(www.vknews.com)
ಭುಜದಿ ಹೊತ್ತ ಮೂಟೆ, ಹರುಕು ಮುರುಕು ಬಟ್ಟೆ, ಕೈಯಲ್ಲಿ ಖಾಯಂ ತಟ್ಟೆ ಈ ಬಿಕ್ಷಾಟನೆ ಶಾಪವೇ?ಅಥವಾ ಶಪಥವೇ?,
ನಾಲ್ಕಕ್ಷರ ಕಲಿಯಬೇಕೆಂಬ ಹಂಬಲ, ನಮಗ್ಯಾರಿಲ್ಲಿ ನೀಡ್ಯಾರು ಬೆಂಬಲ, ಮೂಳೆ ಮುರಿದು ದುಡಿದು ದಣಿದರೂ ಸಿಗುವುದು ನಾಲ್ಕಾಣಿ ಸಂಬಳ ಬಾಗು ಬೆನ್ನಿನ ಮುದುಕಿಯಂತೆ ವ್ಯರ್ಥವಾಯ್ತು ತೋಳ್ಬಲ….
ವಿದ್ಯಾಲಯದಿ… ಮಗುವಿನ ಪಾದದಿ… ಕಟ್ಟುನಿಟ್ಟಾದ ಸೂಟು ಬೂಟು, ಆದರೆ ನನ್ನೀ ಅಂಗುಲವು ಬೆಂದಿವೆ ತಾಪಕೆ ಸುಟ್ಟು !
ಆ ಶಿಶುವಿನ ಬಲ ಕೈಗೊಂದು ಬಣ್ಣದ ಕೊಡೆ, ಈ ಕೈಗಳಿಗೆ ಇಡುವವರಿಲ್ಲ ಪಾರು ವಡೆ.. ಎಡಕೈಯಲ್ಲಿ ಭೋಜನದ ಬುತ್ತಿ, ಆದರೆ ಒಂದೊತ್ತು ಉಪಹಾರಕ್ಕೆ ಸಾಕಾಯಿತು ಊರೂರು ಸುತ್ತಿ…
ನಮ್ಮಿಂದಾದ ಅನ್ಯಾಯವೇನು ಈ ಜಗಕ್ಕೆ? ನಮ್ಮ ಪಾಲಿಗೆ ಅಳಿಸಿಹೋದ ಇತಿಹಾಸವೇ ಕಲಿಕೆ? ಜೊತೆಗೆ ಸಹಿಸಬೇಕು ಸಹಸ್ರಾರು ಟೀಕೆ!
ಕೇಳಿರಿ ನಮ್ಮದೂ ಒಂದು ಬಯಕೆ
ಕರೆದೊಯ್ಯುವಿರಾ ಶಾಲೆಗೆ. . .. ಬಡತನದ ಕದವ ಮುಚ್ಚಿ ಕಾಲಿಡಬೇಕು ಯಶಸ್ವಿಗೆ…. ಸೋತಾಗ ಮೇಲೆತ್ತಿ ,, ಗೆದ್ದಾಗ ಬೆನ್ತಟ್ಟುವ ಬೆಂಬಲಿಗರು ಬೇಕೆನಗೆ
ಈ ಜಗದಿ ಭೀಕ್ಷಾಟನೆಯು ಅಂತ್ಯ ಕಾಣಲಿ ಬಡ ಶಿಶುವಿನ ಬದುಕಿಗೆ ಶಿಕ್ಷಣ ಆಸರೆಯಾಗಲಿ…
ಹೊರುವ ಮೂಟೆ ಬದಲಿಗೆ ಪುಸ್ತಕದ ಬಂಡಾರವ ಹೊರಲಿ. … ಹರಕು ಬಟ್ಟೆ ಬದಲಿಗೆ ಸಮವಸ್ತ್ರ ಧರಿಸಲಿ…. ಕೈಯಲ್ಲಿ ಉಳಿದ ಖಾಯಂ ತಟ್ಟೆಯ ಬದಲಿಗೆ ಪುಸ್ತಕವು ಖಾಯಂ ಆಗಿ ಬದಲಾಗಲಿ……
ನಸೀಬ ಗಡಿಯಾರ್✍️
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.