ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್)ತಾಲೂಕಿನ ಕುಂಬಿಗಾನಹಳ್ಳಿ (ಹೆಚ್.ಕ್ರಾಸ್) ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸಂಧ್ಯಾ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ಲೋಕೇಶ್ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಧ್ಯಾ ಮಾತ್ರ ನಾಮಪತ್ರ ಸಲ್ಲಿಸಿದರಿಂದ ಅವರನ್ನು ಚುನಾವಣಾಧಿಕಾರಿ ರಾಜೀವ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಜೆಡಿಎಸ್ ಪಕ್ಷದ ಲೋಕೇಶ್,ನಾಗರತ್ನಮ್ಮ ಹಾಗೂ ಜಯಮ್ಮ ಅವರು ನಾಮಪತ್ರ ಸಲ್ಲಿಸಿದರು ಚುನಾವಣಾಧಿಕಾರಿಗಳು ನಾಮಪತ್ರಗಳನ್ನು ಪರಿಶೀಲಿಸಿದ ಬಳಿಕ ಚುನಾವಣೆಯಲ್ಲಿ ಲೋಕೇಶ್ ಅವರು 18 ಮತಗಳು ಪಡೆದುಕೊಂಡು ಆಯ್ಕೆಯಾದರು ಅವರ ಪ್ರತಿಸ್ಪರ್ಧಿ ಜಯಮ್ಮ ಅವರಿಗೆ ಎರಡು ಮತಗಳು ಪಡೆದುಕೊಂಡರೆ ಮತ್ತೊಬ್ಬ ಪ್ರತಿಸ್ಪರ್ಧಿ ನಾಗರತ್ನಮ್ಮ ಅವರು ಸ್ವತಃ ಅವರ ಮತ ಹಾಕಿಕೊಳ್ಳದೆ ಬೇರೆಯವರೆಗೆ ಅವರ ಮತವನ್ನು ದಾನ ಮಾಡಿ ಸೋಲು ಅನುಭವಿಸಿದರು ಈ ಸಂದರ್ಭದಲ್ಲಿ ಪಿಡಿಓ ನಯನಾ ನಿಖತ್ ಆರಾ ಹಾಗೂ ಚುನಾವಣಾ ಶಾಖೆಯ ಸಾಧಿಕ್ಪಾಷ ಮತ್ತಿತರರು ಉಪಸ್ಥಿತರಿದ್ದರು.
ವಿಜಯೋತ್ಸವ: ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದ ವಶಕ್ಕೆ ಪಡೆದುಕೊಂಡ ಬಳಿಕ ಭೂ ಅಭಿವೃಧ್ಧಿ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಲಿ ನಿರ್ದೇಶಕ ಭೀಮೇಶ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್.ಕ್ರಾಸ್ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಕಾಳಿನಾಯಕನಹಳ್ಳಿ ಮಂಜಯ್ಯ,ಆರ್. ಸುರೇಶ್, ಹೆಚ್.ಕ್ರಾಸ್ ಅಂಬರೀಶ್, ಮಂಜುನಾಥ್, ಎಳ್ಳನೀರು ನಾಗರಾಜಪ್ಪ, ಜ್ಯೂಸ್ ಮುನೇಗೌಡ, ಹಾರಡಿ ಚಂದ್ರರಾಯಪ್ಪ, ದೇವೇನಹಳ್ಳಿ ಮುನಿಸ್ವಾಮಿಗೌಡ, ಡಿ.ಸಿ.ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೆ.ಮೀಂ ಪಾಷ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.