ಕಾಸರಗೋಡು (www.vknews.in) : ಹಗಲು ಹೊತ್ತಿನಲ್ಲಿ ಎಟಿಎಂಗೆ ಹಣ ತುಂಬಲು ಬಂದ ವ್ಯಾನ್ನಿಂದ 50 ಲಕ್ಷ ರೂ.ಗಳನ್ನು ಕದ್ದೊಯ್ದಿರುವ ಬಗ್ಗೆ ಮಾಹಿತಿ ಲಭಿಸಿದೆ. ಘಟನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಕಾಸರಗೋಡು, ಕುಂಬಳ, ಮಂಜೇಶ್ವರ, ಬದಿಯಡುಕ ಪೊಲೀಸರ ತಂಡ ಕಳ್ಳನ ಪತ್ತೆಗಾಗಿ ಉಪ್ಪಳ ಪೇಟೆಯಲ್ಲಿ ಹರಸಾಹಸ ನಡೆಸುತ್ತಿದ್ದಾರೆ.
ಪಟ್ಟಣದ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳನ್ನೂ ಪರಿಶೀಲಿಸಲಾಗುತ್ತಿದೆ. ವ್ಯಕ್ತಿಯೊಬ್ಬರು ಚೀಲದೊಂದಿಗೆ ತರಾತುರಿಯಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ. ಅವನು ಪ್ಯಾಂಟ್ ಮತ್ತು ಶರ್ಟ್ ಧರಿಸಿದ್ದಾನೆ. ಈ ದೃಶ್ಯವನ್ನು ಪೊಲೀಸರು ವಿವರವಾಗಿ ಪರಿಶೀಲಿಸುತ್ತಿದ್ದಾರೆ. ಸಮೀಪದ ಪ್ರದೇಶಗಳಲ್ಲಿನ ಸಿಸಿಟಿವಿಗಳನ್ನೂ ಪರಿಶೀಲಿಸಲಾಗುತ್ತಿದೆ. ಬುಧವಾರ ಮಧ್ಯಾಹ್ನ 2:30ರ ಸುಮಾರಿಗೆ ದರೋಡೆ ನಡೆದಿದೆ.
ಮಂಜೇಶ್ವರಂ ಉಪ್ಪಳದಲ್ಲಿ ಖಾಸಗಿ ಬ್ಯಾಂಕ್ನ ಎಟಿಎಂನಿಂದ 50 ಲಕ್ಷ ರೂ ಕಳ್ಳತನವಾಗಿದೆ. ಆಕ್ಸಿಸ್ ಬ್ಯಾಂಕ್ ನ ಎಟಿಎಂಗೆ ಹಣ ತಂದಿದ್ದ ವಾಹನದಲ್ಲಿ 50 ಲಕ್ಷ ರೂಪಾಯಿ ಕಳ್ಳತನವಾಗಿದೆ. ಉಪ್ಪಳ ಬಸ್ ನಿಲ್ದಾಣದ ಮುಂಭಾಗದ ಎಟಿಎಂನಲ್ಲಿ ಹಣ ತುಂಬಲು ಖಾಸಗಿ ಏಜೆನ್ಸಿಯವರ ವಾಹನದಲ್ಲಿ ಹಣ ತರಲಾಗಿತ್ತು. ನೌಕರರು ವಾಹನಕ್ಕೆ ಬೀಗ ಜಡಿದು ಎಟಿಎಂ ಕೌಂಟರ್ಗೆ ತೆರಳಿದ ಸಂದರ್ಭದಲ್ಲಿ 50 ಲಕ್ಷ ರೂ ಕಳ್ಳತನವಾಗಿದೆ.
ಈ ವೇಳೆ ಕಳ್ಳರು ವಾಹನದ ಗಾಜು ಒಡೆದು ಸೀಟಿನ ಮೇಲೆ ಇಟ್ಟಿದ್ದ 50 ಲಕ್ಷ ರೂ ಕಳವುಗಯಲಾಗಿದೆ. ಘಟನೆ ಬಳಿಕ ವ್ಯಕ್ತಿಯೊಬ್ಬ ಉಪ್ಪಳ ಬಸ್ ನಿಲ್ದಾಣದ ಕಡೆಗೆ ಹೋಗಿದ್ದ ಎನ್ನಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.