(www.vknews.in)ಪವಿತ್ರ ಉಮ್ರಾಯಾತ್ರೆಗೆ ಕುಟುಂಬ ಸಮೇತರಾಗಿ ತೆರಳುತ್ತಿರುವ ಸಾಲ್ಮರ ಸೈಯದ್ ಮಲೆ ಜುಮ್ಮಾ ಮಸ್ಜಿದ್ ನ ಅಧ್ಯಕ್ಷರಾದ ನೂರುದ್ದೀನ್ ಸಾಲ್ಮರ ರವರನ್ನು, ಸೈಯ್ಯದ್ ಮಲೆ ಜಮಾತ್ ಕಮೀಟಿಯ ವತಿಯಿಂದ ಜುಮ್ಮಾ ನಮಾಝ್ ನ ನಂತರ ಸೈಯ್ಯದ್ ಅಲ್ ಹಾಜ್ ಮುಹಮ್ಮದ್ ತಂಙಳ್ ಸಾಲ್ಮರ ರವರು ಶಾಲು ಹೊದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಸ್ತಾದ್ ಅಲ್ ಹಾಜ್ ಉಮ್ಮರ್ ದಾರಿಮಿ ಸಾಲ್ಮರ, ಮಸೀದಿಯ ಉಪಾದ್ಯಕ್ಷರಾದ ಇಸ್ಮಾಯಿಲ್ ಸಾಲ್ಮರ, ಶರೀಪ್ ಸಾಲ್ಮರ, ಪ್ರಧಾನ ಕಾರ್ಯದರ್ಶಿ ಜುನೈದ್ ಸಾಲ್ಮರ, ಕೋಶಾಧಿಕಾರಿ ಮುಹಮ್ಮದ್ ಕೋಲ್ಪೆ, ಜಮಾತ್ ಕಮೀಟಿಯ ಸದಸ್ಯರು, ಕುವ್ವತುಲ್ ಇಸ್ಲಾಂ ಯುವಕ ಸಮೀತಿಯ ಅದ್ಯಕ್ಷರಾದ ಉಸ್ಮಾನ್ ಕೆರೆಮೂಲೆ ,ಅಬ್ದುಲ್ ಹಮೀದ್ ಸಾಲ್ಮರ ಮಾಜಿ ಅಧ್ಯಕ್ಷರಾದ ಸುಲೇಮಾನ್ ಹಾಜಿ ಸಾಲ್ಮರ, ಯಹಿಯಾ ಸಾಲ್ಮರ ಹಸನ್ ಮುದ್ದೋಡಿ, ಕಬೀರ್ ಸಾಲ್ಮರ ಮೊದಲಾದವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.