ಬೆಂಗಳೂರು (www.vknews.in) : ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ 12 ನೇ ಸಂಸ್ಥಾಪನ ದಿನವನ್ನು ಪಕ್ಷದ ರಾಜ್ಯ ಕಚೇರಿಯಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹಿರ್ ಹುಸೇನ್ ಧ್ವಜಾರೋಹಣ ಮಾಡುವ ಮೂಲಕ ಆಚರಿಸಿದರು. ನಗರದ ಶಿವಾಜಿನಗರ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು,
ಇಂದಿನ ರಾಜಕೀಯ ವ್ಯವಸ್ಥೆ ತುಂಬಾ ಕೆಟ್ಟುಹೋಗಿದೆ 1ಕಡೆ ಕೋಮದ್ವೇಷ ಹರಡುತ್ತಿದ್ದರೆ ಇನ್ನೊಂದು ಕಡೆ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಇದಕ್ಕೆಲ್ಲ ನಮ್ಮ ಮುಖ್ಯಮಂತ್ರಿಯವರು ಮತ್ತು ಪ್ರಧಾನ ಮಂತ್ರಿಯವರು ಕಾರಣ ಏಕೆಂದರೆ ಭ್ರಷ್ಟಾಚಾರ ಮತ್ತು ಕೋಮು ದ್ವೇಷ ಕೋಮು ಪ್ರಚೋದನೆ ಹೇಳಿಕೆಗಳನ್ನು ಕಂಡರೂ ಸಹ ಮೌನ ವಾಗಿ ಇದ್ಢದ್ದು ಇದಕ್ಕೆಲ್ಲಾ ಕಾರಣ ಎನ್ನಬಹುದು ಸರಕಾರ ತನ್ನ ಮರೆಮಾಚಲು ಇಂತಹ ಹರಡುತ್ತಿದ್ದವರನ್ನು ಬೆಂಬಲಿಸಲು ಮುಂದಾಗುತ್ತಿದ್ದದ್ದು ದುರದುಷ್ಟಕರ ಸಂಗತಿ.
ರಾಜ್ಯದಲ್ಲಿ ಈಗಾಗಲೇ 2ಬಾರಿ ಕೊರೋನಾ ಲಾಕ್ ಡೌನ್ ದಿಂದ ಜನರು ತಮ್ಮ ಉದ್ಯೋಗ ವ್ಯಾಪಾರ ವನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು ಕಂಡು ಸಹ ಸರಕಾರ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ್ದು ಖಂಡನೀಯ ರಾಜ್ಯ ಸರಕಾರ ಬೆಲೆ ಇಳಿಕೆಯ ಬಗ್ಗೆ ಕಿಂಚಿತ್ತೂ ಯೋಚಿಸದೆ 40%ಕಮೀಷನ್ ಮತ್ತು ಕೋಮು ದ್ವೇಷ ದತ್ತ ಮುಖ ಮಾಡಿರುವುದು ನಿಜಕ್ಕೂ ನಾಚಿಕೆಯ ವಿಷಯ ಕಮಿಷನ್ ಪಡೆಯುವ ಆತುರದಲ್ಲಿ ಒಬ್ಬ ಯುವಕನನ್ನು ಬಲಿ ಪಡೆದ ಈ ಸರ್ಕಾರದ ಸಚಿವರೇ ಇದಕ್ಕೆ ಕಾರಣವಾಗಿ ಈಗ ರಾಜೀನಾಮೆ ನೀಡಿದ್ದು ಸರ್ಕಾರದ ವೈಫಲ್ಯ ಮರೆಮಾಚಲು ಎತ್ತಿ ತೋರಿಸುತ್ತಿದೆ.
12 ನೇ ಸಂಸ್ಥಾಪನಾ ದಿನದ ನಾವು ರಾಜಕೀಯದಲ್ಲಿ ಭ್ರಷ್ಟಾಚಾರ, ಅಪರಾಧ ಮತ್ತು ಕೋಮುವಾದವನ್ನು ತೊಡೆದುಹಾಕಲು ಸಂಕಲ್ಪ ಮಾಡುತ್ತೇವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್ ಹೇಳಿದರು. ಈ ಸಂದರ್ಭದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮಹಿಳಾ ವಿಭಾಗದ ಅಧ್ಯಕ್ಷೆ ತಲತ್ ಯಾಸ್ಮಿನ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತಿ ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.