1.
ಕೊರತೆಗಳ ನೆನೆದು ಕೊರಗದಿರು ದೇವನ ಅನುಗ್ರಹದ ಮುಂದೆ ಅವೆಲ್ಲವೂ ಶೂನ್ಯವೆ ರಹ್ಮತ್ ಇದನ್ನರಿತು ಮುನ್ನಡೆ ಜಯ ನಿನ್ನದೆ
2. ನೋಯಿಸಲೆಂದೇ ನುಡಿವ ಕೆಲವರ ಚುಚ್ಚುಮಾತುಗಳಿಗೆ ಕೊರಗುವುದು ವ್ಯರ್ಥ ಪ್ರೀತಿಸುವವರ ಪ್ರೀತಿಯಲ್ಲಿ ಮುಳುಗಿದರೆ ರಹ್ಮತ್ ಮನಸ್ಸಿನ ನೋವೆಲ್ಲ ಇತ್ಯರ್ಥ
3. ಕಾಣದ ನಾಳೆಗಾಗಿ ಚಿಂತಿಸುತ್ತಾ ಈ ದಿನವ ಕೊಲ್ಲುವುದೇಕೆ?ಬದುಕೆಂಬ ಪುಸ್ತಕದಲ್ಲಿ ಸಾವಿರಾರು ಕನಸಿನ ರೇಖೆ ರಹ್ಮತ್ ಪ್ರತಿ ಪುಟದ ಬರಹವು ಅಲ್ಲಾಹನ ಎಣಿಕೆ
ಕವಯತ್ರಿಯ ಪರಿಚಯ: ನನ್ನ ಹೆಸರು ರಹ್ಮತ್; ಗೃಹಿಣಿ. ಮಂಜಿನ ನಗರಿ ಮಡಿಕೇರಿಯಿಂದ ಸ್ವಲ್ಪ ದೂರ ಸಾಗಿದರೆ ಸಿಗುವ ಚೆಂದದ ಊರು ಚೆಟ್ಟಳ್ಳಿಯೇ ನನ್ನ ಹುಟ್ಟೂರು. ಪತಿಯ ಊರು ಪುತ್ತೂರು ಆದಕಾರಣ ಪುತ್ತೂರಿನಲ್ಲೀಗ ನನ್ನ ವಾಸ. ನನಗೆ ಓದು ಬರಹವೆಂದರೆ ಸಣ್ಣದಿರುವಾಗಲೇ ಬಹಳ ಆಸಕ್ತಿ. ಮದುವೆಯ ನಂತರವೂ ಅದನ್ನು ಮುಂದುವರಿಸಿ ಕೊಂಡು ಬಂದಿರುವೆನು. ನಾನು ಅನೇಕ ಕವನ, ಲೇಖನಗಳನ್ನು ಬರೆದಿರುವೆ. ಆದರೆ ಈ ಅಬಾಬಿ ಎಂಬ ಕಾವ್ಯರೂಪಕವನ್ನು ನಾನು ಕೇಳಿಯೇ ಇರಲಿಲ್ಲ. ನಮಗೆ ನಾವೇ ಜ್ಞಾನ ತುಂಬುವಂತೆ ಬುದ್ದಿ ಹೇಳುವಂತೆ, ಸಂತೈಸುವಂತೆ ನಮ್ಮದೇ ಅಂಕಿತನಾಮ ವನ್ನು ಬಳಸಿ ರಚಿಸುವ ಈ ಅಬಾಬಿ ರಚನೆಯು ಬಹಳ ಕುತೂಹಲಕಾರಿ ಯಾಗಿದೆ.ಹಾಗೂ “ಅಬಾಬಿ” ಬರೆಯಲೂ ಇನ್ನೊಬ್ಬರು ಬರೆದುದನ್ನು ಓದಲು ಏನೋ ಒಂದು ಹುಮ್ಮಸ್ಸು.. ಇದೆ.
✒️ ರಹ್ಮತ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.