ಮುಲ್ಕಿ (www.vknews.com) : ಇಲ್ಲಿನ ಕಾರ್ನಾಡುವಿನಲ್ಲಿ ಕಾರ್ಯಾಚರಿಸುತ್ತಿರುವ ಮೈಮೂನಾ ಫೌಂಡೇಶನ್ ನಿರ್ದೇಶಕ ಹಾಗೂ ಆಪದ್ಬಾಂಧವ ಆಸೀಫ್ ರವರು ತಮ್ಮ ಅನಾಥಾಶ್ರಮದಲ್ಲಿ ಅನಾರೋಗ್ಯದಿಂದ ನಿಧನ ಹೊಂದಿದ ಬ್ರಾಹ್ಮಣ ಸಮುದಾಯದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆಸಿ ಮಾದರಿಯಾಗಿದ್ದಾರೆ.
ಮೂಲತ; ಉಡುಪಿ ಜಿಲ್ಲೆಯ ಪಡುಬಿದ್ರೆ ಬ್ರಹ್ಮಸ್ತಾನ ಬಳಿಯ ನಿವಾಸಿ ಪಧವೀದರ ವೇಣುಗೋಪಾಲ ರಾವ್(62) ಎಂಬವರು ಕಳೆದ ನಾಲ್ಕು ವರ್ಷಗಳ ಹಿಂದೆ ಮಾನಸಿಕವಾಗಿ ಪಡುಬಿದ್ರೆ ದೇವಸ್ಥಾನದ ಬಳಿಯಲ್ಲಿ ನಿರ್ಗತಿಕರಾಗಿದ್ದಾಗ ಸ್ಥಳೀಯರು ಮುಲ್ಕಿಯ ಕಾರ್ನಾಡು ವಿನ ಆಪಾದ್ಬಾಂದವ ಆಸೀಫ್ ರವರಿಗೆ ತಿಳಿಸಿದ್ದು ಕೂಡಲೇ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಸ್ವಲ್ಪ ಮಟ್ಟಗೆ ಗುಣಮುಖರಾಗಿದ್ದು ಬಳಿಕ ಮನೆಗೆ ಕರೆದುಕೊಂಡು ಹೋಗುವಂತೆ ವೇಣುಗೋಪಾಲರಾವ್ ಸಂಬಂದಿಕರನ್ನು ವಿನಂತಿಸಿದಾಗ ಸಂಬಂದಿಕರಿಂದ ಸೂಕ್ತ ಸ್ಪಂದನೆ ದೊರಕದೆ ಆಪದ್ಬಾಂಧವ ಆಸೀಫ್ ರವರು ಮುಲ್ಕಿಯ ಕಾರ್ನಾಡಿನಲ್ಲಿ ಕಾರ್ಯಾಚರಿಸುತ್ತಿರುವ ತಮ್ಮ ಅನಾಥಾಶ್ರಮದಲ್ಲಿ ಅವರನ್ನು ಸಾಕಿ ಸಲಹುತ್ತಿದ್ದರು.
ಆದರೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಅವರು ತಮ್ಮ ಮನೆಯವರನ್ನು ಆಗಾಗ್ಗೆ ಕೇಳುತ್ತಿದ್ದರು. ಆದರೆ ಆಸೀಫ್ ಮನೆಯವರನ್ನು ಸಂಪರ್ಕಿಸಲು ಬಹಳಷ್ಟು ಪ್ರಯತ್ನ ಮಾಡಿದರು ಯಾವುದೇ ಸ್ಪಂದನೆ ದೊರೆಯುತ್ತಿರಲಿಲ್ಲ ಎಂದು ಆಸೀಫ್ ಬೇಸರ ವ್ಯಕ್ತಪಡಿಸಿದ್ದಾರೆ.
ಗುರುವಾರ ವೇಣುಗೋಪಾಲ ರಾವ್ ಆರೋಗ್ಯ ಹದಗೆಟ್ಟು ಮಾನಸಿಕ ನೋವಿನಿಂದ ಬಳಲಿ ನಿಧನರಾಗಿದ್ದು ಕೂಡಲೇ ಆಪದ್ಬಾಂಧವ ಆಸೀಫ್ ಅವರ ಸಂಬಂದಿಕರಾದ ಪಡುಬಿದ್ರೆಯ ಸುಬ್ರಹ್ಮಣ್ಯ ರಾವ್ ವರನ್ನು ಸಂಪರ್ಕಿಸಿ ಮೂಲ್ಕಿ ಠಾಣೆಗೆ ಬರಲು ಹೇಳಿದಾಗ ಅವರಿಗೂ ತಮಗೂ ಸಂಬಂದವಿಲ್ಲದಂತೆ ವರ್ತಿಸಿ ಸುಬ್ರಹ್ಮಣ್ಯ ರಾವ್ ಮಾನವೀಯತೆ ಮರೆತಿದ್ದಾರೆ. ಆದರೂ ಆಸೀಫ್ ಒತ್ತಾಯದ ಮೇರೆಗೆ ಮುಲ್ಕಿ ಠಾಣೆಗೆ ಆಗಮಿಸಿದ ಸುಬ್ರಹ್ಮಣ್ಯ ರಾವ್ರವರು ನಿಧನರಾದ ವೇಣುಗೋಪಾಲ ರಾವ್ ರವರ ಮುಲ್ಕಿ ಹಿಂದೂ ರುದ್ರಭೂಮಿಯಲ್ಲಿ ನಡೆಸಲು ಮುಲ್ಕಿ ಪೊಲೀಸರ ಸಮ್ಮುಖದಲ್ಲಿ ಅನುಮತಿ ನೀಡಿ ಅಂತ್ಯಕ್ರಿಯೆ ಖರ್ಚು ನೀಡಿ ಹೊರಟುಹೋಗಿದ್ದಾರೆ.
ಈ ನಡುವೆ ನಿಧನರಾದ ವೇಣುಗೋಪಾಲ ರಾವ್ ರವರ ತಮ್ಮ ಉಡುಪಿಯಲ್ಲಿ ಜ್ಯೋತಿಷಿಯಾಗಿರುವ ರವೀಂದ್ರರಾವ್ ರವರನ್ನು ಕೂಡ ಆಸೀಫ್ ಸಂಪರ್ಕಿಸಿದಾಗ ಅವರು ಕೂಡ ಆಸೀಪ್ ಜೊತೆ ಉಢಾಫೆಯಾಗಿ ವತರ್ಿಸಿದ್ದು ತಾನು ಪೂಜಾ ಕರ್ಮದಲ್ಲಿದ್ದೇನೆ ನಿಧನ ವಾರ್ತೆ ತಿಳಿಸಿ ತನ್ನ ಪೂಜಾ ಕರ್ಮವನ್ನು ಹಾಳು ಮಾಡಿದ್ದೀರಿ ಎಂದು ಆಸೀಫ್ ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಆಸೀಪ್ ತಿಳಿಸಿ ಅವರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ವಾರಸುದಾರರರಿದ್ದರೂ ಅನಾಥರಾದ ಬ್ರಾಹ್ಮಣ ಸಮುದಾಯದ ವೇಣುಗೋಪಾಲ ರಾವ್ ಶವಕ್ಕೆ ಮೂಲ್ಕಿ ಕಾರ್ನಾಡಿನ ಆಪದ್ಬಾಂಧವ ಆಸೀಫ್ ಹೆಗಲುಕೊಟ್ಟು ಮೂಲ್ಕಿಯ ರುದ್ರಭೂಮಿಯಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಸಿ ಮಾದರಿಯಾಗಿದ್ದಾರೆ.
ಈ ಸಂದರ್ಭ ಮುಲ್ಕಿ ನಗರ ಪಂಚಾಯತಿ ಸಿಬ್ಬಂದಿ ಕಿಶೋರ್ ಶೆಟ್ಟಿ, ಆಪದ್ಬಾಂದವ ಆಶ್ರಮದ ಸಿಬ್ಬಂದಿ ದಾವೂದ್,ಆಶ್ರಮದ ವಿಶೇಷ ಅತಿಥಿ ದಿನೇಶ್, ವಿಶ್ವನಾಥ ಪೂಜಾರಿ, ಅಫ್ತಾಬ್ ಮತ್ತಿತರರು ಆಸೀಫ್ ರವರಿಗೆ ಹೆಗಲುಕೊಟ್ಟಿದ್ದು ಜಾತಿ ಜಾತಿ ಎಂದು ಹೊಡೆದಾಡಿಕೊಳ್ಳುತ್ತಿರುವ ಈಗಿನ ಕಾಲ ಘಟ್ಟದಲ್ಲಿ ಅಪಾಧ್ಬಾಂಧವ ಆಸೀಪ್ ಮಾನವೀಯತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿ: ಅದ್ದಿ ಬೊಳ್ಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.