ಶ್ರೀನಿವಾಸಪುರ ( ವಿಶ್ವಕನ್ನಡಿಗ ನ್ಯೂಸ್ ) : ರೈತರ ಪರವಾಗಿ ಕೇಂದ್ರ , ರಾಜ್ಯ ಸರ್ಕಾರ ಕೆಲಸ ಮಾಡುತ್ತಿಲ್ಲ . ಎರಡು ಸರ್ಕಾರಗಳು ರೈತ ವಿರೋದಿ ಕೃಷಿ ಕಾನೂನುಗಳನ್ನು ತಂದಿದೆ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಎಸ್.ಜಿ.ವೀರಭದ್ರಸ್ವಾಮಿ ಆರೋಪಿಸಿದರು .
ಪಟ್ಟಣದ ರೈತ ಸಂಘದ ಕಚೇರಿಯಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲಿ 21 ರಂದು ನಡೆಯುವ ರೈತರ ಬೃಹತ್ ಸಮಾವೇಶ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು . ಕೇಂದ್ರ ಸರ್ಕಾರ ರೈತ ವಿರೋಧಿ ಕೆಲ ಕಾನೂನುಗಳನ್ನು ಹಿಂಪಡೆದರೂ ರಾಜ್ಯ ಸರ್ಕಾರ ಇನ್ನೂ ಹಿಂಪಡೆದಿಲ್ಲವೆಂದು ಆರೋಪಿಸಿದರು . ಇದೇ ತಿಂಗಳು 21 ರಂದು ನಡೆಯು ಬೃಹತ್ ಸಮಾವೇಶದಲ್ಲಿ 50 ಸಾವಿರಕ್ಕೂ ಹೆಚ್ಚು ರೈತರ ಸಮಾವೇಶದಲ್ಲಿ ಭಾಗವಹಿಸಬೇಕೆಂದರು .
ಈ ಭ್ರಷ್ಟರಾಜಕೀಯ ಪಕ್ಷಗಳಿಗೆ ಬುದ್ದಿಕಲಿಸುವ ನಿಟ್ಟಿನಲ್ಲಿ ರೈತರೇ ರಾಜಕೀಯಕ್ಕೆ ಪಾದಾರ್ಪಣೆ ಮಾಡಲು ಈ ಸಮಾವೇಶವನ್ನು ಆಯೋಜನೆ ಮಾಡಲಾಗುತ್ತಿದ್ದು , ಜಿಲ್ಲೆಯಾದ್ಯಾಂತ ಎಲ್ಲಾ ತಾಲೂಕಿನಿಂದ ರೈತ ಸಂಘದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈ ಸಮಾವೇಶದಲ್ಲಿ ತೀರ್ಮಾನಿಸಲಾಗುತ್ತದೆ ಎಂದರು . ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಸ್ವಾಮಿ , ಜಿಲ್ಲಾ ಉಪಾಧ್ಯಕ್ಷ ಬೈರೆಡ್ಡಿ , ತಾಲೂಕು ಅಧ್ಯಕ್ಷ ಶ್ರೀರಾಮಿರೆಡ್ಡಿ , ರೈತ ಸಂಘದ ಮುಖಂಡರಾದ ಶಶಿಧರ್ರೆಡ್ಡಿ , ಆಸ್ಲಾಂಪಾಷ , ನರಸಿಂಹಮೂರ್ತಿ , ಸೀನಪ್ಪ , ರಾಮಕೃಷ್ಣ ಇತರರು ಇದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.