ಬೆಂಗಳೂರು (www.vknews.in) : ಕಾಟನ್ ಪೇಟೆಯಲ್ಲಿ ಹಜ್ರತ್ ತವಕ್ಕಲ್ ಮಸ್ತಾನ್ ಬಾಬಾರವರ ಉರೂಸನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಎಲ್ಲಾ ಧರ್ಮದ ಜನರು ಉರೂಸ್ ಸಂಭ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ತವಕ್ಕಲ್ ಬಾಬಾರವರ ದರ್ಗಾ ಎಲ್ಲಾ ಧರ್ಮದವರಿಗೂ ಪ್ರೀತಿ ಮತ್ತು ಶಾಂತಿಯ ಸಂಕೇತವಾಗಿದೆ.
ಪ್ರತಿದಿನ ದರ್ಶನ ಪಡೆಯಲು ಸಾವಿರಾರು ಜನರು ದೇಶದ ಮೂಲೆ ಮೂಲೆಗಳಿಂದ ಬರುತ್ತಾರೆ. ತವಕ್ಕಲ್ ಬಾಬಾ ತಿಗಳ ಸಮುದಾಯದ ನೆಚ್ಚಿನ ಗುರುವೂ ಹೌದು. ಪ್ರತಿ ವರ್ಷ ಕರ್ಗಾ ದರ್ಗಾಗೆ ಬಂದು ಹೋಗುವ ಆಚರಣೆ ಉಂಟು. ಪ್ರೀತಿ, ವಾತ್ಸಲ್ಯ ಮತ್ತು ಸಹಬಾಳ್ವೆಯ ಪಾಠವನ್ನು ಗುರುಹಿರಿಯರು ಕಲಿಸಿ ಹೋಗಿದ್ದಾರೆ. ಅದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮೆಲರ ಜವಾಬ್ದಾರಿ ಎಂದು ದರ್ಗಾ ಕಮಿಟಿಯವರು ಹೇಳುತ್ತಾರೆ. ಮೂರು ದಿನಗಳವರೆಗೆ ಉರೂಸ್ ಕಾರ್ಯಕ್ರಮಗಳು ನಡೆಯಲಿವೆ, ಸಾರ್ವಜನಿಕರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.