ಅಬುಧಾಬಿ (www.vknews.in) : ಯುಗಾದಿ ಹಬ್ಬದ ಪ್ರಯುಕ್ತ ದುಬೈ ಹೆಮ್ಮೆಯ ಯುಎಇ ಕನ್ನಡಿಗರು ತಂಡವು ಇದೇ ಶನಿವಾರ 18ರಂದು ಅಬು ಹೈಲ್ ನಲ್ಲಿರುವ ಪರ್ಲ್ ವಿಸ್ದಮ್ ಶಾಲಾ ಸಭಾಂಗಣದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾ ಪ್ರತಿಭಾ ಸ್ಪರ್ಧೆಯ ಗ್ರಾಂಡ್ ಫೈನಲ್ ಕಾರ್ಯಕ್ರಮ ಅದ್ದೊರಿಯಾಗಿ ನಡೆಯಿತು ಜೊತೆಗೆ ಹೆಚ್ಚು ಅಂಕ ಗಳಿಸಿದ ಯುಎಇ ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ಯಶಸ್ವಿಯಾಗಿ ನಡೆಯಿತು.
ಮದ್ಯಾಹ್ನ 3ಗಂಟೆಯಿಂದ ದೀಪ ಬೆಳಗಿಸುವ ಜೊತೆಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ಮಾಡಿ ಇತ್ತೀಚೆಗೆ ನಮ್ಮನ್ನು ಅಗಲಿದ ಯುಎಇ ರಾಷ್ಟ್ರಾಧ್ಯಕ್ಷ ಶೇಕ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ಅವರಿಗೆ ಶ್ರದ್ದಾಂಜಲಿ ಅರ್ಪಿಸಿ ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರ ಗೀತೆ, ಭಾರತದ ರಾಷ್ಟ್ರಗೀತೆ ಮತ್ತು ಕರ್ನಾಟಕ ನಾಡ ಗೀತೆ ಹೇಳುವ ಮೂಲಕ ಕಾರ್ಯಕ್ರಮವನ್ನು ಮುಂದುವರೆಸಲಾಯಿತು, ನಂತರ ಯುಎಇ ಕನ್ನಡ ಮಕ್ಕಳ ನೃತ್ಯ ಸ್ಪರ್ಧೆ, ಗಾಯನ ಸ್ಪರ್ಧೆ, ಡ್ರಾಯಿಂಗ್ ಸ್ಪರ್ಧೆ ಮತ್ತು ಮಕ್ಕಳ ಫ್ಯಾಷನ್ ಶೋ ಕಾರ್ಯಕ್ರಮ ನಡೆಯಿತು, ಗ್ರಾಂಡ್ ಫೈನಲ್ ತೀರ್ಪು ನೀಡಲು ತಾಯಿನಾಡಿನಿಂದ ಅನೇಕ ಕಲಾವಿದರು ಆಗಮಿಸಿದರ ಜೊತೆಗೆ ಸ್ಥಳೀಯ ಕಲಾವಿದರು ಸಹ ಆಗಮಿಸಿದ್ದರು.
ಯುಎಇಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಸಕ್ತ ಶೆಕ್ಷಣಿಕ ವರ್ಷದಲ್ಲಿ ಎಸ್ಎಸ್ ಎಲ್ ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮತ್ತು ಶೇಕ್ ಹಂದಾನ್, ಶೇಕ್ ಸುಲ್ತಾನ್ ಪ್ರಶಸ್ತಿ ಪಡೆದ ಕನ್ನಡ ವಿದ್ಯಾರ್ಥಿಗಳಿಗೆ ರಾಘವೇಂದ್ರ ಮಂಬೋಲ್ ಮತ್ತು ಅತಿಥಿಗಳು ಮತ್ತು ಆಯೋಜಕರು ಸೇರಿ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮಕ್ಕೆ ತಾಯಿನಾಡಿನಿಂದ ಮುಖ್ಯ ಅತಿಥಿಗಳಾಗಿ ಮತ್ತು ತೀರ್ಪುಗಾರರಾಗಿ ಆಗಮಿಸಿದ ಶ್ರೀಯುತ ಕೆ.ಕಲ್ಯಾಣ್ (ಸಂಗೀತ ನಿರ್ದೇಶಕರು & ಸಾಹಿತ್ಯಗಾರರು), ಖ್ಯಾತ ಗಾಯಕರಾದ ಶ್ರೀಯುತ ರಮೇಶ್ ಚಂದ್ರ, ಕು.ಶ್ವೇತಾ ದೇವನಹಳ್ಳಿ ( ಗಾಯಕಿ ಮತ್ತು ನಿರೂಪಕಿ ), ಶ್ರೀಯುತ : ಅರ್ಫಾಝ್ ಉಳ್ಳಾಲ ( ಗಾಯಕರು ), ಆದಿತ್ಯ ಭರಮಪ್ಪ ( ಡ್ಯಾನ್ಸಿಂಗ್ ಚಾಂಪಿಯನ್ಸ್ ವಿಜೇತ ), ಶ್ರೀಯುತ ರಾಜಶೇಖರ ( ಟಗರು ರಾಜು – ಕೊರಿಯೋಗ್ರಾಫರ್ ) ಮತ್ತು ಬೆಂಗಳೂರಿನ ನೃತ್ಯ ತಂಡದವರಾದ ನಿತಿನ್ ಕುಮಾರ, ಅಶ್ವಿನಿ ಶೇಷಪ್ಪ, ಔಚಿತ್ಯ ಜೊಶೀಲ್ ಮುಂತಾದವರಿಗೆ ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು , ಯುಎಇ ಕೆ ಏನ್ ಆರ್ ಐ ಫೋರಮ್ ಅಧ್ಯಕ್ಷರಾದ ಶ್ರೀಯುತ ಪ್ರವೀಣ್ ಶೆಟ್ಟಿ ಅವರು ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಶತೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಸುದೀಪ್ ದಾವಣಗೆರೆ ಅವರು ವಹಿಸಿಕೊಂಡರು ಮತ್ತು ಮಕ್ಕಳ ಕಾರ್ಯಕ್ರಮ ಮತ್ತು ತಂಡದ ಬಗ್ಗೆ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು ಅವರು ಪ್ರಾಸ್ತಾವಿಕ ಭಾಷಣ ಮಾಡಿ ಆಗಮಿಸಿದ ಎಲ್ಲರಿಗೂ ಸ್ವಾಗತ ಕೋರಿದರು, ಇದೇ ವೇಳೆಯಲ್ಲಿ ಹೆಮ್ಮೆಯ ಕನ್ನಡಿಗರು ಸಂಘದ ಅರಬಿಕ್ ಲೋಗೋ ಅನಾವರಣ ಮಾಡಲಾಯಿತು.
ಗಾಯನ ಸ್ಪರ್ಧೆಯಲ್ಲಿ, ನೃತ್ಯ ಸ್ಪರ್ಧೆಯಲ್ಲಿ ಹಾಗೂ ಡ್ರಾಯಿಂಗ್ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಆಗಮಿಸಿದ ಅತಿಥಿಗಳು ಮತ್ತು ಆಯೋಜಕರು ಸೇರಿ ಬಹುಮಾನವನ್ನು ವಿತರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಹೆಮ್ಮೆಯ ಕನ್ನಡಿಗರು ತಂಡದ ನವೀನ್ ಬೆಂಗಳೂರು, ಆಶಾ ಕುಂದಾಪುರ ಮತ್ತು ದುಬೈ ಕನ್ನಡ ರೇಡಿಯೋ ಆರ್ ಜೆ ಕೃತಿಕಾ ಬೆಂಗಳೂರು ಅವರು ನೆರವೇರಿಸದರು, ಡಾ. ಸವಿತಾ ಮೈಸೂರು ಅವರು ವಂದನಾರ್ಪಣೆಯನ್ನು ನೆರವೇರಿಸಿದರು.
ಯಶಸ್ವೀ ಕಾರ್ಯಕ್ರಮದ ಆಯೋಜಕರಾಗಿ ಹೆಮ್ಮೆಯ ಕನ್ನಡಿಗರು ತಂಡದ ಅಧ್ಯಕ್ಷರಾದ ಸುದೀಪ್ ದಾವಣಗೆರೆ, ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿ ಶಂಕರ್ ಬೆಳಗಾವಿ, ಮುಖ್ಯ ಸಂಚಾಲಕ ರಫೀಕಲಿ ಕೊಡಗು, ಮತ್ತು ಸಮಿತಿ ಸದಸ್ಯರಾದ ವಿಷ್ಣುಮೂರ್ತಿ ಮೈಸೂರು, ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ಡಾ.ಸವಿತಾ ಮೈಸೂರು, ಅನಿತಾ ಬೆಂಗಳೂರು, ವರದರಾಜ್ ಕೋಲಾರ, ಮೊಹೀನುದ್ದೀನ್ ಹುಬ್ಬಳ್ಳಿ,ಮಧು ದಾವಣಗೆರೆ, ಮತ್ತು ನವೀನ್ ಬೆಂಗಳೂರು ಅವರು ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.