(www.vknews.com) : ಈಗಾಗಲೇ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಸಿದ್ದ ಉಡುಪುಗಳು ಹಾಗೂ ವಸ್ತ್ರಗಳನ್ನು ವಿತರಣಾ ಕಾರ್ಯ ನಡೆಸುತ್ತಿರುವ ಟೀಮ್ ಬಿ-ಹ್ಯೂಮನ್ ಮಂಗಳೂರು ವತಿಯಿಂದ ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆ, ಚಿಂಗಾಣಿಬೆಟ್ಟು ಎಂಬಲ್ಲಿ ಅರ್ಹ ಬಡ ಕುಟುಂಬಗಳಿಗೆ ಹೊಸ ಸಿದ್ದ ಉಡುಪುಗಳ 10ನೇ ಹಂತದ ವಿತರಣೆ ಕಾರ್ಯ ನಡೆಯಿತು. ಮಹಿಳೆಯರ, ಪುರುಷರ, ಹೆಣ್ಣುಮಕ್ಕಳ ಮತ್ತು ಗಂಡುಮಕ್ಕಳ ಹೊಸ ವಿನ್ಯಾಸದ ರೆಡಿಮೇಡ್ ವಸ್ತ್ರಗಳನ್ನು ವಿತರಿಸಲಾಯಿತು.
ಈಗಾಗಲೇ ಟೀಮ್ ಬಿ-ಹ್ಯೂಮನ್ ಪುತ್ತೂರು ತಾಲೂಕಿನ ಕೆಮ್ಮಾರ, ಗಂಡಿಬಾಗಿಲು, ಮೊಟ್ಟೆತ್ತಡ್ಕ , ಕಲ್ಲೇಗ, ಸವಣೂರು ಮತ್ತು ಬೆಳ್ತಂಗಡಿ ತಾಲೂಕಿನ ಬಾಜಾರ್ ಬೈಲಮೇಲು, ಕನರಾಜೆ ತೆಕ್ಕಾರ್, ಬಾಜಾರ್ ಕ್ವಾಟ್ರಸ್ ಸಹಿತ ಹಲವು ಗ್ರಾಮಗಳಿಗೆ ತನ್ನ ವಸ್ತ್ರ ವಿತರಣೆ ಕಾರ್ಯ ಪೂರ್ಣಗೊಳಿಸಿ ಇಂದು 10ನೇ ಹಂತದ ವಿತರಣೆ ಕಾರ್ಯ ನಡೆಸಿದೆ.
ವಿತರಣಾ ಕಾರ್ಯವನ್ನು ಅಹ್ನಫ್ ಡೀಲ್ಸ್, ಸಿದ್ದೀಕ್ ಗೋಳಿಕಟ್ಟೆ (ಚಿದ್ದು), ಅಬ್ದುಲ್ ಖಾದರ್ ಪರ್ಲಡ್ಕ , ಹಾಶೀರ್ ಕರಾಯ ಮತ್ತು ನಜೀರ್ ರವರು ಬಟ್ಟೆ ವಿತರಿಸುವ ಮೂಲಕ ಚಾಲನೆಯನ್ನು ನೀಡಿದರು.
ವಿತರಣೆ ಕಾರ್ಯಕ್ರಮದಲ್ಲಿ ಟೀಮ್ ಬಿ-ಹ್ಯೂಮನ್ ಅಧ್ಯಕ್ಷರಾದ ಇಂತಿಯಾಜ್ ಪಾರ್ಲೆ, ಟೀಮ್ ಬಿ-ಹ್ಯೂಮನ್ ಸದಸ್ಯರಾದ ಅನ್ಸಾರ್ ಪರ್ಲಡ್ಕ, ಮುಝಮ್ಬಿಲ್ ಚಾಯ್ಸ್, ಆಸೀಫ್ ಐಡಿಯಾ, ನಿಸಾರ್ ಸಹಿತ ಹಲವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.