ಉಳ್ಳಾಲ (www.vknews.in) : ನಿಲ್ಲಿಸಿದ್ದ ಬಸ್ಸಿನಿಂದ ಎರಡು ಬ್ಯಾಟರಿಗಳನ್ನು ಕಳವು ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಪಲ ಬಗಂಬಿಲದಲ್ಲಿ ಬುಧವಾರ ನಸುಕಿನ ಜಾವ ನಡೆದಿದೆ. ಬೆಳಗ್ಗೆ ಕುಂಪಲದಿಂದ ಕೊಟ್ಟಾರ ಕಡೆಗೆ ಹೋಗಬೇಕಿದ್ದ ಬಸ್ ಕಳ್ಳರ ಈ ಕೃತ್ಯದಿಂದಾಗಿ ಪ್ರಯಾಣವನ್ನೇ ಮೊಟಕುಗೊಳಿಸಿದೆ.
ರಾತ್ರಿ ನಿಲ್ಲಿಸಿದ್ದ ರೂಟ್ ನಂಬರ್ 44 ಮೂಕಾಂಬಿಕಾ ಟ್ರಾವೆಲ್ಸ್ ಬಸ್ಸಿನ 40 ಸಾವಿರ ರೂ. ಮೊತ್ತದ 2 ಬ್ಯಾಟರಿಗಳನ್ನು ಹಾಗೂ ವೈರ್ಗಳನ್ನು ಕಳವು ಮಾಡಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.