ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ಕೋಲಾರ ನಗರದ ಖಾಸಗಿ ಆಸ್ಪತ್ರೆ ಬಿಲ್ ಕಟ್ಟಲಾಗದ ಕ್ಯಾನ್ಸರ್ ರೋಗಿಯೊಬ್ಬರಿಗೆ ಕೋಲಾರ ಲೋಕಸಭಾ ಸದಸ್ಯರಾದ ಎಸ್.ಮುನಿಸ್ವಾಮಿರವರು ನೆರವು ನೀಡಿದ ಘಟನೆ ನಡೆದಿದೆ.
ಕೋಲಾರ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಮರುಲ್ಲ ಎಂಬ ಕ್ಯಾನ್ಸರ್ ರೋಗಿ ಚಿಕಿತ್ಸೆ ಪಡೆಯುತ್ತಿದ್ದರು , ಇಂದು ಅವರ ಡಿಸ್ಟಾರ್ಟ್ ಕೂಡ ನಿಶ್ಚಯವಾಗಿತ್ತು. ಆದರೆ ರೋಗಿಯ ಬಳಿ ವೈದ್ಯಕೀಯ ವೆಚ್ಚ ಭರಿಸುವ ಶಕ್ತಿ ಇಲ್ಲದಿದ್ದದ್ದರಿಂದ ಡಿಸ್ಟಾರ್ಜ್ಗೆ ತೊಂದರೆ ಉಂಟಾಗಿತ್ತು. ರೋಗಿಯ ಸಂಬಂಧಿಕರಲ್ಲೊಬ್ಬರು ಹಾಗೂ ಅಲ್ಪಸಂಖ್ಯಾತ ಮುಖಂಡರು ನೀಡಿದ ಸಲಹೆಯಂತೆ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರನ್ನು ಸಂಪರ್ಕಿಸಿದಾಗ ತಕ್ಷಣವೇ ಸ್ಪಂದಿಸಿದ ಸಂಸದರು ಖುದ್ದು ತಾವೇ ಆಸ್ಪತ್ರೆಗೆ ಭೇಟಿ ನೀಡಿ ಅಮರುಲ್ಲ ಅವರ ಆರೋಗ್ಯ ವಿಚಾರಿಸಿದರಲ್ಲದೆ ಅವರ ವೈದ್ಯಕೀಯ ವೆಚ್ಚವನ್ನು ತಾವೇ ಭರಿಸಿ ಅವರನ್ನು ಮನೆಗೆ ಬೀಳ್ಕೊಟ್ಟರು.
ಇದರ ಜೊತೆಗೆ ಮತ್ತೊಬ್ಬ ರೋಗಿಯಾದ ಸಯ್ಯದ್ ಇಸ್ಮಾಯಿಲ್ ಎಂಬುವವರಿಗೂ ಸಹ ಚಿಕಿತ್ಸಾ ವೆಚ್ಚಕ್ಕಾಗಿ ಧನಸಹಾಯ ಮಾಡಿದರು. ವೈದ್ಯೋ ನಾರಾಯಣೋ ಹರಿಃ ಎಂದು ಹಿಂದೂ ಧರ್ಮದಲ್ಲಿ ಹೇಳುತ್ತಾರೆ. ಪ್ರಸ್ತುತ ಕಾಲದಲ್ಲಿ ವೈದ್ಯಕೀಯ ವೆಚ್ಚ ಭರಿಸುವ ಶಕ್ತಿ ಇಲ್ಲದೆ ಹಲವು ಕುಟುಂಬಗಳು ಆರೋಗ್ಯ ದಿಂದ ವಂಚಿತರಗುತ್ತಿದ್ದಾರೆ.
ಸರ್ಕಾರಿ ಉಚಿತ ಆರೋಗ್ಯ ಸವಲತ್ತುಗಳನ್ನು ಎಲ್ಲರೂ ಪಡೆಯುವಂತಾಗಬೇಕು. ಎಲ್ಲ ವರ್ಗದ ಜನರಿಗೂ ಸಹ ತಾರತಮ್ಯ ಮಾಡದೆ ಅರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಆಗ ಇಂತಹ ಪ್ರಕರಣಗಳಿಂದ ದೂರ ಉಳಿಯಬಹುದು ಎಂದು ಅಭಿಪ್ರಾಯಪಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.