(www.vknews.com) : ಈ ಫೋಟೋದಲ್ಲಿ ಸನ್ಮಾನವನ್ನು ಸ್ವೀಕರಿಸುತ್ತಿರುವ ವ್ಯಕ್ತಿ ಜನಾಬ್ ಅಬ್ದುಲ್ ಸಮದ್ ಸಾಲ್ಮರ, ಪುತ್ತೂರು . ಇವರು ತನಗಿರುವ ಇಬ್ಬರು ಪುತ್ರಿಯರನ್ನು ಡಾಕ್ಟರ್ ಆಗಿ ರೂಪಿಸಿದ್ದಾರೆ.
ಕಿರಿಯ ಮಗಳು ಝರೈನಾ ಫಾತಿಮಾ ಎಂಬಿಬಿಎಸ್ ಮಾಡಿ ಉಪ್ಪಿನಂಗಡಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹಿರಿಯ ಮಗಳು ಜೈನಾ ಯಾಸ್ಮಿನ್ ಬಿಎಎಂಎಸ್ ಮಾಡಿ ಬೆಂಗಳೂರಿನ ಶ್ರೀದೇವಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ತನಗಿರುವ ಇಬ್ಬರು ಪುತ್ರಿಯರನ್ನು ವೈದ್ಯರಾಗಿಸಿ ಈ ಸಮಾಜಕ್ಕೆ ಕೊಡುಗೆಯನ್ನು ಕೊಟ್ಟಿದ್ದಾರೆ. ಅದಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ. ಹಳೆಯ ಹಂಚು ವ್ಯಾಪಾರ ಮಾಡುವ ಇವರು ಮಕ್ಕಳಿಗಾಗಿ ಬೇರೇನೂ ಆಸ್ತಿ ಮಾಡದೆ ಮಕ್ಕಳನ್ನೇ ಈ ಸಮಾಜಕ್ಕೆ ಆಸ್ತಿಯಾಗಿ ಪರಿವರ್ತಿಸಿದ್ದಾರೆ. ಅವರ ತ್ಯಾಗ ಮತ್ತು ಸಾಧನೆಯನ್ನು ಅಭಿನಂದಿಸಿ ಕಲ್ಲೆಗ ಜುಮಾ ಮಸೀದಿಯಲ್ಲಿ ನಡೆದ ಜಮಾತ್ ಡೆವಲಪ್ಮೆಂಟ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಆ ಸನ್ಮಾನಕ್ಕೆ ಸಾಕ್ಷಿಯಾಗಲು ಸೌಭಾಗ್ಯ ಕರುಣಿಸಿದ ಅಲ್ಲಾಹನಿಗೆ ಸರ್ವ ಸ್ತುತಿಗಳು.
ಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿ ಮಾಡುವ!!!
✒️ ರಫೀಕ್ ಮಾಸ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.