ಅಂತರ್ಜಾಲ ತಾಣದ ವಂಚಕರ ಬಹುಕೃತ ವೇಶಂ…….
(ವಿಶ್ವ ಕನ್ನಡಿಗ ನ್ಯೂಸ್),ಶಿವಮೊಗ್ಗ: ಸಾಮಾಜಿಕ ವ್ಯವಸ್ಥೆಯು ಜೆಟ್ ಯುಗದತ್ತ ಮುನ್ನುಗ್ಗುತ್ತಿರುವ ದಿಟ್ಟ ಹೆಜ್ಜೆಯೇ ಅಂತರ್ಜಾಲ ತಾಣವೆಂಬುದು ಬಹುತೇಕರಿಗೆ ತಿಳಿದಿದೆ. ಆದರೆ ಈ ತಾಣದಲ್ಲಿ ವಿವಿಧ ಬಗೆಯ ವಂಚಕರು ನಡೆಸುತ್ತಿರುವ ಶೋಷಣೆಯ ವಿವಿಧ ಮುಖವಾಡಗಳು ಎಷ್ಟು ಭಯಾನಕವಾಗಿರುತ್ತವೆಯೋ ಅಷ್ಟೇ ಹಿಂಸಾತ್ಮಕವಾಗಿರುತ್ತವೆ ಎಂಬುದು ಬಹಳಷ್ಟು ಜನರಿಗೆ ತಿಳಿಯುವಂತೆ ಆನ್ಲೈನ್ ವಂಚಕರು ರಾಜಾರೋಷವಾಗಿ ತಮ್ಮ ಕೈಚಳಕ ತೋರಿಸುತ್ತಿದ್ದಾರೆ.
ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರೂ ಅವರು ಕೇವಲ ಎಚ್ಚರಿಕೆವಹಿಸಲು ಸೂಚಿಸುತ್ತಾರೆಯೇ ವಿನಃ ಈ ಬಗ್ಯೆ ಕ್ರಮ ಕೈಗೊಂಡಿರುವ ಪುರಾವೆಗಳಿಲ್ಲ. ಇದಕ್ಕೆ ಉದಾಹರಣೆಯಾಗಿ ಶಿವಮೊಗ್ಗದ ಬಹಳಷ್ಟು ಮಂದಿಗೆ ಆನ್ಲೈನ್ ಮುಖಾಂತರ ವಂಚಿಸಲಾಗಿದೆ ಎಂಬುದು ವಿವಿಧ ಪತ್ರಿಕೆಗಳಲ್ಲಿ ಬಂದಿರುವ ವರದಿಗಳಿಂದ ತಿಳಿದು ಬಂದಿದೆ. ಆದರೆ ವಂಚನೆಯ ಸ್ವತಃ ಗಮನಿಸಿರುವ ಶಿವಮೊಗ್ಗದ ಕೊಡಕ್ಕಲ್ ಶಿವಪ್ರಸಾದರು ತಮಗಾಗೇ ಬಂದಿರುವ ವಿವಿಧ ವಂಚನೆಗಳ ಸುಳಿವುಗಳಿರುವ ಎಸ.ಎಂ.ಎಸ. ಸಂದೇಶಗಳ ಅನುಭವವನ್ನು ಹಂಚಿಕೊಂಡಿರುವುದು ವಂಚಕರಿಗೆ ಅಂಗವಿಕಲರು,ಹೆಣ್ಣು ಮಕ್ಕಳು, ವೃದ್ದರು ಎಂಬ ಅನುಕಂಪ ಲವಲೇಶವೂ ಇಲ್ಲ ಎಂಬ ಅರಿವಾಗದೇ ಇರದು.
ಇತ್ತೀಚಿಗೆ ಹೆಣ್ಣು ಮಗಳೊಬ್ಬಳ ಹೆಸರಿನಲ್ಲಿ ಕೊಡಕ್ಕಲ್ ಶಿವಪ್ರಸಾದರಿಗೆ ಎಸ .ಎಂ.ಎಸ ಬಂದಿದ್ದು ಅದರಲ್ಲಿ ನನ್ನ ಒಟಿಪಿ ಒಂದು ನಿಮ್ಮ ಮೊಬೈಲ್ಗೆ ಬಂದಿದೆ ಅದು ನನ್ನ ಓಲಾ ಕಾರ್ ಚಾರ್ಜ್ ಮಾಡಲಿಕ್ಕೆ ಬೇಕಾಗುತ್ತದೆ ಕೂಡಲೇ ಒಟಿಪಿ ಕಳಿಸಿ ಅಂತ ಕಳುಹಿಸಿ ನಂತರ ಫೋನ್ ಕರೆ ಕೂಡ ಮಾಡಿದ್ದರು. ಕಿವಿ ಕೇಳದ ಕಾರಣದಿಂದ ಕರೆ ಕಟ್ ಮಾಡಿ ಮೆಸೇಜ್ ಮಾಡಿದವರಿಗೆ ವಾಟ್ಸಪ್ಪ್ ನಲ್ಲಿ ವಿಷಯ ತಿಳಿಸಿ ಅಂದಾಗ ಅದೇ ರೀತಿಯ ಸಂದೇಶ ವಾಟ್ಸಪ್ಪ್ ನಲ್ಲಿ ತಿಳಿಸಲಾಗಿತ್ತು. ತದನಂತರ ಒಂದು ಒಟಿಪಿ ಕೂಡ ಮೊಬೈಲ್ಗೆ ಬಂದಾಗ ಸಂಶಯ ಬಂದು ಸೈಬರ್ ಪೋಲಿಸಿಗೆ ತಿಳಿಸುತ್ತೇನೆ ಎಂದಾಗ ಸ್ವಲ್ಪ ಹೊತ್ತಿನಲ್ಲೇ ಅವರು ಕಳಿಸಿದ ಒಟಿಪಿ ತಾನಾಗೇ ಡಿಲೀಟ್ ಆಗಿತ್ತು !
ವಿಷಯ ಇಷ್ಟಕ್ಕೆ ಮುಗಿಯಲಿಲ್ಲ, ಅದು ವಿದೇಶಿ ನಂಬರ್ ಮುಖಾಂತರ ದೆಹಲಿಯಲ್ಲಿರುವ ಸಿಂನಿಂದ ಮಾಡಿದ ಕರೆಯಾಗಿದ್ದರೂ ಕೂಡಾ ಕೇವಲ ಒಂದು ನಿಮಿಸದ ವಿದೇಶಿ ಕರೆ ಅಂತ ಏರ್ಟೆಲ್ ಕಂಪೆನಿ ೩ಸಾವಿರ ರೂಪಾಯಿಗಳ ಬಿಲ್ ಕೊಡಕ್ಕಲ್ರವರಿಗೆ ಕಳುಹಿಸಿದಾಗ ಅವರು ದಿಗ್ಬ್ರಾಂತಿಗೊಂಡು ಏರ್ಟೆಲ್ ಕಂಪನಿಗೆ ತಾನು ವಿದೇಶಿ ಕರೆ ಸ್ವೀಕರಿಸಿಲ್ಲ ಹಾಗು ಕರೆ ಕೂಡ ಮಾಡಿಲ್ಲ ಮೂರೂ ಸಾವಿರ ರೂಪಾಯಿಗಳ ಬಿಲ್ ಹೇಗೆ ತಯಾರಿಸಿದಿರಿ ಅಂತ ದೂರು ನೀಡಿದಾಗ ಏರ್ಟೆಲ್ ಕಂಪನಿ ಸದರಿ ಮೊತ್ತವನ್ನು ಕಳೆದು ಕೊಟ್ಟಿತ್ತು !
ವಂಚಕರ ಮೋಸದ ಒಟಿಪಿ ಬಂದಿರುವ ಸ್ಕ್ರೀನ್ಶಾಟ್ ಹಾಗು ಸಂದೇಶ ದಾಖಲೆಗಳನ್ನು ಶಿವಮೊಗ್ಗದ ಸೈಬರ್ ಕ್ರೈಂ ಪೊಲೀಸರಿಗೆ ಈಗಾಗಲೇ ವರದಿ ಮಾಡಿದ್ದು ಅದರ ಕತೆ ಇನ್ನೂ ಗೊತ್ತಾಗಿಲ್ಲ ಆದರೆ ಸೈಬರ್ ಪೊಲೀಸರು ಒಟಿಪಿ ಯನ್ನು ವಂಚಕರಿಗೆ ಕೊಡದೆ ಇರುವದಕ್ಕೆ ಕೊಡಕ್ಕಲ್ ಅವರನ್ನು ಶ್ಲ್ಯಾಘಿಸಿದ್ದರು !
ಇದೇ ರೀತಿಯ ವಂಚಕರು ಇನ್ನೊಂದು ವೇಷದಲ್ಲಿ ಸಂದೇಶ ಕಳುಹಿಸಿದ್ದು ಅದರಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಬ್ಲಾಕ್ ಮಾಡಲಾಗಿದೆ ಕೂಡಲೇ ಈ ಕೆಳಗಿನ ಲಿಂಕ್ ಮೂಲಕ ಸರಿ ಪಡಿಸಿ ಅಂತ ಸಂದೇಶ್ ಕಳುಹಿಸಿದ್ದು ಲಿಂಕ್ ನಲ್ಲಿ ಬ್ಯಾಂಕ್ ಹೆಸರು ತಪ್ಪಾಗಿದ್ದ ಕಾರಣ ಅದು ಫೇಕ್ ಸಂದೇಶ ಎಂದು ವಿದ್ಯಾವಂತರಿಗೆ ಮಾತ್ರ ಗೊತ್ತಾಗುತ್ತದೆ ಆದರೆ ಅವಿದ್ಯಾವಂತರ ಪಾಡು ದೇವರೇ ಕಾಪಾಡಬೇಕಿದೆ.
ಇದೇ ರೀತಿಯ ವಂಚನೆ ವಿದೇಶಿ ಕರೆಗಳಿಂದ ಸುಮಾರು ಅಂಗವಿಕಲರಿಗೆ, ಹೆಂಗಸರಿಗೆ ಬಂದಿದ್ದು ಅವರೆಲ್ಲ ೩೦ ಸಾವಿರ ,೨ ಲಕ್ಷ ಹೀಗೆ ಹಣ ಕಳೆದುಕೊಂಡು ಕಂಗಾಲಾಗಿರುವ ವರ್ತಮಾನಗಳಿವೆ. ಹಾಗಾದರೆ ಇದಕ್ಕೆಲ್ಲ ಪರಿಹಾರ ಏನು ಎಂಬುದು ಇಂದಿಗೂ ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಇದಲ್ಲದೆ ಫೇಸ್ಬುಕ್ ಗ್ರೂಪ್ ಹಾಗು ವಾಟ್ಸಪ್ಪ್ ಗ್ರೂಪ್ಗಳಲ್ಲಿ ವಿದೇಶಿ ನಂಬರುಗಳು ನುಗ್ಗಿಕೊಂಡು ಬಿಟ್ ಕೊಯಿನ್ ಬಗ್ಯೆ ಲಿಂಕ್ಗಳನ್ನು ಇಂದಿಗೂ ಕಳುಹಿಸುತ್ತ ಇದ್ದಾರೆ. ಇದನ್ನೆಲ್ಲಾ ತಡೆಯುವ ವಿಧಾನ ದೇವರಿಗೆ ಗೊತ್ತು ಎಂದಷ್ಟೇ ಹೇಳಬೇಕಾದ ಅಸಹಾಯಕತೆ ಇಂದು ಸುತ್ತಲಿನ ಮಂದಿಗೆ ಅನುಭವಕ್ಕೆ ಬಂದಿರುವದಂತು ಕಟು ಸತ್ಯ.
ಅಂತರಜಾಲ ವಂಚಕರಿಗೆ ದೊಡ್ಡವರು ಸಣ್ಣವರು ಎಂದೇನೂ ಕಾಣಿಸುತ್ತಿಲ್ಲ, ಅವರಿಗೆ ಹಣ ಮಾಡುವದಷ್ಟೇ ಮುಖ್ಯ, ಇದೆ ಕಾರಣದಿಂದ ದೇಶದ ಪ್ರಧಾನಮಂತ್ರಿಗಳ ಟಿಟರ್ ,ಫೇಸ್ಬುಕ್ ಇತ್ಯಾದಿ ಖಾತೆಗಳನ್ನೂ ಹ್ಯಾಕ್ ಮಾಡಿರುವ ಸುದ್ದಿಗಳು ಇಂದು ಹಸಿ ಹಸಿಯಾಗಿ ಓಡಾಡುತ್ತಿವೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.