ಕಾಪು (www.vknews.com) : ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ವತಿಯಿಂದ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಆಶಾ ಕಾರ್ಯಕರ್ತರಿಗೆ ಮತ್ತು ವೈಧ್ಯರ ಬಳಗಕ್ಕೆ ಸ್ಯಾನಿಟೈಸರ್ , ಮಾಸ್ಕ್ ಮತ್ತು ಕೊರೋನಾ ಜನಜಾಗ್ರತಿಯ ಮಡಚಿಕೆಗಳನ್ನು ಅರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹಂಚಲಾಯಿತು. ಈ ಸಂದರ್ಭದಲ್ಲಿ ಜಮಾಅತ್ ನ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು, ಆಶಾ ಕಾರ್ಯಕರ್ತರ ಕಾರ್ಯವೈಖರಿಗೆ ಬೆಂಬಲಿಸುವ ಮಾತುಗಳನ್ನು ಹೇಳಿ ಹುರಿದುಂಬಿಸಿದರು.
ಕೊರೋನಾ ದ ಈ ಕಾಲಘಟ್ಟದಲ್ಲಿ ನಮ್ಮ ಸೇವೆಯನ್ನು ಗುರುತಿಸಿ, ನಮಗೆ ಪ್ರೊತ್ಸಾಹ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಗೆ ಪ್ರಭಾರ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಮಮತ ರವರು ಶುಭ ಕೋರಿದರು.
ಜಮಾಅತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬ್ , ಮುಹಮ್ಮದ್ ಅಲಿ ಇಬ್ರಾಹಿಮ್ , ಎಸ್. ಐ. ಓ. ಕಾಪು ವರ್ತುಲದ ಅನೀಸ್ ಅಲಿ , ಸುಗಾಮಕಾರರು ಸುಭಾಷಿಣಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.