ಅಫ್ಝಲ್ಪುರ್(ವಿಶ್ವಕನ್ನಡಿಗ ನ್ಯೂಸ್): ಕಲಬುರಗಿ ಜಿಲ್ಲೆಯ ಅಫ್ಝಲ್ಪುರ ತಾಲೂಕಿನ ಮಣ್ಣೂರು ಗ್ರಾಮದ ಕೊಳಚೆ ಪ್ರದೇಶದಲ್ಲಿ ವಾಸಿಸುತ್ತಿರುವ ನಬೀಸಾಬ್ ಜಮಾದಾರ್ ರವರ ಸುಪುತ್ರ ಮತೀನ್ ಜಮಾದಾರ್ ಎಂಬ ಹುಡುಗ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600-600 ಅಂಕವನ್ನು ಪಡೆದಿದ್ದು ಭವಿಷ್ಯದಲ್ಲಿ IAS ಪದವಿ ಪಡೆಯುವ ಕನಸಿನಲ್ಲಿದ್ದಾನೆ.
ಇಂದು ಆತನ ಮನೆಗೆ ಭೇಟಿ ಕೊಟ್ಟ ಮಸ್ದರ್ ಎಜ್ಯು ಆಂಡ್ ಚಾರಿಟಿ ಸಾರಥಿಗಳು ಬಾಲಕನ ಸಾಧನೆಯನ್ನು ಅಭಿನಂದಿಸಿ IAS ಕನಸು ನನಸಾಗಿಸಲು ಸಂಪೂರ್ಣ ಖರ್ಚು ವೆಚ್ಚವನ್ನು ಭರಿಸುವುದಾಗಿ ತಿಳಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ, ಕಾರ್ಯದರ್ಶಿಗಳಾದ ಸಿನಾನ್ ಸಖಾಫಿ, ಹಾಫಿಝ್ ಅನಸ್ ಅಹ್ಸನಿ, ತಾಜುದ್ದೀನ್ ಕೆರೆಬಳಿ, ಶಾಹಿದ್ ಜೌಹರಿ, ಅಬ್ದುರ್ರಹ್ಮಾನ್ ಹಾಗೂ ಮಣ್ಣೂರು ಅಂಜುಮಾನ್ ಅಧ್ಯಕ್ಷ ಮಹಮೂದ್ ಸಾಹೇಬ್ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.