ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಸಧೃಡ ಪ್ರಜಾಪ್ರಭುತ್ವವನ್ನು ನಿರ್ಮಿಸುವ ನಿಟ್ಟಿನಲ್ಲಿ ಕಡ್ಡಾಯವಾಗಿ ಅರ್ಹರೆಲ್ಲರೂ ಮತದಾನ ಮಾಡುವುದರಿಂದ ಸುಸ್ಥಿರ ಸರ್ಕಾರ ರಚನೆಗೆ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಮಾತನಾಡಿದ ಅವರು ದೇಶದ ಆರೋಗ್ಯ ಮತ್ತು ಶಿಕ್ಷಣ ಹೇಗೆ ಬದಲಾವಣೆಯಾಗಲು ನಿಮ್ಮ ಮತದಾನದ ಹಕ್ಕನ್ನು ಯುವಕರು ಒಟ್ಟಿಗೆ ಸೇರಿ ಉತ್ತಮ ಸರಕಾರವನ್ನು ಆಯ್ಕೆ ಮಾಡಿಕೊಳ್ಳುವ ಸದವಕಾಶವನ್ನು ಬಳಸಿಕೊಳ್ಳುವಂತೆ ಯುವ ಮತದಾರರಿಗೆ ತಿಳಿಸಿದರು. ಯಾವುದೇ ದೇಶದಲ್ಲಿ ವಿದ್ಯಾವಂತರು , ಯುವಕರು ಮತದಾನದಲ್ಲಿ ಪಾಲ್ಗೊಂಡರೆ ಮತದಾನ ಹೆಚ್ಚಾಗುತ್ತದೆ. ಜೊತೆಗೆ ದೇಶದ ಭವಿಷ್ಯದ ದೃಷ್ಟಿಯಿಂದ ಯೋಗ್ಯ ವ್ಯಕ್ತಿ ಆಯ್ಕೆಯಾದಂತೆ ಬಲಿಷ್ಠ ಮತ್ತು ಸದೃಢ ಭಾರತ ನಿರ್ಮಾಣಕ್ಕೆ ನಾವೆಲ್ಲ ಮತದಾನದ ಬಗ್ಗೆ ಅರಿತುಕೊಳ್ಳಬೇಕು. ಕೇವಲ ಒಂದು ದಿನ ಪರಿಶ್ರಮದಿಂದ ನಮ್ಮ ಭವಿಷ್ಯ ಎಂದರು.
ಬೆಂಗಳೂರು ಉತ್ತರ ವಿವಿ ಕುಲಸಚಿವ ಡಾ// ಡಿ.ಡೊಮಿನಿಕ್ ಅವರು ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೌಲ್ಯಯುತವಾದ ಮತದಾನದ ಹಕ್ಕನ್ನು ಪಡೆಯುವುದು ಅಷ್ಟೇ ಅಲ್ಲ ಬದಲಾವಣೆಗಾಗಿ ನಾವು ಸಂವಿಧಾನದ ಆಶಯಗಳಂತೆ ಮತದಾನವನ್ನು ಮಾಡಬೇಕು. ಎಷ್ಟೇ ಸಮಸ್ಯೆ ಇದ್ದರೂ ನ್ಯಾಯಯುತ ಬದುಕಲಿಕ್ಕೆ ನಮ್ಮ ಪ್ರತಿನಿಧಿ ಆಯ್ಕೆಯಾಗಬೇಕು ಎಂದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು ಮಾತನಾಡಿ ಯುವ ಮತದಾರರು ನಮಗೆಲ್ಲ ಯಾವ ಆದ್ಯತೆಯ ಸರಕಾರಬೇಕು ಅಂತ ನಿರ್ಧಾರ ಮಾಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಸಂವಿಧಾನದ ಮೌಲ್ಯವನ್ನು ಎತ್ತಿಹಿಡಿಯಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಒಂದು ದಿನ ಮತದಾನದ ಹಕ್ಕನ್ನು ಮುಂದಿನ ಐದು ವರ್ಷಗಳ ಭವಿಷ್ಯ ಕಾಣಬಹುದು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್. ಹೊಸಮನಿ ಅವರು ಮಾತನಾಡಿ ದೇಶದಲ್ಲಿ ಕೇವಲ ಶೇ .60 ರಷ್ಟೇ ಮತದಾನವಾಗುತ್ತಾ ಇದ್ದು ಮತದಾನದ ದಿನ ಕಾಲೇಜುಗಳಿಗೆ ರಜೆ ನೀಡಿದರೂ ಮತದಾನದ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ ನಾವು ಮತದಾನದಲ್ಲಿ ಭಾಗವಹಿಸಿದರೆ ಒಳ್ಳೆಯ ಸರಕಾರ ರಚನೆಗೆ ನಾವು ಕಾರಣವಾಗಬೇಕು ಎಂದರು. ಈ ಸಂದರ್ಭದಲ್ಲಿ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಉತ್ತಮ ಕಾರ್ಯನಿರ್ವಹಿಸಿದ ಬಿಎಲ್ಓಗಳಿಗೆ ಪ್ರಶಂಸನಾ ಪತ್ರ ವಿತರಿಸಿದರು. ಮತದಾನ ಜಾಗೃತಿ ಕುರಿತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಹೆಚ್ ಅಮರೇಶ್ , ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮೀ , ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮೀ , ಯೋಜನಾ ನಿರ್ದೇಶಕಿ ಶೃತಿ , ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.