(ವಿಶ್ವ ಕನ್ನಡಿಗ ನ್ಯೂಸ್) : ಏನೋ ಗೊತ್ತಿಲ್ಲಾ ಒಂದು ಕಡೆ ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಮತ್ತೊಂದು ಕಡೆಯಲ್ಲಿ ಕಂತೆ ಕಂತೆ ನೋಟು, ಕೆ.ಜಿ ಗಟ್ಟಲೆ ಚಿನ್ನ, ಎಸಿಬಿಯವರು ಭಷ್ಟ ಅಧಿಕಾರಿಗಳ ಕೋಟೆಗೆ ಭೇಟಿ. ಮತ್ತೊಂದು ಕಡೆ ಪಠ್ಯಪುಸ್ತಕದ ಪರಿಷ್ಕರಣೆ..
ಇದನ್ನೆಲ್ಲ ನೋಡುವಾಗ ನನಗೆ ಬಹಳ ನೋವಾಗುತ್ತದೆ. ನಾವ್ಯಾಕೆ ಇಷ್ಟು ಸ್ವಾರ್ಥಿಗಳು. ಶಾಲಾ ಕಾಲೇಜುಗಳಲ್ಲಿ ಮೂಲ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಈಗಿನ ಯುವಕ ಯುವತಿಯರು ಆಲೋಚನೆ ಮಾಡಿ ಯಾವುದೇ ಕೆಲಸ ಮಾಡಿದರೆ ಮಾತ್ರ ಯಶಸ್ವಿಯಾಗಬಹುದು. ನಮ್ಮಿಂದ ಮತ್ತೊಬ್ಬರಿಗೆ ನೋವು ಆಗಬಾರದು. ನಾವು ಅವರಿಗೆ ಉಪಕಾರ ಮಾಡಲು ಆಗದಿದ್ದರೂ ಅವರಿಗೆ ಉಪದ್ರ ಮಾಡಬಾರದು. ಇದಲ್ವ ಮಾನವೀಯತೆ..
ಮನುಷ್ಯ ಮನುಷ್ಯರ ಮಧ್ಯೆ ಜಗಳ ಮಾಡಿಕೊಂಡು ಕಡಿ,ಬಡಿ,ಹೊಡಿ ಎಂಬ ಕಂದಕ ಸೃಷ್ಟಿಸುವುದು ಎಷ್ಟು ಸರಿ, ಅವರನ್ನು ಪ್ರೀತಿಯಿಂದ ಸರಿದಾರಿಗೆ ತರುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ..
ಗಲ್ಫ್ ರಾಷ್ಟ್ರಗಳಲ್ಲಿ ನನ್ನ ಕೆಲ ಗೆಳೆಯರು ಇದ್ದಾರೆ, ಅವರ ಮಾತು ಕೇಳುವಾಗ ತುಂಬಾ ಸಂತೋಷವಾಗುತ್ತದೆ, ಅಲ್ಲಿ ಮುಸ್ಲಿಂ ರಾಷ್ಟ್ರವಾದರೂ ಎಲ್ಲಾ ಜಾತಿಯವರು ಒಂದೇ ರೂಂ ನಲ್ಲಿ ಇರುತ್ತಾರೆ. ಅಲ್ಲಿ ಯಾವುದೇ ಕಾರಣಕ್ಕೂ ಅವರಲ್ಲಿ ನೀನು ಯಾವ ಜಾತಿ, ಪಂಗಡ ಎಂಬ ಪ್ರಶನೆ ಮೂಡವುದಿಲ್ಲ. ಎಲ್ಲರ ಬಾಯಿಂದ ಬರುವುದು ಒಬ್ದೆ ಮಾತು, ಅವರು ನಮ್ಮ ಹಾಗೆ ಉದ್ಯೋಗ ಮಾಡಲು ಬಂದವರು. ಅವರು ನಮ್ಮ ಹಾಗೆ ಮನುಷ್ಯರು ಎಂದು. ಹೀಗಾಗಬೇಕಿದೆ ನಮ್ಮ ಭಾರತ..
ಒಂದು ಉದಾಹರಣೆಗೆ ಎಂ ಎ ಯೂಸುಫ್ ಅಲಿ ಅವರು ಲೂಲೂ ಕಂಪನಿ ಮಾಲೀಕರು. ಇವರ ಕಂಪನಿಯಲ್ಲಿ ಅಪ್ಪ ಅಮ್ಮನನ್ನ ಚೆನ್ನಾಗಿ ನೋಡುವವರಿಗೆ ಮಾತ್ರ ಉದ್ಯೋಗ, ತಿಂಗಳಿಗೆ ಆತ ಅಮ್ಮ ಅಪ್ಪನ ಅವರ ಬ್ಯಾಂಕಿಗೆ ಹಣ ಹಾಕಬೇಕು. ನೋಡಿ ಅಂತಹ ಜನ ಈಗಿನ ಕಾಲದಲ್ಲಿ ಇದ್ದಾರೆ ಅಂದರೆ ನಿಜಕ್ಕೂ ಆಶ್ಚರ್ಯ. ಅವರ ಲುಲು ಕಂಪೆನಿ ನಮ್ಮ ಕರ್ನಾಟಕಕ್ಕೆ ಆದಷ್ಟು ಬೇಗ ಬರಲಿ, ಹಲವು ಯುವಕರಿಗೆ ಉದ್ಯೋಗ ಸಿಗಲಿ ಎಂದು ಆಶಿಸುತ್ತೇನೆ..
– ಗಂಗಾಧರ ಕನ್ಯಾನ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.