(www.vknews.in) : ಅಟ್ಟಿಂಗಲ್ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಹಾಗೂ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ ಮುರಳೀಧರನ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು. ಕ್ಷೇತ್ರದಲ್ಲಿ ವಿ.ಮುರಳೀಧರನ್ಗೆ ಮತ ಯಾಚಿಸಿ ಹಾಕಲಾಗಿದ್ದ ಬೋರ್ಡ್ಗಳಲ್ಲಿ ವಿಗ್ರಹದ ಚಿತ್ರ ಹಾಕಲಾಗಿದೆ ಎಂಬ ದೂರು ದಾಖಲಾಗಿತ್ತು. ಅಟ್ಟಿಂಗಲ್ ಲೋಕಸಭಾ ಕ್ಷೇತ್ರದ ವರ್ಕಳದಲ್ಲಿ ಈ ಘಟನೆ ನಡೆದಿದೆ.
ಲೋಕಸಭೆ ಅಭ್ಯರ್ಥಿಗೆ ಮತ ಕೇಳುವ ಬೋರ್ಡ್ನಲ್ಲಿ ಪ್ರಧಾನಿ ಮತ್ತು ವಿ ಮುರಳೀಧರನ್ ಅವರ ಚಿತ್ರದೊಂದಿಗೆ ವಿಗ್ರಹದ ಚಿತ್ರವನ್ನು ಸೇರಿಸಲಾಗಿದೆ. ಇದರ ವಿರುದ್ಧ ಎಲ್ ಡಿಎಫ್ ಕ್ಷೇತ್ರ ಸಮಿತಿ ದೂರು ದಾಖಲಿಸಿದೆ. ವಿಗ್ರಹದ ಚಿತ್ರವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿರುವುದು ಗಂಭೀರ ಉಲ್ಲಂಘನೆ ಎಂದು ಎಲ್ಡಿಎಫ್ ಆರೋಪಿಸಿದೆ.
ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಚಿಹ್ನೆಗಳನ್ನು ಬಳಸುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಚುನಾವಣಾ ಆಯೋಗವು ಈ ಹಿಂದೆ ರಾಜಕೀಯ ಪಕ್ಷಗಳಿಗೆ ಸೂಚನೆಗಳನ್ನು ನೀಡಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.