(www.vknews.in) ; ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವಾದಿ ರಾಷ್ಟ್ರವಾದ ಭಾರತ ದೇಶ ಮಗದೊಂದು ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ನಿಂತಿದೆ. ಈ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜಾಪ್ರಭುತ್ವದ ಮೂಲ ಧ್ಯೇಯವೇ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸುವಂತಹಾ ವ್ಯವಸ್ಥೆ ಆಗಿರುತ್ತದೆ. ಇಲ್ಲಿ ಪ್ರತಿಯೊಬ್ಬ ಪ್ರಜೆಯ ಮತವೂ ಅತ್ಯಮೂಲ್ಯವಾಗಿರುತ್ತದೆ. ಮತದಾನ ಎನ್ನುವುದು ನಮ್ಮ ಹಕ್ಕು ಮಾತ್ರವಲ್ಲದೇ, ನಮ್ಮ ಶಕ್ತಿ ಕೂಡಾ ಆಗಿರುತ್ತದೆ.
ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಈ ಚುನಾವಣೆ ಎಂಬ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬ ಪ್ರಜೆಯೂ ಪ್ರಜ್ಞಾಪೂರ್ವಕವಾಗಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿಲ್ಲಿ ನಿಂತಿದ್ದೇವೆ. ನನ್ನದೊಂದು ಮತದಿಂದ ಜಗತ್ತು ಅಡಿ ಮೇಲಾಗದು ಎಂಬ ತಾತ್ಸರದ ಧೋರಣೆ ಬಹಳ ಅಪಾಯಕಾರಿ. ಇಂತಹ ಉಡಾಫೆಯ ವರ್ತನೆ ಮತ್ತು ನನ್ನದೊಂದು ಮತದಿಂದ ಏನಾಗಬಹುದು ಎಂಬ ನಿರ್ಲಕ್ಷದಿಂದಾಗಿ ನಾವು ಬಹಳ ಕಷ್ಟನಷ್ಟ ಅನುಭವಿಸಿರುವುದು ಚರಿತ್ರೆಗಳಿಂದ ಹಲವು ಬಾರಿ ಸಾಬೀತಾಗಿದೆ. ಪ್ರತಿಯೊಂದು ಮತವೂ ಅತ್ಯಮೂಲ್ಯ ಮತ್ತು ಮತದಾನ ಎನ್ನುವುದು ಬಹಳ ಪವಿತ್ರವಾದ ಕರ್ತವ್ಯ ಎಂದು ಪ್ರತಿಯೊಬ್ಬ ಮತದಾರನೂ ತಿಳಿದುಕೊಂಡಲ್ಲಿ ಮಾತ್ರ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಾಣವಾಗಬಹುದು. ಮತದಾನವನ್ನು ಹಣಕ್ಕಾಗಿ ಹೆಂಡಕ್ಕಾಗಿ ಮತ್ತು ಇನ್ಯಾವುದೇ ವಸ್ತುಗಳಿಗಾಗಿ ಮಾರಿಕೊಳ್ಳುವುದು ಮಹಾಪಾಪ.
ಇದೊಂದು ರೀತಿಯ ಸಾಮಾಜಿಕ ವ್ಯಭಿಚಾರ ಎಂದರೂ ತಪ್ಪಲ್ಲ. ನೋಟಿಗಾಗಿ ವೋಟು ಎಂಬ ಮನೋಧರ್ಮವನ್ನು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರೂ ಸಾರ್ವರ್ತಿಕವಾಗಿ ತಿರಸ್ಕರಿಸಬೇಕು. ವ್ಯಕ್ತಿಯ ನಡತೆ, ಚಾರಿತ್ರ್ಯ, ಸಾಮಾಜಿಕ ಬದ್ಧತೆ, ಸಾಮಾಜಿಕ ಕಳಕಳಿ, ದೇಶಭಕ್ತಿ ಇವೆಲ್ಲವನ್ನೂ ಅಳೆದು ತೂಗಿ ಮತದಾನ ಮಾಡಬೇಕಾದ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ. ನಮ್ಮ ದೇಶದ ಭದ್ರತೆಗೆ ಮತ್ತು ಸುರಕ್ಷತೆಗೆ ಪೂರಕವಾದ ವಾತಾವರಣ ಕಲ್ಪಿಸುವ ವ್ಯಕ್ತಿಗೆ ಮತ್ತು ತತ್ವಕ್ಕೆ ಜನರು ಪ್ರಜ್ಞಾ ಪೂರ್ವಕವಾಗಿ ಮತದಾನ ಮಾಡಿದರೆ ಮಾತ್ರ ದೇಶದ ಪ್ರಗತಿ ಸಾಧ್ಯವಾಗಬಹುದು. ನಾವು ಮತದಾನ ಮಾಡುವುದರಿಂದ ನಾಳೆ ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳನ್ನು ಅಧಿಕಾರಯುತವಾಗಿ ಪ್ರಶ್ನಿಸುವ ನೈತಿಕ ಹಕ್ಕನ್ನು ನಾವು ಪಡೆಯುತ್ತೇವೆ. ಈ ಕಾರಣಕ್ಕಾದರೂ ಪ್ರತಿಯೊಬ್ಬರು ಮತದಾನ ಮಾಡಲೇಬೇಕು. ಒಂದು ಬಲಿಷ್ಠ, ಸುದೃಡ, ಆರೋಗ್ಯವಂತ ಸಮೃದ್ಧ ಭಾರತ ದೇಶದ ನಿರ್ಮಾಣಕ್ಕಾಗಿ ನಾವೆಲ್ಲರೂ ನಮ್ಮ ಹಕ್ಕನ್ನು ಅಧಿಕಾರಯುತವಾಗಿ ಚಲಾಯಿಸೋಣ ಎಂದು ಡಾ|| ಮುರಲೀ ಮೋಹನ್ ಚೂಂತಾರುಸಮಾದೇಷ್ಠರು ಗೃಹರಕ್ಷಕದಳ ವರು ಅಭಿಪ್ರಾಯಪಟ್ಟರು.
ದಿನಾಂಕ ೩೧/೦೩/೧೦೧೪ನೆ ಭಾನುವಾರ ಪುತ್ತೂರು ಗ್ರಹರಕ್ಷಕ ದಳ ಕಛೇರಿಗೆ ಭೇಟಿ ನೀಡಿದರು ಮತ್ತು ಚುನಾವಣಾ ಸಿದ್ಧತೆ ಸಭೆ ನಡೆಸಿದರು.ಇದೇ ಸಂದರ್ಭದಲ್ಲಿ ಗ್ರಹರಕ್ಷಕರು ಮತದಾನ ಜಾಗ್ರತಿ ಜಾಥಾ ನಡೆಸಿದರು. ಈ ಸಂಧರ್ಬದಲ್ಲಿ ಪುತ್ತೂರು ಘಟಕಾಧಿಕಾರಿ ಶ್ರೀ ಅಭಿಮನ್ಯು ರೈ,ಶ್ರೀ ಜಗನ್ನಾಥ್,ಉಳ್ಳಾಲ ಘಟಕಾಧಿಕಾರಿ ಶ್ರೀ ಸುನಿಲ್ ಹಾಗೂ ಇತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.