ಶ್ರೀ ಡಿ.ಎಸ.ಅರುಣರಿಂದ ಸರಕಾರಿ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ.
(ವಿಶ್ವ ಕನ್ನಡಿಗ ನ್ಯೂಸ್),ಶಿವಮೊಗ್ಗ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾಪೂಜಿನಗರ, ಶಿವಮೊಗ್ಗ ಇದರ ಮಕ್ಕಳಿಗೆ ಟ್ಯಾಬ್ ಪಿಸಿಯನ್ನು ವಿತರಣೆ ಮಾಡಿದ ಕಾಲೇಜಿನಕಾರ್ಯಾಧ್ಯಕ್ಷರಾದ ಶ್ರೀ ಡಿ.ಎಸ್.ಅರುಣ್ ಅವರು ಮಾತನಾಡಿ ಇಂದು ಸರಕಾರ ಎಲ್ಲಾ ಸರಕಾರಿ ಶಾಲೆಗಳ ಪದವಿ ವಿದ್ಯಾರ್ಥಿಗಳಿಗೆ ಟ್ಯಾಬ್ ಪಿಸಿಯನ್ನು ವಿತರಣೆ ಮಾಡುತ್ತಿದೆ. ಒಟ್ಟು 1.50.000 ಟ್ಯಾಬ್ ಪಿಸಿಯನ್ನು ಪ್ರಥಮ ಪದವಿಯ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ವಿದ್ಯಾರ್ಥಿಗಳು ದುರುಪಯೋಗ ಪಡಿಸಿಕೊಳ್ಳದೆ ಸದುಪಯೋಗಪಡಿಸಿಕೊಂಡು ಒಳ್ಳೇಯ ಅಂಕಗಳನ್ನು ತೆಗೆದು ಉತ್ತೀರ್ಣರಾಗಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಧನಂಜಯ.ಬಿ.ಆರ್ ರವರು ಮಾತನಾಡಿ ವಿದ್ಯಾರ್ಥಿಗಳು ಈ ಟ್ಯಾಬ್ ಪಿಸಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಮತ್ತು ನಾವು ಕೇಳಿದಾಗ ಅದನ್ನು ತೋರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಡಿಸಿ ಕಮಿಟಿಯ ಸದಸ್ಯರಾದ ಸುರೇಖ ಮುರುಳೀದರ್, ಆದರ್ಶ, ಶಶಿಧರ್, ವಿಜಯೇಂದ್ರ, ಮುಂತಾದವರಿದ್ದರು. ಡಾ. ಚನ್ನೇಶ್, ಹೊನ್ನಾಳಿಯವರು ಎಲ್ಲರನ್ನು ಸ್ವಾಗತಿಸಿದರೆ, ಶ್ರೀಮತಿ ರಾಜಶ್ರೀಯವರು ಎಲ್ಲರನ್ನು ವಂದಿಸಿ, ಕುಮಾರಿ ಅನುಷ.ಬಿ.ಎನ್. ಪ್ರಾರ್ಥನೆ ಮಾಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.