ಹುಬ್ಬಳ್ಳಿ (ವಿಶ್ವ ಕನ್ನಡಿಗ ನ್ಯೂಸ್) : ಮಗನನ್ನೇ ತಂದೆ ಬರ್ಬರವಾಗಿ ಹತ್ಯೆ ಮಾಡಿಸಿರುವ ಘಟನೆ ನಗರದ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳೀಯ ಗೂಂಡಾಗಳಿಗೆ ಉದ್ಯಮಿ ಭರತ್ ಜೈನ್ ಸುಪಾರಿ ಕೊಟ್ಟು ತನ್ನ ಮಗ ಅಖಿಲ್ ಜೈನ್ ನನ್ನು ಕೊಲೆ ಮಾಡಿಸಿದ್ದಾನೆ. ಅಖಿಲ್ ಮೃತದೇಹ ಕೇಶ್ವಾಪುರ ಬಳಿಯ ತೋಟದ ಮನೆಯಲ್ಲಿ ಪತ್ತೆಯಾಗಿತ್ತು.
48 ಗಂಟೆಯೊಳಗಾಗಿ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಮಗನ ಉಪಟಳ ತಾಳಲಾರದೇ ಸುಪಾರಿ ಕೊಟ್ಟು ಕೊಲ್ಲಿಸಿದ್ದಾಗಿ ಭರತ್ ಜೈನ್ ವಿಚಾರಣೆ ವೇಳೆ ತಪ್ರೊಪ್ಪಿಕೊಂಡಿದ್ದಾನೆ. ಭರತ್ ಜೈನ್ ಹೇಳಿಕೆ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.