(www.vknews.com) : ಜಾಗತಿಕ ಮಟ್ಟದಲ್ಲಿ ವಿಶ್ವವ್ಯಾಪ್ತಿ ಹರಡಿರುವ ಕೋರೋಣ ಎಂಬ ಮಹಾಮಾರಿ ಸೋಂಕು ಇಂದು ಮಾನವ ಕುಲವನ್ನು ಕಾಡುತ್ತಿದೆ. ಮುಸ್ಲಿಮ್ ಸಾಂಪ್ರದಾಯಿಕ ಆರಾಧನೆಯ ಶೈಲಿ ಈ ದುರಂತ ಸಂಧರ್ಭಗಳಲ್ಲಿ ಬದಲಾಗಿದೆ.ಜಾಗತಿಕ ಮುಸ್ಲಿಮ್ ಸಮುದಾಯ ಮಸೀದಿ ಕೇಂದ್ರಿತ ನಮಾಝ್,ಜುಮ್ಮಾ, ತರಾ ವೀಹ್ಹ್ , ಇಹ್ತಿಕಾಫ್, ಮುಂತಾದ ಧಾರ್ಮಿಕ ಆರಾದನೆಗಳಿಂದ ನಾವು ವಂಚಿತರಾಗಿದ್ದು ನಮ್ಮದಲ್ಲದ ತಪ್ಪಿಗೆ ಕೋರೋಣ ಸೋಂಕುನ್ನುಒಂದು ಸಮುದಾಯವನ್ನು ಕೇಂದ್ರೀಕರಿಸಿ ಕೋರೋಣ ರೋಗ ಹರಡುತ್ತಾರೆ ಎಂಬ ಅಪವಾದವನ್ನು ಪೂರ್ವಗ್ರಹ ಪೀಡಿತ ಮಾಧ್ಯಮದಿಂದ ಎದುರಿಸುತ್ತಿದ್ದೇವೆ, ನಿರ್ದಿಷ್ಟ ಸಮುದಾಯದ ವಿರುದ್ದ ಅಪಪ್ರಚಾರ ಮಾಡಿ ಜಾಗತಿಕ ಮಟ್ಟದಲ್ಲಿ ಭಾರತವು ತೀವ್ರ ಟೀಕೇಗೊಳಗಾದಾಗ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದೆ.
ಆದುದರಿಂದ ಈ ವರ್ಷದ ರಮಝಾನ್ ಮತ್ತು ಈದ್ ಹಬ್ಬವನ್ನು ಸಡಗರ ಮತ್ತು ಸಂಭ್ರಮ ರಹಿತವಾಗಿ ಆಚರಿಸಲು ಪಣ ತೊಡೋಣ. ಸರಕಾರದ ನಿಯಮಗಳನ್ನು ಪಾಲಿಸಿ, ಈಗಾಗಲೇ ತಮ್ಮಲ್ಲಿ ಲಭ್ಯವಿರುವ ವಸ್ತ್ರಗಳನ್ನು ಉಪಯೋಗಿಸಿ ತೃಪ್ತಿ ಪಟ್ಟುಕೊಂಡು ಹೊಸ ಖರೀದಿಗೆ ಬಲಿಯಾಗದೇ ಸರಳವಾಗಿ ರಮಝಾನ್ ಮತ್ತು ಈದ್ ಆಚರಣೆಗೆ ಸಾಕ್ಷಿಯಾಗಿ ಜಾಗತಿಕ ದುರ್ಗತಿಯೊಂದಿಗೆ ಭಾಗಿಯೋಗೊಣ, ಅಲ್ಲಾಹನ ಪರೀಕ್ಷೆಗಳನ್ನು ಎದುರಿಸೋಣ, ಈದ್ ನೆಪದಲ್ಲಿ ಶಾಪಿಂಗ್ ಮಾಲ್,ಮಾರ್ಕೇಟುಗಳು,ವಿವಿದ ಆಮಿಷಗಳೊಂದಿಗೆ ನಿಮ್ಮನ್ನು ಕೈಬೀಸಿ ಕರೆಯಬಹುದು ದಯವಿಟ್ಟು ಹೋಗದಿರಿ. ನಿಮ್ಮ ಈದ್ ಸಂಭ್ರಮ ನಮ್ಮ ಸಹೋದರ ಸಹೋದರಿಯರ ಮಿತಿಯ ಮೇಲೆ ಆಕ್ರಮಿಸದಿರಲಿ. ಲಾಭ ಉದ್ದೇಶಿತ,ಸ್ಟಾಕ್ ಖಾಲಿ ಯಾಗಿಸುವಿಕೆ ಯ ಷಡ್ಯಂತ್ರಕ್ಕೆ ಬಲಿಯಾಗದಿರಿ, ಇತರರ ನೋವಿನಲ್ಲಿ ಪಾಲ್ಗೊಳ್ಳಿ. ನೀವು ಉಡುಪು ಮತ್ತು ಫ್ಯಾನ್ಸಿ ಖರೀದಿಗೆ ಹೋದಲ್ಲಿ ನಿಮ್ಮನ್ನು ಕೋರೋಣ ಸೋಂಕು ದಾರರು ಎಂದು ಯಾಕೆ ಮಾಧ್ಯಮಗಳು ಹಣೆ ಪಟ್ಟಿ ಕಟ್ಟಿ ನಿಮ್ಮನ್ನು ಗುರಿ ಮಾಡಬಾರದು? ಎಚ್ಚರ ವಹಿಸಿ,ಸರಳ ಸಂಭ್ರಮ ರಹಿತ ರಮಝಾನ್ ಮತ್ತು ಈದ್ ಗೆ ತಯಾರಾಗಿ, ಮಸೀದಿ ಕಮಿಟಿ ಗಳು ತಮ್ಮ ತಮ್ಮ ಕಾರ್ಯ ವ್ಯಾಪ್ತಿ ಯಲ್ಲಿ ಸಂಭ್ರಮದ ಉದ್ದೇಶಿತ ಖರೀದಿ ಪ್ರತಿಬಂಧಿಸುವ ದ್ವನಿ ವರ್ಧಿತ ಘೋಷಣೆ ಯೊಂದಿಗೆ ಜಮಾತರಲ್ಲಿ ಜಾಗೃತಿಗೊಳಿಸಲಿ , ಮಸೀದಿ ಕೇಂದ್ರಿತ ಆರಾಧನೆಗಾಗಿ ಶ್ರಮಿಸೋಣ.
ಸರ್ವರೂ ಸಹಕರಿಸಿ.
ಕೆ.ಅಶ್ರಫ್ . (ಮಾಜಿ ಮೇಯರ್) ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.