ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಲಕ್ಕೂರು, ಜಯಮಂಗಲ, ಬಾಳಿಗಾನಹಳ್ಳಿ ಹಾಗೂ ಚಿಕ್ಕತಿರುಪತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದು ಮಾಲೂರಿನ ಶಾಸಕರಾದ ಕೆ.ವೈ.ನಂಜೇಗೌಡ ರವರ ನೇತೃತ್ವದಲ್ಲಿ “ಆಹಾರದ ಕಿಟ್ ವಿತರಣೆ” ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಲಕ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಲೂರು ಶಾಸಕರಾದ ಕೆ.ವೈ.ನಂಜೇಗೌಡ ರವರು ಮಾತನಾಡಿ “ಕಾಂಗ್ರೇಸ್ ಪಕ್ಷದ ವತಿಯಿಂದ ಕರೋನಾ ಸಂಕಷ್ಟದ ಸಂದರ್ಭದಲ್ಲಿ ತಾಲ್ಲೂಕಿನ ಬಡಜನರ ಜೀವನಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ , ಮಾಲೂರು ತಾಲ್ಲೂಕಿನಾದ್ಯಾಂತ ಬಡವರ ಸೇವೆ ಮಾಡುವ, ಅವರ ಭಾವನಾತ್ಮಕತೆಗೆ ಸಹಕರಿಸುವ ಆಶಯದಿಂದ ಆಹಾರ ಕಿಟ್ ಗಳನ್ನು ವಿತರಿಸುವ ಕಾರ್ಯ ಮಾಡುತ್ತಿದ್ದೇವೆ. ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಸದಾ ರೋಗಿಗಳ ಯೋಗಕ್ಷೇಮ ವಿಚಾರಿಸಿದ ಕರೋನಾ ವಾರಿಯರ್ಸ್ ಗೆ ಸನ್ಮಾನ ಮಾಡುವ ಮೂಲಕ ಹಾಗೂ ಅವರಿಗೆ ಆಹಾರದ ಕಿಟ್ ವಿತರಣೆ ಮಾಡುವ ಕಾರ್ಯವನ್ನು ಮಾಡಿದ್ದೀವಿ, 450 ಟನ್ ಗಳಷ್ಟು 60 ಸಾವಿರ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿ ಕಷ್ಟಕ್ಕೆ ನಮ್ಮ ಅಳಿಲು ಸೇವೆ ನಿರಂತರ” ಎಂದರು.
ಇದೇ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ಲಕ್ಷ್ಮೀನಾರಾಯಣ್ (ಲಚ್ಚಿ) ರವರು ಮಾತನಾಡಿ “ಕಾಂಗ್ರೇಸ್ ಪಕ್ಷ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಶಾಸಕರಾದ ಕೆ.ವೈ ನಂಜೇಗೌಡ ರವರ ನೇತೃತ್ವದಲ್ಲಿ ಬಹಳ ಉತ್ತಮ ಕಾರ್ಯಗಳನ್ನು ತಾಲ್ಲೂಕಿನ ಆಡಳಿತ ಒಳಗೊಡಂತೆ ಅಧಿಕಾರಿಗಳ ಜೊತೆಗೆ ನಿರಂತರ ಸಂಪರ್ಕ, ಸಭೆಗಳ ಮೂಲಕ ಕರೋನಾ ಹಿಮ್ಮೆಡಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ ವಿಚಾರ, ಹಾಗೇ ತಾಲ್ಲೂಕಿನ ಬಡ ಜನರ ಕಷ್ಟಕ್ಕೆ ಆಸರೆಯಾಗಿ ಇಂದು ಆಹಾರದ ಕಿಟ್ ಗಳನ್ನು ವಿತರಿಸಿರುತ್ತಿರುವುದು ಅಭಿನಂದನೀಯ” ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೋಡಿಹಳ್ಳಿ ಮಂಜುನಾಥ್, ಗೋವರ್ಧನ್ ರೆಡ್ಡಿ, ಅಶ್ವಥ್ ರೆಡ್ಡಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಮುನಿರತ್ನಮ್ಮ ಸಂದೇಗೌಡ, ಮುಖಂಡರಾದ ವಿಜಯನರಸಿಂಹ, ಉಮೇಶ್, ಕೋಡಿಹಳ್ಳಿ ಕೃಷ್ಣರೆಡ್ಡಿ, ಯುವ ಕಾಂಗ್ರೇಸ್ ಮುಖಂಡರಾದ ರಾಜೇಶ್.ಎಲ್.ವಿ, ಅಚ್ಚಪ್ಪ, ನಾರಾಯಣಸ್ವಾಮಿ, ಕಬೀರ್ ಅಹ್ಮದ್, ಕಿಟ್ಟಪ್ಪ, ಮೋಹನ್ ಸಿಂಗ್, ಸತೀಶ್, ನಜೀರ್ ಅಹ್ಮದ್, ಮಂಜುಶ್ರೀ ಸ್ಟೂಡಿಯೋ ಸುಬ್ಬು, ಮುನಿಶಾಮಿ, ಪಕ್ಷದ ಮುಖಂಡರು, ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.