1. ಬಾಳ ಪಯಣ ನಿರಂತರ ಹಾಗೆಂದು ಕೊನೆಯವರೆಗೂ ಜೊತೆಗಾರರನ್ನು ಕರೆದೊಯ್ಯಲಾಗದು ರಮ್ಮೀ.. ನಾಳೆ ಖಬರ್ ಸ್ಥಾನದಲ್ಲಿ ನೀ ಒಂಟಿ!
2. ಭಾವನೆಗೆ ಪೆಟ್ಟು ಬಿದ್ದಾಗ, ಹಕ್ಕನ್ನು ಇತರರು ಮೊಟಕುಗೊಳಿಸಿದಾಗ ಮೌನತಾಳಿ ಸಮ್ಮತಿ ಸೂಚಿಸದಿರು ರಮ್ಮೀ.. ಧ್ವನಿಯೆತ್ತು ಇದು ಅಸ್ಮಿತೆಗೆ ಸವಾಲು!
3. ಹತ್ತಿರವಿರುವಾಗ ಕಾಣದಂತೆ ನಡತೆ ದೂರದಲ್ಲಿ ಸುಖ ದುಃಖಗಳ ಕುಶಲೋಪರಿ ಮನುಷ್ಯ ನಾಟಕೀತೆಗೆ ಮಾರು ಹೋದನೇ ರಮ್ಮೀ ನೈಜತೆ ನೀಯತ್ತಿಗೆ ಕಡಿವಾಣ ಹಾಕಿ!
4. ದುಷ್ಟ ಮನಸ್ಸುಗಳ ಅನ್ಯಾಯ ಅನಾಚಾರ ಕಂಡು ಹತಾಶಳಾಗಿ ಮರುಗದಿರು ರಮ್ಮೀ.. ಸುಸಂಸ್ಕೃತ ಅಂತರಂಗ ಶುದ್ಧಿಗೆ ಪ್ರಾರ್ಥಿಸು!
ಕವಯತ್ರಿಯ ಪರಿಚಯ: (www.vknews.in) : ನನ್ನ ಹೆಸರು ರಮೀಝ ಯಂ.ಬಿ. ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿದರೆ. ವೈದ್ಯರಾದ ಡಾ.ಯಂ.ಬಿ. ಮಹಮೂದ್ ಮಂಜನಾಡಿಯವರ ಪುತ್ರಿ.
ಲೇಖಕರೂ, ಹಾಡುಗಾರರೂ, ದಫ್ ಕಲಾಕಾರರಾದ ತಂದೆಯವರಿಂದಲೇ ನನ್ನಲ್ಲಿ ಸಣ್ಣ ವಯಸ್ಸಿನಲ್ಲಿಯೆ ಸಾಹಿತ್ಯದಲ್ಲಿ ಅಭಿರುಚಿ ಬೆಳೆಯಿತು. ಪತಿ ಸುಲ್ತಾನ್ ಮನ್ಸೂರ್ ಜೊತೆ ಬಂಟ್ವಾಳ ತಾಲೂಕಿನ ಕುಕ್ಕಾಜೆಯಲ್ಲೀಗ ನನ್ನ ವಾಸ. ನಾನು ವೃತ್ತಿಯಲ್ಲಿ ಶಿಕ್ಷಕಿ ಹವ್ಯಾಸದಲ್ಲಿ ತೊಡಗಿಸಿ ಕೊಂಡು ಚುಟುಕು, ಹನಿಕವನ ಕವನ, ಲೇಖನಗಳು ನನ್ನ ಬರಹಾಸಕ್ತಿಯ ವಿಷಯಗಳು. ಇತ್ತೀಚೆಗೆ ‘ಅಬಾಬಿ’ ರಚಿಸುವುದನ್ನು ಕಲಿತೆ.
ಅಬಾಬಿ ಬರೆಯುವಾಗ, ಏಕಾಂತದಲ್ಲಿ ನಮ್ಮ ಒಳ ಮನಸ್ಸಿನೊಂದಿಗೆ ಮಾತನಾಡುವಂತೆ ನನಗೆ ಭಾಸವಾಗುವುದು.
✒️ ರಮೀಝ.ಯಂ.ಬಿ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.