ದೇಲಂಪಾಡಿ (www.vknews.com) : ಕೇರಳ-ಕರ್ನಾಟಕದ ಗಡಿ ಪ್ರದೇಶವಾದ ಪಂಚೋಡಿಯಲ್ಲಿ ಕಾರ್ಯಾಚರಿಸುತ್ತಿರುವ ತಣಲ್ ಕೂಟ್ ವಾಟ್ಸಪ್ ಗ್ರೂಪ್ ವತಿಯಿಂದ #SAVE LAKSHADEEP# (ಸೇವ್ ಲಕ್ಷ ದ್ವೀಪ್) ಕಾರ್ಯಕ್ರಮ ನಡೆಯಿತು. ಲಕ್ಷದ್ವೀಪದಲ್ಲಿ ನಡೆಯುವ ಜನವಿರೋಧಿ ನೀತಿ ಮತ್ತು ದಬ್ಬಾಳಿಕೆಯ ವಿರುದ್ದ ಪ್ರತಿಭಟಣೆ ನಡೆಸುತ್ತಾ ಈ ಲಾಕ್’ಡೌನ್ ಸಮಯದಲ್ಲಿ ಕೂಡ ಹಲವು ಜನರು ತಮ್ಮ ತಮ್ಮ ಮನೆಗಳಲ್ಲಿದ್ದುಕೊಂಡೇ ಪೋಸ್ಟರ್ ಪ್ರದರ್ಶನ ಮಾಡಿದರು.
ಎಂಬ ಹ್ಯಾಷ್ ಟೇಗ್ ಹೊಂದಿದ ಹಲವಾರು ಬಿತ್ತಿಪತ್ರಗಳನ್ನು ಗ್ರೂಪಿನ ಸದಸ್ಯರು ತಮ್ಮ ಮನೆಗಳಲ್ಲಿ ಪ್ರದರ್ಶಿಸಿ ಲಕ್ಷದೀಪದ ಜನರೊಂದಿಗೆ ತಮ್ಮ ಬೆಂಬಲವನ್ನು ಸೂಚಿಸಿದರು.
ಈ ಮೂಲಕ ಇಂತಹಾ ಜನವಿರೋಧಿ ನೀತಿಯ ವಿರುದ್ದ ನಾವೆಲ್ಲರೂ ಜಾತಿ ಮತ ಭೇದವಿಲ್ಲದೆ ಹೆಗಲಿಗೆ ಹೆಗಲನ್ನು ಕೊಟ್ಟು ಫ್ಯಾಸಿಸ್ಟ್ ಶಕ್ತಿಗಳನ್ನು ಹೊಡೆದೋಡಿಸುವ ಬಗ್ಗೆ ತಣಲ್ ಕೂಟ್ ಪಂಚೋಡಿ ವಾಟ್ಸಪ್ ಗ್ರೂಪ್, ಉತ್ತಮ ಸಂದೇಶವನ್ನು ನೀಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.