(www.vknews.com) : ಕರೋನಾ ವೈರಸ್ ಶ್ರೀಮಂತರು , ಬಡವರೆನ್ನದೆ ಎಲ್ಲರನ್ನು ಸಂಕಷ್ಟಕ್ಕೆ ದೂಡಿದೆ ಅದರಿಂದಗಿ ಲಾಕ್ದೌನ್ ಪ್ರಾರಂಭವಾಗಿ ವ್ಯಾಪಾರ , ವಹಿವಾಟು, ವರಮಾನ ಎಲ್ಲಾಕ್ಕೂ ತೆರೆಬಿದ್ದಿದೆ..
ಅಂಗಡಿಯವರು ತಿಂಗಳ ಬಾಡಿಗೆ , ವಿದ್ಯುತ್ ಶುಲ್ಕ ಕಟ್ಟುವುದಕ್ಕೂ ಪರದಾಡುವ ಸ್ಥಿತಿಯನ್ನು ಲಾಕ್ದೌನ್ ನಿರ್ಮಿಸಿದೆ ಹೀಗಿರುವಾಗ ಇಂಥ ಲಾಕ್ದೌನ್ ಸಮಯದಲ್ಲಿ ಜನರ ಅಗತ್ಯದ ದೈನಂದಿನ ಆಹಾರ ಪದಾರ್ಥಗಳನ್ನು ಪೂರೈಸಿದವರು ಯಾರು.? ಯಾವುದಾದರೂ ಆನ್ಲೈನ್ ಕಂಪನಿಗಳೇ ಅಥವಾ ಮಾಲ್ಗಳು ಗ್ರಾಹಕರ ನೆರವಿಗೆ ಬಂದಿರುವುದೇ ..?
ಅನೈಲೈನ್ ವಹಿವಾಟು ಹಾಗೂ ಬೃಹತ್ ಮಾಲ್ ಗಳಿಂದ ಸಣ್ಣ ಮತ್ತು ಮಧ್ಯಮ ವರ್ಗದ ವ್ಯಾಪಾರಸ್ಥರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕೆಂದು ಆಗ್ರಹಿಸಿ ದಿನಸಿ ವಿತರಕರು ಹಾಗೂ ವರ್ತಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರೂ ದಿನದಿಂದ ದಿನಕ್ಕೆ ಆನ್ಲೈನ್ ವ್ಯವಹಾರ ಹಾಗೂ ಬೃಹತ್ ಮಾರಾಟ ಮಳಿಗೆಗಳು ತಲೆ ಎತ್ತಿ ನಿಂತು ವ್ಯಾಪಾರವನ್ನೇ ಕುಲ ಕಸುಬು ಮಾಡಿಕೊಂಡು ಬದುಕುತ್ತಿರುವ ಸಣ್ಣ , ಪುಟ್ಟ ವರ್ತಕರ ಮೇಲೆ ಸಾಕಷ್ಟು ದುಷ್ಪರಿಣಾಮ ಬಿರುತ್ತಿತ್ತು ಇದರಿಂದಾಗಿ ರಾಜ್ಯದ ಲಕ್ಷಾಂತರ ಸಣ್ಣ , ಮಧ್ಯಮ ಕುಟುಂಬಗಳು ಬೀದಿ ಪಾಲಾಗುವ ಸ್ಥಿತಿ ಕೂಡ ಎದುರಾಗಿತ್ತು..
ಅವೈಜ್ಞಾನಿಕ ರಿಯಾಯತಿ ಮೂಲಕವೂ ಒಂದಕ್ಕೊಂದು ಉಚಿತವಾಗಿ ಕೊಡುವುದರ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದ ಬೃಹತ್ ಮಾರಾಟ ಮಾಳಿಗೆಗಳು ಇದರಿಂದ ಸಣ್ಣ , ಪುಟ್ಟ ಮಧ್ಯಮ ಪ್ರಮಾಣದ ವರ್ತಕರು ನಷ್ಟವನ್ನು ಅನುಭವಿಸುತ್ತಾ ಇದ್ದರು..
ಜನ ಸಾಮಾನ್ಯರಿಗೆ ಸುಲಭ ಗುಣಮಟ್ಟದ ಸರಕುಗಳನ್ನು ಸಣ್ಣ ಪುಟ್ಟ ವರ್ತಕರೆ ವಂಶ ಪರಂಪರ್ಯವಾಗಿ ಒದಗಿಸುತ್ತಾ ತಮ್ಮ ವೃತ್ತಿಯನ್ನು ಉಳಿಸಿಕೊಂಡು ಬಂದಿರುತ್ತಾರೆ.. ಅಲ್ಲದೇ ಚಿಲ್ಲರೆ ವ್ಯಾಪಾರಿಗಳು ನಿತ್ಯ ಗ್ರಾಹಕರಿಗೆ ಸಾಲದ ರೂಪದಲ್ಲಿ ಪದಾರ್ಥಗಳನ್ನು ವಿತರಿಸುತ್ತಾ ಇದ್ದರು.. ಇದೆಲ್ಲವನ್ನು ಜನಸಾಮಾನ್ಯರು ಮರೆತು ತಮ್ಮ ನಗರದಲ್ಲಿ ತಲೆ ಎತ್ತುತ್ತಿರುವ ಮಾಲ್ , ಅನೈಲೈನ್ ಕಂಪೆನಿಗಳ ಮೊರೆ ಹೋಗಿ ವ್ಯಾಪರಸ್ಥರಿಗೆ ಹೊಡೆತ ಕೊಟ್ಟಿದ್ದರು..ಆದರೆ..
1) ಈ ಲಾಕ್ದೌನ್ ಸಮಯದಲ್ಲಿ ಗ್ರಾಹಕರಿಗೆ ನಿರಂತರವಾಗಿ ದೈನಂದಿನ ಅಗತ್ಯ ಪದಾರ್ಥಗಳನ್ನು ಪೂರೈಸಿದವರು ಯಾರು ?, ಯಾವುದೇ ಅನೈಲೈನ್ ಕಂಪೆನಿಗಳೇ ,ಮಾಲ್ ಗಳು ನೆರವಿಗೆ ಬರಲಿಲ್ಲ..
2) ಯಾವುದೇ ಅಮಿಷಗಳನ್ನು ತೋರಿಸಿ ಅಗತ್ಯಕ್ಕಿಂತ ಹೆಚ್ಚಿನ ವಸ್ತುಗಳನ್ನು ಮಾರಾಟ ಮಾಡಿಲ್ಲ.. ಅಲ್ಲೈನ್ ಮತ್ತು ಮಾಲ್ ಗಳು ಒಂದಕ್ಕೆ ಇನ್ನೊಂದರಂತೆ ಕೊಳ್ಳುಬಾಕ ಸಂಸ್ಕೃತಿಯನ್ನು ಹುಟ್ಟು ಹಾಕಲಿಲ್ಲ..
3) ಅಗತ್ಯ ಬಿದ್ದಾಗ ನಿಮಗೆ ಸಲಹೆಗಳನ್ನು ನೀಡಿ ನಿಮ್ಮ ಖರ್ಚು ಕಡಿಮೆ ಮಾಡಿದೆ.. ಆದರೆ ಆನ್ಲೈನ್ನಲ್ಲಿ , ಮಾಲ್ ನಲ್ಲಿ ಕೆಲವೊಮ್ಮೆ ಅಲ್ಲಿನ ನೌಕರರು ಮಾತನಾಡುವುದೇ ಇಲ್ಲ..
4) ಗ್ರಾಹಕರು ಕೇಳಿದ ವಸ್ತು ಅವರಲ್ಲಿ ಇರದಿದ್ದರೆ ತರಿಸಿ ಕೊಡುವ ವಾಗ್ದಾನ ಮಾಡುತ್ತಾರೆ.. ಆನ್ಲೈನ್ನಲ್ಲಿ , ಮಾಲ್ ನಲ್ಲಿ ವಸ್ತುಗಳ ಆಯ್ಕೆ ಮಾಡಿ ಕೊಳ್ಳಬೇಕಾಗುತ್ತದೆ..
5 ) ಇಲ್ಲಿ ತೊಂದರೆಗಳು ಬಂದಲ್ಲಿ ನೇರವಾಗಿ ಗ್ರಾಹಕರು ವರ್ತಕರೊಂದಿಗೆ ಸಂವಾದಕ್ಕೆ ಇಳಿಯಬಹುದು.. ಅನೈಲೈನ್ , ಮಾಲ್ ನಲ್ಲಿ ನೌಕರರೊಂದಿಗೆ ಸಂಪರ್ಕದಿಂದ ಸಮಸ್ಯೆ ಬಗೆಹರಿಯುವುದಿಲ್ಲ..
6) ಖಾಯಂ ಗಿರಕಿಗಳಿಗೆ ಸಾಲ ಸೌಲಭ್ಯವಿರುತ್ತದೆ. ನಿಮ್ಮ ಊರಿನ ಯಾವುದೇ ಕಾರ್ಯಕ್ರಮ ಇದ್ದರು ದೇಣಿಗೆ ಕೂಡ ಕೊಡುತ್ತದೆ.. ಅನೈಲೈನ್ , ಮಾಲ್ ನಲ್ಲಿ ನಯಾಪೈಸೆಯು ಸಿಗದು ಅವರ್ಯಾರೂ ನಿಮ್ಮ ನೆರವಿಗೆ ಬರುವುದಿಲ್ಲ..
ಕೆ.ಜಿ.ಸರೋಜಾ ನಾಗರಾಜ್
ಇನ್ನು ಮುಂದೆ ಆಯ್ಕೆ ನಿಮ್ಮದು ಸಣ್ಣ , ಮಧ್ಯಮ ವರ್ತಕರೆ ಅಥವಾ ಅನೈಲೈನ್ , ಮಾಲ್ ಗಳೇ..? ಇಲ್ಲಿ ಜನಸಾಮಾನ್ಯರಿಗೂ ಹಾಗೂ ಗ್ರಹಕರಿಗೂ , ವರ್ತಕರಿಗೂ ಬೇರೆ ಜಿಲ್ಲೆಯಿಂದ ಅನೇಕ ಪದಾರ್ಥಗಳನ್ನು ಕೊಂಡು ತಂದು ವಿತರಿಸಿದವರು ಆಯಾ ಜಿಲ್ಲೆಯ ವರ್ತಕರ ಸಂಘಟನೆಯ ಅಧ್ಯಕ್ಷರು ಹಾಗೂ ಸದಸ್ಯರು ತುರ್ತು ಪರಿಸ್ಥಿತಿಯಲ್ಲಿ ಕರೋನಾ ವಾರಿಯರ್ಸ್ ಗಳಾಗಿ ಜನಸಾಮಾನ್ಯರ ಹಸಿವು ಅನ್ನೋ ದೊಡ್ಡ ಯುದ್ಧ ಗೆಲ್ಲುವುದಕ್ಕೆ ಕಾರಣಕರ್ತರಾಗಿದ್ದರೆ ನಿಜಕ್ಕೂ ನಿಮ್ಮಗಳಿಗೆ ನಮ್ಮ ಧನ್ಯವಾದಗಳು …
ಕೆ.ಜಿ.ಸರೋಜಾ ನಾಗರಾಜ್ ಪಾಂಡೋಮಟ್ಟಿ..
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.