ಮಂಜೇಶ್ವರ (www.vknews.in) ; ಇಲ್ಲಿಗೆ ಸಮೀಪದ ವರ್ಕಾಡಿ ಪಂಚಾಯತ್ ವ್ಯಾಪ್ತಿಯ ಸುಂಕದಕಟ್ಟೆಯಲ್ಲಿ ಬಿರುಸಿನ ಮಳೆಗೆ ಕಟ್ಟಡವೊಂದು ನೋಡು ನೋಡುತ್ತಿದ್ದಂತೆ ಧರಾಶಾಹಿಯಾದ ಘಟನೆ ಭಾನುವಾರ ನಡೆದಿದೆ. ಈ ಕಟ್ಟಡದಲ್ಲಿ ಬಿರುಕು ಕಂಡು ಬಂದು ಕೆಲವು ದಿನಗಳಾಗಿದ್ದು, ಅದರಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.ಈ ಹಿನ್ನೆಲೆಯಲ್ಲಿ ಭಾರೀ ಅನಾಹುತ ತಪ್ಪಿಹೋಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಬಿಜೆಪಿ ಸಮಿತಿ, ಧರ್ಮಸ್ಥಳ ಸಂಘ, ಒಡಿಯೂರು ಸಂಘ ಮುಂತಾದ ಕಚೇರಿಗಳು ಸಹಿತ ಇನ್ನಿತರ ಹಲವು ಮಳೆಗೆಗಳು ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದವು. ಆದರೆ ಈ ಹಿಂದೆಯೇ ಎಲ್ಲಾ ಕಚೇರಿ, ಮಳಿಗೆಗಳನ್ನು ತೆರವುಗೊಳಿಸಿ ಯಾವುದೇ ದುರಂತಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು. ಬೇಕರಿ ಜಂಕ್ಷನ್ ನ ಸುರೇಂದ್ರ ನಲ್ಲೆಂಗಿ ಎಂಬವರಿಗೆ ಸೇರಿದ ಕಟ್ಟಡ ಇದಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.