ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಉಜಿರೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಮೃತ ಸೌಜನ್ಯ ಪ್ರಕರಣದಲ್ಲಿ ಸಮರ್ಪಕ ನ್ಯಾಯ ಪಾಲನೆ ಆಗಲಿ ಮತ್ತು ನೈಜ ದುಷ್ಕರ್ಮಿ ಅಪರಾಧಿಗಳಿಗೆ ಶಿಕ್ಷೆ ಆಗಬೇಕಿದೆ.
ಉಜಿರೆಯ ವಿದ್ಯಾರ್ಥಿನಿ ಮೃತ ಸೌಜನ್ಯಳನ್ನು ಅತ್ಯಾಚಾರ ನಡೆಸಿ ಹತ್ಯೆಗೊಳಿಸಿದ ಅಂದಿನ ಪ್ರಕರಣದಲ್ಲಿ ಸಂತೋಷ್ ಎಂಬ ಆರೋಪಿ ದೋಷ ಮುಕ್ತನಾಗಿದ್ದು, ನೈಜ ಅಪರಾಧಿಗಳು ಯಾರೆಂದು ಬಹಿರಂಗ ಪಡಿಸುವುದು ವ್ಯವಸ್ಥೆಯ ಮುಂದಿನ ಸವಾಲು ಆಗಿರುವುದರಿಂದ ಸೌಜನ್ಯ ಪ್ರಕರಣದಲ್ಲಿ ರಾಜ್ಯದ ಜನತೆ ನ್ಯಾಯ ನಿರೀಕ್ಷೆ ಮಾಡುತ್ತಿದೆ. ಮೃತ ಸೌಜನ್ಯಳ ಸಾವು ಯಾವುದೇ ಕಾರಣಕ್ಕೂ ನಿಗೂಢವಾಗಿ ಉಳಿಯ ಕೂಡದು ಮತ್ತು ನೈಜ ಆರೋಪಿಗಳು ತಪ್ಪಿಸಿ ಕೊಳ್ಳಕೂಡದು. ಸೌಜನ್ಯ ನ್ಯಾಯದ ಪರ ಹೋರಾಟಕ್ಕೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸುತ್ತದೆ ಎಂದು ಕೆ.ಅಶ್ರಫ್(ಮಾಜಿ ಮೇಯರ್) ಪ್ರಕಟನೆಯಲ್ಲಿ ತಿಳಿಸಿದ್ದಾರೆ.
.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.