ಅಬುಧಾಬಿ (ವಿಶ್ವ ಕನ್ನಡಿಗ ನ್ಯೂಸ್) : ಕಾಬೂಲ್ ತಾಲಿಬಾನಿಗಳ ಪಾಲಾಗುತ್ತಿದ್ದಂತೆ ಆಫ್ಘಾನಿಸ್ತಾನ ತೊರೆದ ಮಾಜಿ ಅಧ್ಯಕ್ಷ ಅಶ್ರಫ್ ಘನಿ ಇದೇ ಮೊದಲ ಬಾರಿಗೆ ತಮ್ಮ ಅಧಿಕೃತ ಫೇಸ್ ಬುಕ್ ವಿಡಿಯೋದಲ್ಲಿ ಮಾತನಾಡಿದ್ದಾರೆ.
25 ವರ್ಷಗಳ ಹಿಂದೆ ನಡೆದಿದ್ದ ರಕ್ತಪಾತ ಮತ್ತೆ ಸಂಭವಿಸಬಾರದು ಎಂದು ನಿರ್ಧರಿಸಿ ನಾನು ದೇಶ ತೊರೆದೆ. ದೇಶದ ಸುರಕ್ಷತೆಯನ್ನು ದೇಶದ ಭದ್ರತಾ ಪಡೆಗಳ ಮೇಲೆ ವಹಿಸಿ ನಾನು ದೇಶ ತೊರೆದೆ. ದೇಶ ಬಿಡುವ ಮುನ್ನ ನಾನು ನನ್ನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೆ. ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ಹೇಳಿದ್ದಾರೆ.
ಕಾಬೂಲ್ ತೊರೆಯುವಾಗ ಹೆಲಿಕಾಪ್ಟರ್ ಗಳಲ್ಲಿ ಹಣದ ಸಮೇತ ಹೋಗಿದ್ದಾಗಿ ಕೇಳಿ ಬರುತ್ತಿರುವ ಆರೋಪಗಳು ಆಧಾರ ರಹಿತ. ಕಾಬೂಲ್ನ ಅಧ್ಯಕ್ಷೀಯ ಅರಮನೆಯಲ್ಲಿ ಕೆಲವು ಗೌಪ್ಯ ದಾಖಲೆಗಳನ್ನು ಬಿಟ್ಟು ಬರಲಾಗಿದೆ. ಅಲ್ಲೇ ಇದ್ದಿದ್ದರೆ ನಿಮ್ಮ ಕಣ್ಣ ಮುಂದೆಯೇ ನೇಣು ಹಾಕುತ್ತಿದ್ದರು, ಹೀಗಾಗಿ ಆಗಬಹುದಾಗ ರಕ್ತಪಾತವನ್ನು ತಪ್ಪಿಸಲು ನಾನು ಚಪ್ಪಲಿ ಧರಸಿಯೇ ಕಾಬೂಲ್ ತೊರೆದೆ, “ಸದ್ಯಕ್ಕೆ, ನಾನು ಎಮಿರೇಟ್ಸ್ನಲ್ಲಿದ್ದೇನೆ, ವಾಪಸ್ ತಾಯ್ನಾಡಿಗೆ ಮರಳಲು ಮಾತುಕತೆಯಾಗುತ್ತಿದೆ ಎಂದು ಅಶ್ರಫ್ ಘನಿ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.