(www.vknews.in) ;
ಆಕ್ಸಿಜನ್ ಇಲ್ಲದೆ ಬೀದಿ ಹೆಣವಾದವರು ಜಾತಿ ಭೇದವಿಲ್ಲದೆ ಹಸಿವು ನೀಗಿಸಿದವರು ಯಾರದೋ ಶವಕ್ಕೆ ಹೆಗಲಾಗಿ ಅಂತ್ಯಸಂಸ್ಕರಿಸಿದ ಮುಸ್ಲಿಂ ಸಹೋದರರು.. ಇವರೆಲ್ಲರ ಮರೆತರು ಕೊರೋನಾ ಸ್ವಲ್ಪ ಮರೆಯಾದಾಗ ಪುನಃ ಕಾದಾಟಕ್ಕೆ ಸಜ್ಜಾದರು..
ಸಾರಾಯಿ ಕುಡಿದು ಪತ್ನಿಯ ಹೊಡೆದು ಸಾಯಿಸಿದರೂ ಹಗಲಿನಲ್ಲೇ ಹೆಣ್ಣುಮಕ್ಕಳ ಅತ್ಯಾಚಾರವಾದರೂ ವರದಕ್ಷಿಣೆಯ ಹಿಂಸೆ ತಾಳದೆ ಮಹಿಳೆ ಆತ್ಮಹತ್ಯೆಗೈಯುತ್ತಿದ್ದರೂ ಬೀದಿಗಿಳಿದು ಯಾರೂ ಪ್ರತಿಭಟಿಸುವುದಿಲ್ಲ ಅವರ ಪ್ರತಿರೋಧ ಹೆಣ್ಣು ಮಕ್ಕಳ ಹಿಜಾಬಿಗಾಗಿ ! ಎಂತ ವಿಪರ್ಯಾಸ…
ಜ್ಞಾನಾರ್ಜನೆ ನೀಡಾಬೇಕಾದೆಡೆ ಧರ್ಮಾಂದತೆಯ ಕರಿಛಾಯೆ ಸಹಿಷ್ಣುತೆಯ ಸಾರಾಬೇಕಾದೆಡೆ ಅಸಮಾನತೆಯ ಪಾಠ ಮಕ್ಕಳ ನಡುವೆ ಶಿಕ್ಷಕರು ಕಿಡಿ ಹಚ್ಚುವುದು ಸರಿಯೇ ? ಆ ಕಿಡಿಗೆ ಬೆಂಕಿ ಹಚ್ವುವ ಮಾಧ್ಯಮಗಳ ನಡೆ ನ್ಯಾಯವೇ ? ಬ್ರಿಟೀಷರು ಒಡೆದು ಆಳಿದರು ಈಗ ಹೊಡೆದಾಡಿಸಿ ಆಳುವರು ಅಷ್ಟೆ !!
– ರಹ್ಮತ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.