ಕಲ್ಪತ್ತಾ (www.vknews.in) : ಎರಡೂವರೆ ವರ್ಷದ ಬಾಲಕನ ಗಂಟಲಿಗೆ ಚೆಂಡು ಸಿಲುಕಿ ದಾರುಣ ಅಂತ್ಯ ಕಂಡಿದ್ದಾನೆ. ವಯನಾಡು ಚೆನ್ನಲೋಡು ಮೂಲದ ಮುಹಮ್ಮದ್ ಬಶೀರ್ ಎಂಬವರ ಪುತ್ರ ಮುಹಮ್ಮದ್ ಅಬೂಬಕರ್ ಮೃತಪಟ್ಟ ಬಾಲಕ. ನಿನ್ನೆ ರಾತ್ರಿ ಹತ್ತು ಗಂಟೆಗೆ ಈ ಘಟನೆ ನಡೆದಿದೆ. ಚೆಂಡು ಗಂಟಲಿಗೆ ಸಿಲುಕಿದ ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತನ ಪ್ರಾಣ ಉಳಿಸಲಾಗಲಿಲ್ಲ.
ಮೊದಲಿಗೆ ಎರಡು ಆಸ್ಪತ್ರೆಗಳಿಗೆ ಹೋದರೂ ಅಲ್ಲಿಂದ ಚೆಂಡನ್ನು ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಮೆಪ್ಪಾಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ರಾತ್ರಿ ವೇಳೆ ಸಾವು ಸಂಭವಿಸಿದೆ. ಆಟವಾಡುವಾಗ ಸಣ್ಣ ಚೆಂಡು ಗಂಟಲಿಗೆ ಸಿಲುಕಿ ಉಸಿರಾಟಕ್ಕೆ ತೊಂದರೆಯಾಗುತ್ತಿತ್ತು. ಘಟನೆ ನಡೆದ ತಕ್ಷಣ ಮಗುವನ್ನು ಮೂರು ಆಸ್ಪತ್ರೆಗಳಿಗೆ ಕರೆದೊಯ್ದರೂ ಜೀವ ಉಳಿಸಲು ಸಾಧ್ಯವಾಗದ ದಾರುಣ ಘಟನೆ ನಡೆದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.