ಬಂಟ್ವಾಳ (www.vknews.in): ಪಚ್ಚಿನಡ್ಕ ದಿ. ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ಸಮಿತಿ ವತಿಯಿಂದ ಬೆಂಜನಪದವು ಸಮೀಪದ ಕಲ್ಪನೆ ಜಂಕ್ಷನ್ ನಲ್ಲಿ ನಿರ್ಮಾಣವಾದ ದಿ.ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರ ಸ್ಮಾರಕ ವೃತ್ತದ ಲೋಕಾರ್ಪಣೆ ಹಾಗೂ ಪುತ್ಥಳಿಯ ಅನಾವರಣ ಕಾರ್ಯಕ್ರಮ ಆದಿತ್ಯವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪೊಳಲಿ ತಪೋವನದ ವಿವೇಕಾಚೈತ್ಯಾನಂದ ಸ್ವಾಮಿ ಮಾತನಾಡಿ, ಜೀವನದಲ್ಲಿ ವ್ಯಕ್ತಿ ಮಾಡಿದ ಒಳ್ಳಯತನ ಹಾಗೂ ಸಮಾಜದಲ್ಲಿ ಗುರುತಿಸಿಕೊಂಡಿರುವ ರೀತಿ ಮಾತ್ರ ಜೀವನ ನಂತರವೂ ಜೀವಂತವಾಗಿರುತ್ತದೆ ಎಂದ ಅವರು ವೃತ್ತ ಅಥವಾ ಪುತ್ಥಳಿ ನಿರ್ಮಾಣ ಮಾಡುವುದು ಸುಲಭ, ಆದರೆ ಮುಂದಿನ ದಿನಗಳಲ್ಲಿ ಅದರ ರಕ್ಷಣೆ ಮತ್ತು ನಿರ್ವಹಣೆ ಉತ್ತಮವಾಗಿ ಮಾಡುವ ಜವಬ್ದಾರಿ ನಮ್ಮ ಮೇಲಿದ್ದು,ಅಗೌರವ ತರುವ ಕೆಲಸ ಆಗಬಾರದು ಎಂದು ಅವರು ಹೇಳಿದರು.
ಸೇಸಪ್ಪ ಕೋಟ್ಯಾನ್ ಅವರ ಹೆಸರು ಹೇಳುವುದಕ್ಕಿಂತ ಅವರ ಬದುಕಿನ ಆದರ್ಶದ ವ್ಯಕ್ತಿತ್ವವನ್ನು,ಉತ್ತಮ ಗುಣನಡತೆಯನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ದಿ.ಸೇಸಪ್ಪ ಕೋಟ್ಯಾನ್ ಸುಕೃತ ಕರ್ಮಗಳನ್ನು ಬಹಳ ಪ್ರಾಮಾಣಿಕವಾಗಿ ಮಾಡಿದ್ದಾರೆ. ಬಡವರ ಕಣ್ಣೀರು ಒರೆಸುವ ಕಾರ್ಯವನ್ನು ಸಮಾಜಸೇವೆ ಮೂಲಕ ಮಾಡಿದ್ದಾರೆ. ಅನೇಕ ಧಾರ್ಮಿಕ , ಸಾಮಾಜಿಕ, ಶೈಕ್ಷಣಿಕ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಓರ್ವ ಸಾಧಕನಾಗಿ ಬೆಳೆದವರು,ಶಕ್ತಿಯನ್ನು ನೀಡಿದವರು ಎಂದರು .
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ತೊಡಂಬಿಲ ಸೇಕ್ರೆಡ್ ಹಾರ್ಟ್ ಚರ್ಚ್ ನ ಧರ್ಮ ಗುರು ಆಂಟನಿ ಲೋಬೋ, ಉದ್ದಬೆಟ್ಟು ಮಸೀದಿಯ ಧರ್ಮ ಗುರು ಕೆ.ವಿ.ಮಜೀದ್ ದಾರಿಮಿ, ದಿ.ಸೇಸಪ್ಪ ಕೋಟ್ಯಾನ್ ಅವರ ಧರ್ಮಪತ್ನಿ ಚಂದ್ರಾವತಿ ಸೇಸಪ್ಪ ಕೋಟ್ಯಾನ್, ನಿವೃತ್ತ ಮುಖ್ಯ ಶಿಕ್ಷಕ ಮುಖ್ಯೋಪಾಧ್ಯಾಯ ಜಯರಾಮ ಶೆಟ್ಟಿ ಕೊಡಂಗೆ, ಕೆ.ಪಿ.ಶೆಟ್ಟಿ ಬೆಂಜನಪದವು, ಗುತ್ತಿಗೆದಾರ ದಿವಾಕರ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.
ಪಚ್ಚಿನಡ್ಕ ದಿ.ಕೆ.ಸೇಸಪ್ಪ ಕೋಟ್ಯಾನ್ ಸ್ಮಾರಕ ವೃತ್ತ ನಿರ್ಮಾಣ ಸಮಿತಿ ಅಧ್ಯಕ್ಷ ಜಿ.ಪಂ.ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಸ್ವಾಗತಿಸಿ, ಚಂದ್ರಶೇಖರ ಭಂಡಾರಿ ವಂದಿಸಿದರು. ಶಿಕ್ಷಕ ರಾಮಚಂದ್ರರಾವ್ ಕಾರ್ಯಕ್ರಮ ನಿರೂಪಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.