವಾರ್ಯವಾಗುತ್ತದೆ. ಬದಲಾದ ಇಂದಿನ ಕಾಲದಲ್ಲಿ ಧರ್ಮಾಧರಿತ ರಾಜಕೀಯ ಸನ್ನಿವೇಶ ಜಾರಿಯಲ್ಲಿರುವಾಗ ಇಲ್ಲಿ ವಿರೋಧ ಪಕ್ಷಗಳ ಬಾಯಿ ಕಟ್ಟಿ ಹಾಕಲಾಗಿದೆ ಎಂಬುದನ್ನು ಜನ ಅರ್ಥ ಮಾಡಿಕೊಂಡು ಪಕ್ಷ ರಹಿತಹೋರಾಟಕ್ಕೆ ಧುಮುಕಬೇಕಾಗಿದೆ. ಇದರ ನಾಯಕತ್ವವನ್ನು ರೈತ ಮುಖಂಡರು ವಹಿಸಿ ಕೊಳ್ಳಬೇಕಾಗಿದೆ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.