(www.vknews. in) ; ಎಸ್,ವೈ,ಎಸ್ ರಾಜ್ಯ ಸಮಿತಿ ನಿರ್ದೇಶನದಂತೆ ದ.ಕ ವೆಸ್ಟ್ ಜಿಲ್ಲಾ ಸಮಿತಿಯ ಕಾರ್ಯಕಾರಿಣಿ,ಝೋನ್ ಪದಾಧಿಕಾರಿಗಳು ಹಾಗೂ ಸರ್ಕಲ್ ಸಮಿತಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಮತ್ತು ಯುನಿಟ್ ಗಳ ಆಯ್ದ ನಾಲ್ಕು ಮಂದಿ ನಾಯಕರ ಸಂಗಮವು ಮಾರ್ಚ್ ಹತ್ತು ಆದಿತ್ಯವಾರ ಅಡ್ಯಾರ್ ಕಣ್ಣೂರು ಅಲ್ ಮರ್ಕಝುಲ್ ಇಸ್ಲಾಮಿ ನಲ್ಲಿ ಮಧ್ಯಾಹ್ನ 2 ಕ್ಕೆ ನಡೆಯಲಿದೆ.
ಜಿಲ್ಲಾ ಸಮಿತಿ ಅಧ್ಯಕ್ಷ ವಿ.ಯು ಇಸ್ಹಾಖ್ ಝುಹ್ರಿ ಕಾನಕೆರೆ ರವರ ಅಧ್ಯಕ್ಷತೆಯಲ್ಲಿ ನಿರ್ವಹಣಾ ಸಮಿತಿ ಕನ್ವೀನರ್ ತೌಸೀಫ್ ಸಅದಿ ಹರೇಕಳ ಕಾರ್ಯಕ್ರಮವನ್ನು ಉದ್ಘಾಟಿಸುವರು.
ಸಾಂಘಿಕ ಕಾರ್ಯಾಚರಣೆಯ ವಿವಿಧ ವ್ಯವಸ್ಥೆಗಳ ಬಗ್ಗೆ ಜಿಲ್ಲಾ ನಾಯಕರಾದ ಬಷೀರ್ ಮದನಿ ಅಲ್ ಕಾಮಿಲ್ ಕೂಳೂರು,ಪ್ರಿಂಟೆಕ್ ಅಬ್ದುರ್ರಹ್ಮಾನ್ ಹಾಜಿ ಕೃಷ್ಣಾಪುರ,ಬದ್ರುದ್ದೀನ್ ಸಖಾಫಿ ಅಲ್ ಅಝ್ಹರಿ ಕೈಕಂಬ,ಹಾಫಿಳ್ ಯಅಕೂಬ್ ಸಅದಿ ನಾವೂರು ಮಾತನಾಡುವರು, ಸಮಾರಂಭದಲ್ಲಿ ನಮ್ಮಿಂದ ಅಗಲಿದ ರಾಜ್ಯ ಸುನ್ನೀ ಉಲಮಾ ಒಕ್ಕೂಟದ ನಾಯಕ ಮರ್ಹೂಂ ಕೆ.ಎಂ ಇಸ್ಮಾಈಲ್ ಮುಸ್ಲಿಯಾರ್ ಮಿತ್ತೂರು ಕಂಕನಾಡಿ ಉಸ್ತಾದ್ ರವರ ಹೆಸರಿನಲ್ಲಿ ತಹ್ಲೀಲ್ ಮಜ್ಲಿಸ್ ನಡೆಯಲಿದೆ, ಜಿಲ್ಲಾ ಸಮಿತಿ ಅಧೀನದ ವಿವಿಧ ಘಟಕಗಳ ಸರಿ ಸುಮಾರು ಐನೂರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಸಮಿತಿ ಸಂಘಟನಾ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.