ಚಿಕ್ಕಬಳ್ಳಾಪುರ(ವಿಶ್ವಕನ್ನಡಿಗ ನ್ಯೂಸ್): ರೈತರ ಬೆಳೆಗೆ ಬೆಂಬಲ ಬೆಲೆ ಸಿಗದೇ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ದ್ರಾಕ್ಷಿ ಮತ್ತು ತರಕಾರಿಗಳನ್ನು ಬೆಳೆದು ಕಂಗಲಾಗಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಸದಸ್ಯರಾದ ಡಿ.ಕೆ.ಸುರೇಶ್ ರವರು ತಿಳಿಸಿದರು. ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಕೋವಿಡ್-19 ನಿಯಂತ್ರಣಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದು, ಕೋರೋನಾದಿಂದ ಎಲ್ಲರಿಗೂ ಪರಿಹಾರ ಸಿಗುತ್ತೆ, ಆದರೆ ರೈತರಿಗೆ ಯಾವುದೇ ರೀತಿಯ ಪರಿಹಾರ ಸಿಗದೇ ಇರುವ ಸಮಯದಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆ ಸಂಪರ್ಕದಲ್ಲಿದ್ದುಕೊಂಡು, ಟಾಸ್ಕ್ ಫೋರ್ಸ್ ರಚನೆ ಮಾಡಿದರು. ಅದರಂತೆ ಬೆಂಗಳೂರು ಗ್ರಾಮಾಂತರದ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ನ ಸದಸ್ಯರಾದ ಡಿ.ಕೆ.ಸುರೇಶ್ ರವರು ರೈತರ ನೆರವಿಗೆ ಬಂದು, ರೈತರಿಂದ ನೇರವಾಗಿ ಬೆಳೆಗಳನ್ನು ಖರೀದಿ ಮಾಡಿ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೇಶವರೆಡ್ಡಿಯವರು ತಿಳಿಸಿದರು.
ಜಿಲ್ಲೆಯ ಪೈಲಗುರ್ಕಿ ಸಮೀಪದಲ್ಲಿ ರೈತರ ಬಳಿ ದಾಕ್ಷಿಯನ್ನು ಕೊಂಡುಕೊಳ್ಳಲು ಬಂದಿದ್ದ ಡಿ.ಕೆ.ಸುರೇಶ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಕೋರೋನಾ ದಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಇದಕ್ಕನುಗುಣವಾಗಿ ರೈತರಿಗೆ ಸರ್ಕಾರ ಮಾರ್ಗದರ್ಶನ ಅಥವಾ ಸಹಾಯ ಹಸ್ತ ಚಾಚಬೇಕಿತ್ತು, ಆದರೆ ಸರ್ಕಾರದವರು ರೈತರಿಗೆ ಯಾವುದೇ ರೀತಿಯಾದಂತಹ ಮರ್ಗಸೂಚಿ ಕೊಡಲಿಲ್ಲ, ಮಾರುಕಟ್ಟೆ ವ್ಯವಸ್ಥೆ ಮಾಡಲಿಲ್ಲ, ಬೆಂಬಲ ಬೆಲೆ ಕೊಡಲಿಲ್ಲ ಆದ್ದರಿಂದ ತಾವೇ ನೇರವಾಗಿ ರೈತರ ನೆರವಿಗೆ ಧಾವಿಸಿರುವುದಾಗಿ ತಿಳಿಸಿದರು. ಕನಿಷ್ಠ ಪಕ್ಷ ಮುಂದಿನ ದಿನಗಳಲ್ಲಿ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದರು. ಚಿಕ್ಕಬಳ್ಳಾಪುರ, ಕೋಲಾರ, ದೇವನಹಳ್ಳಿ, ದೊಡ್ಡಬಳ್ಳಾಪುರದ ರೈತರು ದ್ರಾಕ್ಷಿಯನ್ನು ಬೆಳೆದಿದ್ದಾರೆ. ನಮ್ಮ ರೈತರು ಒಂದು ಎಕರೆ ವ್ಯವಸಾಯ ಮಾಡಬೇಕೆಂದರೆ ಕನಿಷ್ಠ ಪಕ್ಷ 3-4 ಲಕ್ಷ.ರೂ. ವೆಚ್ಚ ತಗುಲುತ್ತದೆ, ಇದರಿಂದ ಅವರು 8-9 ಲಕ್ಷ.ರೂ. ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆದರೆ ಇಂತಹ ಸಮಯದಲ್ಲಿ ರೈತರಿಗೆ 3.5 ರಿಂದ 4 ಲಕ್ಷ.ರೂ. ಸಿಗುವುದು ಕೂಡ ಕಷ್ಟವಾಗಿದೆ. ಇದನ್ನರಿತು ರೈತರ ನೆರವಿಗೆ ಧಾವಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಕರೆ ನೀಡಿದರು. ಅದರಂತೆ ನಾನು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾದ ಆಂಜನಪ್ಪ, ನವೀನ್ ಕಿರಣ್, ಶ್ರೀಧರ್, ಮುನೇಗೌಡ, ಪ್ರೆಸ್ ಸುರೇಶ್ ಇನ್ನಿತರ ಕಾಂಗ್ರೆಸ್ ಮುಖಂಡರು ರೈತರ ಹತ್ತಿರ ಮಾತನಾಡಿ ಬೆಲೆ ಕೊಟ್ಟು ಸುಮಾರು 40 ರಿಂದ 50 ಟನ್ ಇಂದು ದ್ರಾಕ್ಷಿಯ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಇಂದು ಹೂ ಬೆಳೆಗಾರರ ಸಂಘದವರು ತಮಗೆ ಫೋನ್ ಮಾಡಿ ಹೇಳುತ್ತಿದ್ದರು, ರೈತರಾದ ನಾವು 18% ಜಿಎಸ್ಟಿ ಯನ್ನು ರಸಗೊಬ್ಬರಕ್ಕೆ, ಕೀಟನಾಶಕಕ್ಕೆ ಕಟ್ಟಬೇಕು. ಸರ್ಕಾರದಿಂದ ರೈತರಿಗೆ ನೆರವು ಸಿಗುವುದು ಮರೀಚಿಕೆಯಾಗಿದೆ. ರಸಗೊಬ್ಬರ, ಕೀಟನಾಶಕಕ್ಕೆ ಹಾಕಿರುವ 18% ಜಿಎಸ್ಟಿ ಯನ್ನು ಹಿಂಪಡೆದು, ರೈತರ ನೆರವಿಗೆ ಧಾವಿಸಬೇಕು ಎಂದು ಪ್ರಧಾನಮಂತ್ರಿಗಳಿಗೆ, ಸದಾನಂದಗೌಡರಿಗೆ, ನಿರ್ಮಲಾ ಸೀತಾರಾಮನ್ ರವರಿಗೆ ನಾನು ನಾಳೆ ಪತ್ರ ಬರೆಯುತ್ತಿದ್ದೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೋರೋನಾ ನಿರ್ವಹಣೆ ಬಗ್ಗೆ: ಒಂದು ಕಡೆ ಎಲ್ಲಾ ಕಡೆ ಕೋರೋನಾ ವ್ಯಾಪಿಸುತ್ತಿದ್ದರೆ, ಸರ್ಕಾರಕ್ಕೆ ಜನರ ಆರೋಗ್ಯ ಬಗ್ಗೆ ಕಾಳಜಿಯಿಲ್ಲ, ಸರ್ಕಾರದವರು ಸಾರ್ವಜನಿಕರಿಗೆ ಆತ್ಮಸೆüೈರ್ಯ ತುಂಬೋ ಕೆಲಸ ಮಾಡುತ್ತಿಲ್ಲ ಬದಲಾಗಿ ಅಧಿಕಾರಿಗಳಲ್ಲಿ ಮಂತ್ರಿಗಳಲ್ಲಿ ಗೊಂದಲವಿದೆ ಅವರಿಗೆ ತಕ್ಷಣವೇ ಖಜಾನೆಗೆ ದುಡ್ಡು ಬರಬೇಕು, ಮದ್ಯದ ಅಂಗಡಿಯನ್ನು ತೆರೆಯಲು ಅನುಮತಿ ಕೋರಿ ಪ್ರಧಾನ ಮಂತ್ರಿಗಳಿಗೆ 2ಬಾರಿ ಪತ್ರ ಬರೆದಿದ್ದಾರೆ, ಆದರೆ ಪ್ರಧಾನ ಮಂತ್ರಿಗಳು 2ಬಾರಿಯೂ ಛೀಮಾರಿ ಹಾಕೋ ಕೆಲಸ ಮಾಡಿದ್ದಾರೆ ಎಂದು ಡಿ.ಕೆ.ಸುರೇಶ್ ರವರು ತಿಳಿಸಿದರು.
ದ್ರಾಕ್ಷಿಯನ್ನು ಬೆಳೆದ ಚೌಡರೆಡ್ಡಿ ಎಂಬ ರೈತ ಮಾತನಾಡುತ್ತಾ, ದ್ರಾಕ್ಷಿಯನ್ನು ಕೊಂಡುಕೊಳ್ಳಲು ವ್ಯಾಪಾರಸ್ಥರು ಬರುತ್ತಿರಲಿಲ್ಲ, ಸುರೇಶ್ ಸಾರ್ ರವರು ಉಚಿತವಾಗಿ ಹಂಚಿಕೆ ಮಾಡಲು ದ್ರಾಕ್ಷಿ ಬೇಕೆಂದು ಕೇಳಿದರು, ನಾವು ಮಾಡಿರುವ ಖರ್ಚನ್ನು ಕೊಡುತ್ತೇವೆ ಎಂದರು ಅದರಂತೆ ಚಿಕ್ಕಬಳ್ಳಾಪುರ ತಾಲ್ಲೂಕಿನಾದ್ಯಂತ ಬೆಳೆದ 40 ರಿಂದ 50 ಟನ್ ದ್ರಾಕ್ಷಿಯನ್ನು ಕೊಡುತ್ತಿದ್ದೇವೆ ಇದರಿಂದ ಕನಿಷ್ಠ ಪಕ್ಷ ನಾವು ಮಾಡಿರುವ ಖರ್ಚು ಸಿಗುತ್ತದೆ ಎಂದು ತಿಳಿಸಿದರು.
ವರದಿ: ವಿ. ಅರ್ಪಿತ್ ಕುಮಾರ್ ವರದಿಗಾರರು, ಚಿಕ್ಕಬಳ್ಳಾಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.