ರಾಯಲ್ಪಾಡು (ವಿಶ್ವಕನ್ನಡಿಗ ನ್ಯೂಸ್):- ಪರಿಸರ ಪ್ರಜ್ಞೆ ಎಲ್ಲರಲ್ಲೂ ಒಡಮೂಡಲಿ , ಪರಿಸರ ಇಂದಿನ ಮತ್ತು ನಾಳಿನ ಜನಾಂಗಕ್ಕೆ ಸಹ್ಯವಾಗಿ ಉಳಿಯಲಿ ಎಂದು ಆಶಿಸೋಣವೆಂದು ಕಾರ್ಯದರ್ಶಿ ವೈ.ಆರ್.ಶ್ರೀನಾಥಚಾರ್ ಅಭಿಪ್ರಾಯಪಟ್ಟರು.
ಗನಿಬಂಡೆಯ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಹಸಿರುಹೊನ್ನು ಬಳಗದವತಿಯಿಂದ ನಡೆದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪರಿಸರದಲ್ಲಿ ನಾವು ಉಸಿರಾಡಲು ಶುದ್ಧಗಾಳಿ ಇಲ್ಲದೆ ರಾಸಾಯನಿಕ ವಿಷ ಮಿಶ್ರಿತ ಗಾಳಿಯನ್ನು ಉಸಿರಾಡುವಂತಾಗಿದೆ.
ಇವುಗಳನ್ನು ತಡೆಗಟ್ಟಲು ಗ್ರಾಮಗಳಲ್ಲಿ ಮನೆಗಳ ಸುತ್ತಮುತ್ತ ಮಗುವಿಗೊಂದು ಸಸಿಯಂತೆ ನೆಟ್ಟು , ಮರಗಳಾಗಿಸಿ , ವನವಾಗಿಸುವುದರೊಂದಿಗೆ ಮುಂದಿನ ಪೀಳಿಗೆಗಾಗಿ ಶುದ್ಧವಾದ ಗಾಳಿಯನ್ನು ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವೆಂದರು ಪರಿಸರವನ್ನು ಉಳಿಸಿಲು ಕೇವಲ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸದರೆ ಸಾಲದು. ಇವುಗಳ ಜೊತೆಗೆ ನಾಗರೀಕರು ಕೈಜೋಡಿಸಬೇಕಾಗಿದೆ ಎಂದರು. ಈ ನಿಟ್ಟಿನಲ್ಲಿ ನಮ್ಮೆಲ್ಲರ ಬದ್ದತೆ ಬಲವಾಗಲಿ ಏಕೆಂದರೆ ಇದು ಭೂಮಿಯ ಮೇಲೆ ಜೀವಿಗಳ ಅಳಿವು ಉಳಿವು ಪಶಂಖಾಗಿದೆ ಎಂದರು.
ಗ್ರಾಪಂ ಸದಸ್ಯ ಮಲ್ಲಿಕಾರ್ಜುನ , ಹಸಿರುಹೊನ್ನು ಬಳಗದ ಸದಸ್ಯರಾದ ಟಿ.ಕೆ.ನರಸಿಂಹಪ್ಪ , ಹರೀಶ್ , ರಾಘವಾಚಾರ್ ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.