(www.vknews.com) : ದಿನಾಂಕ -03-09-2020 ಗುರುವಾರ SKSSF ಕರ್ನಾಟಕ ದುಬೈ ಸಮಿತಿ ಅಧ್ಯಕ್ಷರಾದ ಬಹುಮಾನ್ಯ ಸಯ್ಯದ್ ಆಸ್ಕರ್ ಅಲಿ ತಂಙಳ್ ರವರ ದಿವ್ಯ ಹಸ್ತದಿಂದ ಪೋಸ್ಟರ್ ಬಿಡುಗಡೆ
SKSSF ಕರ್ನಾಟಕ ವಿಖಾಯ ಯು ಎಇ ಸಮಿತಿ ವತಿಯಿಂದ ‘ಸ್ಪೂರ್ತಿದಾಯಕ ಪಯಣ ‘ಎಂಬ ಪ್ರಮೇಯದೊಂದಿಗೆ ದಿನಾಂಕ 05-09-2020 ರ ಶನಿವಾರ ಸಮಯ 7.30 ಕ್ಕೆ ಸರಿಯಾಗಿ ಝೂಮ್ ಆನ್ ಲೈನ್ ಕ್ಲಾಸಿಗೆ ಚಾಲನೆ ನೀಡಲಾಯಿತು, ವಿಖಾಯ ಚೇರ್ಮಾನ್ ನವಾಝ್ ಬಿ.ಸಿ. ರೋಡ್ ರವರು ಅದ್ಯಕ್ಷತೆ ವಹಿಸಿದ್ದರು.
SKSSF ಕರ್ನಾಟಕ ದುಬೈ ಸಮಿತಿ ಪ್ರಧಾನ ಕಾರ್ಯದರ್ಶಿ ಬಹುಮಾನ್ಯ ಸುಲೈಮಾನ್ ಉಸ್ತಾದ್ ಕಲ್ಲೇಗ ಅವರ ಭಕ್ತಿ ನಿರ್ಭರ ದುಃಆ ನೆರವೇರಿಸಿ ಕಾರ್ಯಕ್ರಮವನ್ನು ಧನ್ಯಗೊಳಿಸಿದರು, ಬಳಿಕ ಸುಲೈಮಾನ್ ಉಸ್ತಾದ್ ರವರು ಸ್ವಾಗತಿಸಿ ಮಾತನಾಡಿ ವಿಖಾಯ ಸದಸ್ಯರ ದೀನಿ ಸೇವೆಗಳನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು.
ಅಲ್ಲದೆ ಇನ್ನೂ ಹಲವಾರು ಜವಾಬ್ದಾರಿಯುತ ಕೆಲಸಗಳು ತಮ್ಮಿಂದ ನಡೆಯಬೇಕಾಗಿದ್ದು ಆನ್ ಲೈನ್ ಕ್ಲಾಸ್ ಎಲ್ಲದಕ್ಕೂ ಸ್ಪೂರ್ತಿಯಾಗಲಿ ಎಂದು ವಿಖಾಯ ಸನ್ನದ್ಧ ತಂಡ ಊರಿನಲ್ಲಿ ಮಾಡುತ್ತಿರುವ ಕಾರ್ಯ ವೈಖರಿಗಳನ್ನು ನೆನಪಿಸಿ ಕೊಂಡರು.
ಚಾರ್ಟೆಡ್ ಫ್ಲೈಟ್ ಕಳುಹಿಸುವ ಸಮಯದಲ್ಲೂ , ಕೋವಿಡ್ ನ ಸಂಕಷ್ಟದ ಸಮಯದಲ್ಲೂ ವಿಖಾಯ ತಂಡ ಮಾಡಿದ ಸೇವೆಗಳನ್ನು ಸ್ಮರಿಸುತ್ತಾ ಸರ್ವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು.
ಬಹುಮಾನ್ಯ ಸಯ್ಯದ್ ಆಸ್ಕರ್ ಅಲಿ ತಂಗಳ್ ರವರು ಮಾತನಾಡುತ್ತಾ ಹಲವಾರು ದೀನಿ ಸೇವೆಗಳನ್ನು ಮಾಡುತ್ತಾ ಮುನ್ನಡೆಯುತ್ತಿರುವ ವಿಖಾಯ ಸದಸ್ಯರ ಎಲ್ಲಾ ಕಾರ್ಯ ವೈಖರಿಗಳಿಗೆ SKSSF ಕರ್ನಾಟಕ ದುಬೈ ಸಮಿತಿಯ ವತಿಯಿಂದ ಸಂಪೂರ್ಣ ಸಹಕಾರವಿದೆ ,ಎಂಬ ಭರವಸೆಯನ್ನು ನೀಡುತ್ತಾ, ಇಂತಹಾ ದೀನಿ ಬೋಧನೆಗಳನ್ನು ನೀಡುವ ಆನ್ ಲೈನ್ ಕ್ಲಾಸ್ ಗಳಂತಹ ಹಾಗು ಸಂಕಷ್ಟದಲ್ಲಿರುವವರಿಗೆ ಸಹಾಯ ಸಹಕಾರ ನೀಡುವಂತಹ ಕೆಲಸಗಳನ್ನು ಮಾಡುವ ಮೂಲಕ ಸಮಾಜಕ್ಕೆ ತಮ್ಮನ್ನು ತಾವೇ ಗುರುತಿಸಿಕೊಳ್ಳಬೇಕಾಗಿದೆ, ಸರ್ವ ಶಕ್ತನಾದ ಅಲ್ಲಾಹನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾ ಅಲ್ಲಾಹನ ಪರಿಶುದ್ಧ ನಾಮದೊಂದಿಗೆ ಈ ಮಹತ್ಕಾರ್ಯವನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
ನಂತರ ಎಲ್ಲರ ನಿರೀಕ್ಷೆಯ ಬಹುಮಾನ್ಯ ಸಿಂಸಾರುಲ್ ಹಕ್ ಹುದವಿ ಉಸ್ತಾದರ ಅರ್ಥ ಗರ್ಭಿತ ಪ್ರಭಾಷಣಕ್ಕೆ ಅನುವು ಮಾಡಿಕೊಡಲಾಯಿತು .. ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಪ್ರಭಾಷಣ ಲೋಕದ ದ್ರುವ ತಾರೆ ತನ್ನ ಎಂದಿನ ಶೈಲಿಯಲ್ಲಿ ಪ್ರಾರಂಭಿಸಿ SKSSFವಿಖಾಯ ತಂಡದ ಜವಾಬ್ದಾರಿಗಳೇನು ಎಂಬುದನ್ನು ಸವಿವರವಾಗಿ ವಿವರಿಸುತ್ತಾ, ಇಂತಹ ಸಾಮಾಜಿಕ ಸೇವೆ ಮತ್ತು ದೀನಿ ಸೇವೆ ಗಳು ಮಾಡುವುದರಿಂದ ದ್ವಿಲೋಕದಲ್ಲಿ ಸಿಗುವ ಪ್ರತಿಫಲ ಗಳನ್ನೂ ಸಂಕ್ಷಿಪ್ತವಾಗಿ ತಿಳಿಸಿದರು.
ನಬಿ (ಸ .ಅ) ತಂಙಳ್ ಹಾಗು ಸಹಾಬಿ ವರ್ಯರು ಮಾಡಿದ ದೀನಿ ಸೇವೆ , ಸಂಕಷ್ಟದಲ್ಲಿರುವವರಿಗೆ ಮಾಡಿದ ಸಹಾಯ ಸಹಕಾರ ಎಲ್ಲವನ್ನು ನೆನಪಿಸಿ ಕೊಳ್ಳುತ್ತಾ ಇಸ್ಲಾಮಿಕ್ ರಿಪಬ್ಲಿಕ್ ನ ಎರಡನೇ ಖಲೀಫ ಹಜ್ರತ್ ಉಮರ್ ಖತ್ತಾಬ್( ರ ಅ) ಮಾಡಿ ತೋರಿಸಿದ ಸಹಾಯ ಸಹಕಾರಗಳನ್ನು ಉದಾಹರಣೆ ಮೂಲಕ ವಿವರಿಸಿದ ಉಸ್ತಾದರು ಅಂತಹ ಮಹಾನುಭಾವರುಗಳು ಸಾರಿದ ಸಂದೇಶಗಳನ್ನು ಅವರು ತೋರಿಸಿದ ಸನ್ಮಾರ್ಗದ ಹಾದಿಯನ್ನು ಹಿಡಿದ ಸಮಸ್ತ ಎಂಬ ಪುಣ್ಯ ವಿಶಾಲ ವಾದ ವ್ರಕ್ಷದಡಿಯಲ್ಲಿ ನಾವು ಭದ್ರವಾಗಿದ್ದೇವೆ,
ಅವರು ತೋರಿಸಿಕೊಟ್ಟ ಮಾರ್ಗವೇ ನಮಗೆ ಸ್ಫೂರ್ತಿ, ಅವರು ಪರಲೋಕವನ್ನು ಮಾತ್ರ ಚಿಂತಿಸುತ್ತಿರುವ ಉಲಮಾಗಳು , ಆದ್ದರಿಂದಲೇ ಅವರ ಅಂತ್ಯವು ಕೂಡ ಲೋಕವು ಇಂದು ಅರಿಯುವಂತಾಗಿದೆ .
ಅದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ವಿಖಾಯ ಸನ್ನದ್ಧ ಪಡೆಗಳು ದೇಶದಾದ್ಯಂತ ಮಾಡುತ್ತಿರುವ ಸಾಮಾಜಿಕ ಸೇವೆಗಳು ವರ್ಣಿಸಲು ಅಸಾದ್ಯ ವಿಖಾಯ ತಂಡದ ಕೀರ್ತಿಯು ಲೋಕದೆಲ್ಲೆಡೆ ಹಬ್ಬಿದೆ,ಆದುದ್ದರಿಂದ ಅದರ ಸಂಪೂರ್ಣ ಸದುಪಯೋಗ ಪಡಿಸಿಕೊಂಡು skssf ಕರ್ನಾಟಕ ವಿಖಾಯ ಯು ಎ ಇ ತಂಡವು ಮುನ್ನಡೆಯಬೇಕಾಗಿದೆ.
ಪ್ರಾಮುಖ್ಯವಾಗಿ ಎಲ್ಲರೂ ನೆನಪಿನಲ್ಲಿಟ್ಟು ಕೊಳ್ಳಬೇಕಾದ ವಿಷಯವೇನೆಂದರೆ ನಾವು ಮಾಡುತ್ತಿರುವ ಸಾಮಾಜಿಕ ಸೇವೆ ಮತ್ತು ದೀನಿ ಸೇವೆಗಳು ಮಾತ್ರ ಅದು ಸರ್ವ ಭೂಮಂಡಲ ಅಧಿಪತಿಯಾದ ಅಲ್ಲಾಹನು ಸ್ವೀಕರಿಸುವಂತಾಗಿರಬೇಕು, ಆವಾಗ ಮಾತ್ರ ನಾವು ಮಾಡಿದ ಸೇವೆ ಸಂಪೂರ್ಣ ಯಶಸ್ವಿ ಗೊಳ್ಳಲು ಸಾಧ್ಯ, ಎಂದು ಬಹಳ ಸುಂದರವಾಗಿ ವಿವರಿಸಿದ ಉಸ್ತಾದರು ನನ್ನ ಭಾಗದಿಂದ ಎಲ್ಲಾ ವಿಧ ಸಹಕಾರ ತಮಗಿದೆ ಎಂಬ ಭರವಸೆಯ ಮಾತುಗಳೊಂದಿಗೆ , ಭಕ್ತಿ ಪೂರ್ಣ ದುಆ ನೆರವೇರಿಸಿ , ಮಾತಿಗೆ ಪೂರ್ಣ ವಿರಾಮವನ್ನಿತ್ತರು .
ಕೊನೆಗೆ ಸಫಾ ಇಸ್ಮಾಯಿಲ್ ರವರ ಧನ್ಯವಾದ ಸಮರ್ಪಣೆಯೊಂದಿಗೆ , ಮೂರು ಸ್ವಲಾತಿನೊಂದಿಗೆ ಕಾರ್ಯ ಕ್ರಮ ಮುಕ್ತಾಯ ಗೊಳಿಸಲಾಯಿತು.
ದಾರುಸ್ಸಲಾಮ್ ಬೆಳ್ತಂಗಡಿ ಇದರ ಸ್ಥಾಪಕರಾದ ಬಹುಮಾನ್ಯ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಸಹಿತ ಹೆಚ್ಚಿನ ಸಭಿಕರು ಹಾಜರಿದ್ದು, ಕಾರ್ಯ ಕ್ರಮವು ಯಶಸ್ವಿ ಗೊಳ್ಳಲು ಸಹಕರಿಸಿದ್ದಾರೆ .. ಜೊತೆಗೆ DRSN Media ಯ್ಯೂಟ್ಟೂಬ್ ಚಾನೆಲ್ ಮೂಲಕ ಲೈವ್ broad cast ವ್ಯವಸ್ಥೆ ಮಾಡಿ ಸಿದ್ದೀಕ್ ಈಶ್ವರಮಂಗಳ ಸಹಕರಿಸಿರುತ್ತಾರೆ,
ಈ ಕಾರ್ಯಕ್ರಮಕ್ಕೆ ಸಹಕರಿಸಿದ ಕೆಐಸಿ , ದಾರುನ್ನೂರು, ನೂರುಲ್ ಹುದಾ ,ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು, ದಾರುಸ್ಸಲಾಂ ಬೆಳ್ತಂಗಡಿ ಯುಎಇ ಸಮಿತಿಯ, ಪದಾಧಿಕರಿಗಳು, ಸಹಕರಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.