ಉಪ್ಪಿನಂಗಡಿ (www.vknews.com) : ನಾವು ತಿನ್ನುವ ಅನ್ನಾಹಾರಗಳು ಅಲ್ಲಾಹನು ನೀಡುವ ಅಮೂಲ್ಯ ಅನುಗ್ರವಾಗಿದೆ. ಮಾನವನಿಗೆ ಸ್ವತಃ ಒಂದೇ ಒಂದು ಅಕ್ಕಿಕಾಳನ್ನು ಕೂಡಾ ಸೃಷ್ಟಿಸಲು ಸಾಧ್ಯವಿಲ್ಲ. ಅಂತದರಲ್ಲಿ ಇಡೀ ಜಗತ್ತಿನ ಮನುಷ್ಯನಿಗೆ ಮತ್ತು ಇತರ ಜಂತು ಪ್ರಾಣಿಗಳಿಗೆ ಬೇಕಾಗುವಷ್ಟು ಆಹಾರ ಪದಾರ್ಥಗಳನ್ನು ಭೂಮಿಯಲ್ಲಿ ಬೆಳೆಯಲು ಅವಕಾಶ ನೀಡಿದ ದೇವನಿಗೆ ಕೃತಜ್ಞತೆ ಸಲ್ಲಿಸ ಬೇಕಾದುದು ನಮ್ಮ ಕರ್ತವ್ಯವಾಗಿದೆ. ಊಟದ ತಟ್ಟೆಯಿಂದ ಒಂದು ಅನ್ನದ ಕಾಳು ಕೆಳಗೆ ಬಿದ್ದರೂ ಅದನ್ನು ಹೆಕ್ಕಿ ತೆಗೆದು ಉಪಯೋಗಿಸ ಬೇಕೆಂದು ಪ್ರವಾದಿ ಸ ಅ ರವರು ಆದೇಶ ನೀಡಿದ್ದೇ ಅಲ್ಲದೇ ಆಹಾರವನ್ನು ಪೋಲು ಮಾಡುವವರನ್ನು ಅಲ್ಲಾಹನು ಇಷ್ಟ ಪಡುವುದಿಲ್ಲ ಎಂಬುದಾಗಿ ಪವಿತ್ರ ಕುರಾನಿನಲ್ಲಿ ಸ್ಪಷ್ಡಪಡಿಸಲಾಗಿದೆ.
ಆದ್ದರಿಂದ ಪ್ರತೀ ಮಹಿಳೆಯರು ಮನೆಯಲ್ಲಿ ದೈನಂದಿನ ಮನೆಮಂದಿಗೆ ಬೇಕಾಗುವಷ್ಟು ಮಾತ್ರ ಆಹಾರ ಸಿದ್ದಪಡಿಸ ಬೇಕು. ಅನಗತ್ಯವಾಗಿ ಸಿದ್ದಪಡಿಸಿ ಅದನ್ನು ಕೆಲವಷ್ಟು ದಿನ ಪ್ರಿಡ್ಜ್ ನಲ್ಲಿ ಇಟ್ಟು ನಂತರ ಬಿಸಾಕುವುದು ದೊಡ್ಡ ಅಪರಾಧವಾಗಿದೆ ಎಂದು ಉಸ್ತಾದ್ ಎಸ್ ಬಿ ದಾರಿಮಿ ಅಭಿಪ್ರಾಯಪಟ್ಟಿದ್ದಾರೆ. ಅವರು ಉಪ್ಪಿನಂಗಡಿಯ ಕುದ್ಲೂರ್ ಎಂಬಲ್ಲಿ ನೂರಾನಿಯ್ಯ ಮಸೀದಿ ಮತ್ತು ಯೆಂಗ್ ಮೆನ್ಸ್ ಆಶ್ರಯದಲ್ಲಿ ನಡೆದ ಎರಡು ದಿನಗಳ ಧಾರ್ಮಿಕ ತರಗತಿಯ ದ್ವಿತೀಯ ದಿನ ಭಾಗವಹಿಸಿ ಮಾತಾನಾಡಿದರು.
ಯುವಕರು ಸೋಷಿಯಲ್ ಮೀಡಿಯಾದ ಸಣ್ಣಪುಟ್ಡ ಕ್ಲಿಪ್ ಗಳನ್ನು ನೋಡಿ ಪಾರಂಪರ್ಯವಾಗಿ ನಡೆದು ಬಂದ ನಿರುಪದ್ರವಿ ನಂಬಿಕೆಗಳನ್ನು ಪ್ರಶ್ನಿಸಲು ಶುರು ಮಾಡಿದರೆ ಅದು ನಾಸ್ತಿಕ ವಾದಕ್ಕೆ ರಹದಾರಿ ಒದಗಿಸುತ್ತದೆ ಎಂದು ಅಭಿಪ್ರಾಯ ಪಟ್ಟರಲ್ಲದೇ ಜಗತ್ತಿನ ನಿಗೂಡ ರಹಸ್ಯಗಳ ಎಳ್ಳಷ್ಟು ಜ್ಞಾನ ಮಾನವನಿಗೆ ನೀಡಲಾಗಿಲ್ಲ ಎಂದು ತಿಳಿಸಿದರು.
ಪ್ರಥಮ ದಿನದ ಮತ ಪ್ರವಚನವನ್ನು ಉಸ್ತಾದ್ ಹಾಶಿರ್ ಅಲ್ ಹಾಮಿದಿ ಪರ್ಲಡ್ಕ ನಡೆಸಿ ಕೊಟ್ಟರು. ಉಪ್ಪಿನಂಗಡಿ ಖತೀಬ್ ಉಸ್ತಾದ್ ನಝೀರ್ ಅಝ್ಹರಿ ಉದ್ಘಾಟಿಸಿದರು. ಸ್ಥಳೀಯ ಖತೀಬ್ ಅರ್ಶದ್ ಯಮಾನಿ ಮತ್ತು ಕರಾವಳಿ ಹಮೀದ್ ಸ್ವಾಗತಿಸಿದರು. ಮಸೀದಿ ಅದ್ಯಕ್ಷ ಯೂಸುಪ್ ಹಾಜಿ ನ್ಯಾಷನಲ್ ಅದ್ಯಕ್ಷತೆ ವಹಿಸಿದ್ದರು. ಹಿರಿಯರಾದ ಇಬ್ರಾಹಿಂ ಹಾಜಿ ನ್ಯೂ ಮಂಝಿಲ್,ಹೈದ್ರೋಸ್ ಹಾಜಿ ನ್ಯಾಶನಲ್ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.