(www.vknews.in) : ಈ ದೇಶವು ಆದ್ಯಾತ್ಮಿಕ ನೆಲೆಗಟ್ಟು ಮತ್ತು ನಂಬಿಕೆಯಿಂದ ನಿಂತಿದೆ. ಭಾರತದ ಮುಸ್ಲಿಮರು ದೇವಾರಧಕರು ಮತ್ತು ಅಷ್ಟೇ ದೃಢವಾಗಿ ದೇಶ ಪ್ರೇಮಿಗಳು.ಮುಸ್ಲಿಮರಿಗೆ ಭಾರತದಲ್ಲಿ ಧರ್ಮವಿಲ್ಲದೆ ದೇಶವಿಲ್ಲ.ಪ್ರತೀ ಮುಸ್ಲಿಮನ. ಆರಾಧನೆಯು ಅಲ್ಲಾಹನಿಗೆ ಅರ್ಪಿತ. ಅಲ್ಲಾಹನ ಪ್ರಾರ್ಥನೆಗೆ ಇರುವ ಕರೆ ಆಝಾನ್ ಎಂಬುದು ನಿಸರ್ಗ ನಿಯಮ, ಈ ಕರೆಯನ್ನು ಹಿಂದೆಂದಿಗಿಂತಲೂ ಸಮರ್ಪಕವಾಗಿ , ಸ್ಪಷ್ಟವಾಗಿ ಮತ್ತು ಸುಂದರವಾಗಿ ಕರೆಯಲಾಗುವುದು. ದೇವ ಪ್ರಣಾಮದ ಕರೆಯನ್ನು ಸೀಮಿತಗೊಳಿಸುವ ಪ್ರಶ್ನೆಯೇ ಉದ್ಭವಿಸುವದಿಲ್ಲ.
ಅಲ್ಲಾಹನಿಗೆ ಪ್ರಾರ್ಥನೆಯ ಆಮಂತ್ರಣ ಕರೆ ಆಝಾನ್ ನ್ನು ಈ ಹಿಂದಿನಂತೆಯೇ ಕರೆಯುತ್ತೇವೆ. ಈ ನಿರ್ಧಿಷ್ಟ ಕರೆಯನ್ನು ಈ ಹಿಂದೆ, ತಡೆಯಲು ಅದೆಷ್ಟೋ ಕಿಂಕರರು ಪ್ರಯತ್ನಿಸಿದರೂ ನಿಸರ್ಗ ಮತ್ತು ಈ ಜಗದ ಸುವ್ಯ ವಸ್ತೆ ಅಂತವರಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಅದೇ ಸಂಭವಿಸುವುದು. ನಮಾಝ್ ಗಿರುವ ಆಝಾನ್ ಕರೆ ತಡೆಯಲು ಈ ಹಿಂದೆ ಪ್ರಯತ್ನಿಸಿದ ಮುತಾಲಿಕನ ಪೂರ್ವಜರಿಗೆ ಏನು ಶಾಸ್ತಿ ಆಗಿದೆಯೋ ಅದೇ ಮುತಾಲಿಕನ ಪ್ರಯತ್ನದಲ್ಲಿ ಸಂಭವಿಸಲಿದೆ. ದೇವ ಪ್ರಾರ್ಥನೆಯ ಕರೆಯನ್ನು ಪ್ರಶ್ನಿಸುವ ಮುತಾಲಿಕನ ಸಂತತಿಯವರು ಈ ಬಗ್ಗೆ ನಿಗಾ ಹೊಂದುವುದು ಒಳಿತು. ಶಬ್ದ ಮಾಲಿನ್ಯ ಮತ್ತು ಶ್ರವಣ ಮಾಲಿನ್ಯದ ವ್ಯತ್ಯಾಸವನ್ನು ಅರಿಯುವುದು ಒಳಿತು.
ಕೆ.ಅಶ್ರಫ್ ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.