(www.vknews.in) ; ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಪ್ರಜಾಪ್ರಭುತ್ವದ ಮೂಲ ಧ್ಯೇಯವೇ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳೇ ನಡೆಸುವಂತಹಾ ವ್ಯವಸ್ಥೆ ಆಗಿರುತ್ತದೆ. ಇಲ್ಲಿ ಪ್ರತಿಯೊಬ್ಬ ಪ್ರಜೆಯ ಮತವೂ ಅತ್ಯಮೂಲ್ಯವಾಗಿರುತ್ತದೆ. ಮತದಾನ ಎನ್ನುವುದು ನಮ್ಮ ಹಕ್ಕು ಮಾತ್ರವಲ್ಲದೇ, ನಮ್ಮ ಶಕ್ತಿ ಕೂಡಾ ಆಗಿರುತ್ತದೆ. ಪ್ರತಿ 5 ವರ್ಷಕ್ಕೊಮ್ಮೆ ನಡೆಯುವ ಈ ಚುನಾವಣೆ ಎಂಬ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬ ಪ್ರಜೆಯೂ ಪ್ರಜ್ಞಾಪೂರ್ವಕವಾಗಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ನಾವಿಲ್ಲಿ ನಿಂತಿದ್ದೇವೆ.
ಮತದಾನವನ್ನು ಹಣಕ್ಕಾಗಿ ಮತ್ತು ಇನ್ಯಾವುದ ಮಾರಿಕೊಳ್ಳುವುದು ಮಹಾಪಾಪ. ಇದೊಂದು ವ್ಯಭಿಚಾರ ಅಳೆದು ತೂಗಿ ಮತದಾನ ನಾವು ಮತದಾನ ಮಾಡುವುದರಿಂದ ನಾಳೆ ನಮ್ಮಿಂದ ಆಯ್ಕೆಯಾದ ಜನಪ್ರತಿನಿಧಿಗಳನ್ನು ಅಧಿಕಾರಯುತವಾಗಿ ಪ್ರಶ್ನಿಸುವ ನೈತಿಕ ಹಕ್ಕನ್ನು ನಾವು ಪಡೆಯುತ್ತೇವೆ. ಈ ಕಾರಣಕ್ಕಾದರೂ ಪ್ರತಿಯೊಬ್ಬರು ಮತದಾನ ಮಾಡಲೇಬೇಕು. ಒಂದು ಬಲಿಷ್ಠ, ಸುದೃಡ, ಆರೋಗ್ಯವಂತ ಸಮೃದ್ಧ ಭಾರತ ದೇಶದ ನಿರ್ಮಾಣಕ್ಕಾಗಿ ನಾವೆಲ್ಲರೂ ನಮ್ಮ ಹಕ್ಕನ್ನು ಅಧಿಕಾರಯುತವಾಗಿ ಚಲಾಯಿಸೋಣ ಎಂದು ಡಾ|| ಮುರಲೀ ಮೋಹನ್ ಚೂಂತಾರುಸಮಾದೇಷ್ಠರು ಗೃಹರಕ್ಷಕದಳ ವರು ಅಭಿಪ್ರಾಯಪಟ್ಟರು.
ದಿನಾಂಕ ೩೧/೦೩/೧೦೧೪ನೆ ಭಾನುವಾರ ವಿಟ್ಲ ಗ್ರಹರಕ್ಷಕ ದಳ ಕಛೇರಿಗೆ ಭೇಟಿ ನೀಡಿದರು ಮತ್ತು ಚುನಾವಣಾ ಸಿದ್ಧತೆ ಸಭೆ ನಡೆಸಿದರು.ಇದೇ ಸಂದರ್ಭದಲ್ಲಿ ಗ್ರಹರಕ್ಷಕರು ಮತದಾನ ಜಾಗ್ರತಿ ಜಾಥಾ ನಡೆಸಿದರು. ಈ ಸಂಧರ್ಬದಲ್ಲಿ ವಿಟ್ಲ ಘಟಕಾಧಿಕಾರಿ ಶ್ರೀ ಸಂಜೀವ ಹಾಗೂ ಇತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.