ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ದಿನವೂ ನಮ್ಮನ್ನು ಅಚ್ಚರಿ ಗೊಳಿಸುತ್ತದೆ ಈ ಉತ್ತರ ಕರ್ನಾಟಕ! ಪ್ರತಿ ಜಿಲ್ಲೆಗಳಲ್ಲೂ ಸಾವಿರಾರು ಹಳ್ಳಿಗಳು, ಪ್ರತಿ ಹಳ್ಳಿಗಳಲ್ಲೂ ಬಗೆಬಗೆಯ ಧಾರ್ಮಿಕ ಆಚರಣೆಗಳು. ಹಲವು ರೀತಿಯ ಕಂದಾಚಾರ, ಮೂಢನಂಬಿಕೆಗಳಿಗೆ ಬಲಿಬಿದ್ದ ಮುಗ್ಧರು! ಒಟ್ಟಿನಲ್ಲಿ ಧಾರ್ಮಿಕವಾಗಿ ತೀರಾ ಹಿಂದುಳಿದಿರುವ ಈ ಪ್ರದೇಶಗಳಲ್ಲಿ ನಮಗೆ ಮಾಡಲಿಕ್ಕಿರುವ ಕೆಲಸ ಅಷ್ಟಿಷ್ಟಲ್ಲ!
ಇಲ್ಲಿನ ಹಳ್ಳಿಗಳಿಗೆ ಅವರ ಸೇವೆಗಾಗಿ ಹಲವು ಸಂಸ್ಥೆಗಳ ಜೊತೆಗೆ ಈಗ ಮಸ್ದರ್ ಕೂಡ ಇಳಿದಿದೆ. ರಬೀವುಲ್ ಅವ್ವಲ್ ತಿಂಗಳಲ್ಲಿ ಆರಂಭವಾದ ನಮ್ಮ ಮಸ್ದರ್ ಈಗ ಆರು ತಿಂಗಳ ಹಸುಗೂಸು! ಆದರೆ, ಅಲ್ ಹಂದುಲಿಲ್ಲಾಹ್.. 28 ಮದ್ರಸಾಗಳು, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಎರಡು ತದ್ರೀಸ್ (ಶರೀಅತ್ ಕಾಲೇಜು), ಕೊಪ್ಪಳ ಹಾಗೂ ಗಂಗಾವತಿ ಪಟ್ಟಣದಲ್ಲಿ ಎರಡು ತಹ್ಫೀಝುಲ್ ಖುರ್ಆನ್ ಕಾಲೇಜುಗಳು ಈಗಾಗಲೇ ಆರಂಭಗೊಂಡಿದೆ. ಹೂವಿನ ಹಡಗಲಿ ಹಾಗೂ ಕೊಪ್ಪಳ ಪಟ್ಟಣದಲ್ಲಿ ನಮಗೆ ಲಭಿಸಿರುವ ವಿಶಾಲವಾದ ಜಾಗದಲ್ಲಿ ಸಂಸ್ಥೆಯ ಪ್ರಧಾನ ಕಟ್ಟಡಗಳಿಗೆ ಗೌರವಾಧ್ಯಕ್ಷ ಖುರ್ರತುಸ್ಸಾದಾತ್ ರವರ ಹಸ್ತರತ್ನಗಳ ಮೂಲಕ ಅಡಿಗಲ್ಲು ಹಾಕಲಾಗಿದೆ.
ರಂಝಾನ್ ಬಳಿಕ ಕಾಮಗಾರಿ ಆರಂಭಿಸಬೇಕಿದೆ. ಯಲಬುರ್ಗಾ ತಾಲೂಕಿನ ಕುಡಗುಂಟಿಯಲ್ಲಿ ಮಸ್ದರ್ ಮಸೀದಿಯೊಂದರ ಕೆಲಸ ಪ್ರಗತಿಯಲ್ಲಿದೆ. ಮೂವತ್ತು ಉಸ್ತಾದ್ಗಳು ಉತ್ತರ ಕರ್ನಾಟಕದಲ್ಲಿ ಮಸ್ದರ್ ಸೇವೆಯಲ್ಲಿ ಸಕ್ರೀಯರಾಗಿದ್ದಾರೆ.
4 ಸಂಸ್ಥೆಗಳು, 28 ಮದ್ರಸಾಗಳು, ಮೂವತ್ತು ಖಾದಿಂಗಳುಳ್ಳ ನಮ್ಮ ಸಂಸ್ಥೆಯ ತಿಂಗಳ ಖರ್ಚು ಈಗಾಗಲೇ ನಾಲ್ಕೂವರೆ ಲಕ್ಷ ದಾಟುತ್ತಿದೆ. ಸಹೃದಯಿಗಳ ಸಹಾಯಹಸ್ತ ಮಾತ್ರವೇ ಈಗಿರುವ ಆದಾಯ ಮಾರ್ಗ. ಪವಿತ್ರ ರಂಝಾನ್ ತಿಂಗಳಲ್ಲಿ ಹಲವಾರು ಒಳ್ಳೆಯ ಮನಸ್ಸುಗಳು ನಮ್ಮೊಂದಿಗೆ ಸಹಕರಿಸಿದೆ. ಅವರಿಗೆ ಅಲ್ಲಾಹು ಧಾರಾಳ ಖೈರ್ ನೀಡಲಿ – ಆಮೀನ್. ಈ ಸಂದಿಗ್ಧ ಸಂದರ್ಭದಲ್ಲೂ ನಮ್ಮೊಂದಿಗೆ ಕೈಜೋಡಿಸಲಿಚ್ಛಿಸುವ ಸಹೃದಯಿಗಳು ಸಂಪರ್ಕಿಸಬಹುದಾಗಿದೆ.
ಪವಿತ್ರ ರಂಝಾನ್ ತಿಂಗಳಲ್ಲಿ ನೀವು ನೀಡುವ ಸ್ವದಖಾ ಅಲ್ಲಾಹು ಖಬೂಲ್ ಮಾಡಲಿ-ಆಮೀನ್
📲 +91 9164630384
ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ (ಪ್ರ.ಕಾರ್ಯದರ್ಶಿ: ಮಸ್ದರ್ ಎಜ್ಯು ಆಂಡ್ ಚಾರಿಟಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.