ಪಾಲಕ್ಕಾಡ್ (ವಿಶ್ವ ಕನ್ನಡಿಗ ನ್ಯೂಸ್) : ಆರ್ ಎಸ್ ಎಸ್ ನ ಮಾಜಿ ಶಿಕ್ಷ ಣ ಪ್ರಮುಖ್ ಶ್ರೀನಿವಾಸನ್ ಅವರ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಆರು ಜನರ ಪೈಕಿ ನಾಲ್ವರನ್ನು ಗುರುತಿಸಲಾಗಿದೆ, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಅಪರಾಧದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ಫೋನ್ ಪರಿಶೀಲನೆಯಿಂದ, ಪಟ್ಟಂಬಿಯ ಉಮ್ಮರ್ ಮತ್ತು ಅಬ್ದುಲ್ ಖಾದರ್, ಶಂಖುವರಾತೋಡುವಿನ ಅಬ್ದುಲ್ ರೆಹಮಾನ್ ಮತ್ತು ಫಿರೋಜ್ ಅವರನ್ನು ಪೊಲೀಸರು ಗುರುತಿಸಿದ್ದಾರೆ.
ಆರು ಜನರ ಗುಂಪು ಎರಡು ಬೈಕುಗಳು ಮತ್ತು ಸ್ಕೂಟರ್ ನಲ್ಲಿ ಬಂದಿತು. ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಮೂವರು ಪುರುಷರು ಶ್ರೀನಿವಾಸನ್ ಅವರನ್ನು ಕೊಂದರು. ಸಿಸಿಟಿವಿ ದೃಶ್ಯಾವಳಿಗಳಿಂದ ಅವರು ಬಂದ ಅದೇ ಹಾದಿಯಿಂದ ತಪ್ಪಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.