ಮಲಪ್ಪುರಂ (ವಿಶ್ವ ಕನ್ನಡಿಗ ನ್ಯೂಸ್) : ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಆರಂಭಿಸಿದ ಕೇರಳದ ಶಿಹಾಬ್ ಚೋಟೂರ್ ಇರಾನ್ ದಾಟಿ ಇರಾಕ್ ತಲುಪಿದ್ದಾರೆ. ಇರಾಕ್ ನಂತರ, ಮುಂದೆ ಅವರು ಕುವೈತ್ ದಾಟಿದರೆ, ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದು. ಇದರೊಂದಿಗೆ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆ ಕೈಗೊಳ್ಳುವ ಕನಸು ಚಿಗುರೊಡೆಯಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ ಈ ಯುವಕ.
ಕುವೈತ್ಗೆ ತೆರಳುವ ಮುನ್ನ ಶಿಹಾಬ್ ಅವರು ಇರಾಕ್ನ ಪ್ರಮುಖ ಯಾತ್ರಾ ಕೇಂದ್ರಗಳಾದ ಕರ್ಬಲಾ ಮತ್ತು ನಜಾಫ್ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಶಿಹಾಬ್ ಚೋಟುರ್ ಅವರ ಕಾಲ್ನಡಿಗೆ ಯಾತ್ರೆ ಜೂನ್ 2022 ರಂದು ಪ್ರಾರಂಭವಾಯಿತು. ಭಾರತದ ವಿವಿಧ ರಾಜ್ಯಗಳಲ್ಲಿ ಸಂಚರಿಸಿದ ಶಿಹಾಬ್ ರ ಪಯಣ ಸೆಪ್ಟೆಂಬರ್ ನಲ್ಲಿ ಭಾರತದ ಗಡಿ ತಲುಪಿತು.
ಪಾಕಿಸ್ತಾನಕ್ಕೆ ಪ್ರವೇಶಿಸಲು ವೀಸಾದ ಸಮಸ್ಯೆಯು ಪ್ರವಾಸವನ್ನು ಅಪಾಯಕ್ಕೆ ತಳ್ಳಿತು. ಶಿಹಾಬ್ ಟ್ರಾನ್ಸಿಟ್ ವೀಸಾ ಪಡೆಯುವಲ್ಲಿ ವಿಳಂಬವನ್ನು ಎದುರಿಸಿದರು. ನಾಲ್ಕು ತಿಂಗಳ ಕಾಲ ವಾಘಾ ಆರ್ಟಿಯ ಅಫಿಯಾ ಶಾಲೆಯಲ್ಲಿ ತಂಗಿದ್ದ ಅವರಿಗೆ ಪಾಕಿಸ್ತಾನ ಟ್ರಾನ್ಸಿಟ್ ವೀಸಾ ನೀಡಲಾಯಿತು ಮತ್ತು ಪಾಕಿಸ್ತಾನವನ್ನು ಪ್ರವೇಶಿಸಿದರು. ಈ ಪ್ರಯಾಣವು ಪಾಕಿಸ್ತಾನದ ಮೂಲಕ ಸ್ವಲ್ಪ ದಿನಗಳ ಕಾಲ ಕಾಲ್ನಡಿಗೆಯಲ್ಲೇ ಮುಂದುವರೆಯಿತು, ಬಳಿಕ ರಾಷ್ಟ್ರೀಯ ಭದ್ರತೆಯ ಸಮಸ್ಯೆಯಿಂದಾಗಿ ಅವರು ವಿಮಾನದ ಮೂಲಕ ಇರಾನ್ ತಲುಪಿದರು. ಅಲ್ಲಿಂದ ಪುನಃ ಕಾಲ್ನಡಿಗೆ ಮೂಲಕ ಯಾತ್ರೆ ಆರಂಭಿಸಿದ ಅವರು ಇದೀಗ ಇರಾಕ್ ತಲುಪಿದ್ದಾರೆ.
ಶಿಹಾಬ್ ಯಾತ್ರೆಯು ಮಲಪ್ಪುರಂ ವಲಂಚೇರಿಯಿಂದ 2023 ರ ಹಜ್ ಯಾತ್ರೆಯ ಭಾಗವಾಗಲು 8640 ಕಿಲೋಮೀಟರ್ ನಡೆದು ಮಕ್ಕಾ ತಲುಪಲು ಪ್ರಾರಂಭವಾಯಿತು. ವಾಘಾ ಗಡಿ ಮೂಲಕ ಪಾಕಿಸ್ತಾನ ತಲುಪಿ ಅಲ್ಲಿಂದ ಇರಾನ್, ಇರಾಕ್ ಮತ್ತು ಕುವೈತ್ ಮೂಲಕ ಸೌದಿ ಅರೇಬಿಯಾ ತಲುಪುವ ರೀತಿಯಲ್ಲಿ ಪ್ರಯಾಣವನ್ನು ಏರ್ಪಡಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.