ಚಿಕ್ಕಬಳ್ಳಾಪುರ (www.vknews.com) : ಎಲ್ಲೆಡೆ ಕೋರೋನಾ ಎಂಬ ಮಹಾಮಾರಿ ಜನರನ್ನು ಕೊಲ್ಲುತ್ತಿದೆ ಅದರ ಜೊತೆಗೆ ಈಗ ಚಿಕ್ಕಬಳ್ಳಾಪುರ ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಗರಸಭೆ ಸಹ ನಿರ್ಲಕ್ಷ್ಯ ತೋರುತ್ತಿದೆ.
ಚಿಕ್ಕಬಳ್ಳಾಪುರ ನಗರದ 11ನೇ ವಾರ್ಡಿನಲ್ಲಿ ಚರಂಡಿಯನ್ನು ದಿನಾಲೂ ಸ್ವಚ್ಛತೆಯನ್ನು ಮಾಡದೇ, ಚರಂಡಿ ಎಲ್ಲಾ ಕಟ್ಟಿಕೊಂಡು ಚರಂಡಿಯ ನೀರು ಸರಾಗವಾಗಿ ಹರಿಯದೇ ಗಬ್ಬುನಾರುತ್ತಿರುವ ವಾಸನೆ ಬರುತ್ತಿದೆ. ಮ್ಯಾನ್ ಹೋಲ್ ನಲ್ಲಿಯೂ ಸಹ ನೀರು ಸರಾಗವಾಗಿ ಹರಿಯದೇ ಎಲ್ಲಾ ಕೊಚ್ಚೆ ನೀರು ಹೊರಗಡೆ ಹರಿಯುತ್ತಿದೆ ಹಾಗೂ ಒಳಚರಂಡಿಯ ಮ್ಯಾನ್ ಹೋಲ್ ಪಕ್ಕದಲ್ಲಿಯೇ ಕುಡಿಯುವ ನೀರಿನ ಜಕ್ಕಲಮಡುಗು ಪೈಪ್ ಲೈನ್ ಎಳೆದಿರುವುದರಿಂದ, ಕುಡಿಯುವ ನೀರು ಸಹ ಕಲುಷಿತಗೊಳ್ಳುತ್ತಿದೆ. ಇದರಿಂದ ಅಲ್ಲಿ ವಾಸವಾಗಿರುವ ಗರ್ಭಿಣಿ ಸ್ತ್ರೀಯರಿಗೆ, ಪುಟ್ಟ ಮಕ್ಕಳಿಗೆ ಹಾಗೂ ಅಲ್ಲಿನ ನಿವಾಸಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಇವಿಷ್ಟು ತೊಂದರೆ ಒಂದು ಕಡೆಯಾದರೇ, 11ನೇ ವಾರ್ಡಿನ ವಾಸವಿ ಶಾಲೆ ಬಳಿ ಸುತ್ತಲೂ ತೀರಾ ಹಳೆಯದಾದ ಮನೆಗಳು ಹೆಚ್ಚಿದ್ದು, ಜೋರಾಗಿ ಮಳೆ ಬಂದರೆ ಕಟ್ಟಡ ಪೂರ್ತಿ ಕುಸಿದು ಬೀಳುತ್ತದೆ. ಇದರಿಂದ ಹಾವುಗಳು ಹೆಚ್ಚಾಗಿ ಓಡಾಡುತ್ತಿದ್ದು, ಮನೆಯಲ್ಲಿ ಸಣ್ಣ ಮಕ್ಕಳು, ಗರ್ಭಿಣಿ ಯರು ಇರುವ ಕಾರಣ ತೀರಾ ಭಯದ ವಾತಾವರಣ ಉಂಟಾಗಿದೆ ಎಂದು ಅಲ್ಲಿನ ನಿವಾಸಿಗಳು ತಮಗೆ ಆಗುತ್ತಿರುವ ತೊಂದರೆಯನ್ನು ಮಾಧ್ಯಮ ಮಿತ್ರರ ಬಳಿ ಹೇಳಿಕೊಂಡರು.
ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿತನದ ಕೆಲಸ:
11ನೇ ವಾರ್ಡಿನ ನಿವಾಸಿಗಳು ತಮಗೆ ಆಗುತ್ತಿರುವ ತೊಂದರೆಯನ್ನು ನಗರಸಭೆಯವರಿಗೆ ಸಾಕಷ್ಟು ಬಾರಿ ತಿಳಿಸಿದರೂ, ಬಂದು ನೋಡುತ್ತೇವೆ ಎಂದು ಹೇಳಿ ಹೊರಟು ಹೋಗುತ್ತಾರೆ, ತದನಂತರ ಯಾರೂ ಸಹ ಈ ಕಡೆ ತಲೆಹಾಕುವುದಿಲ್ಲ ಎಂದು ತಿಳಿಸಿದರು. ಜೋರಾಗಿ ಮಳೆ ಬಂದರೆ ಮ್ಯಾನ್ ಹೋಲ್ ಸಹ ತುಂಬಿ, ಮನೆಯ ಒಳಗಡೆ ಎಲ್ಲ ಕೊಚ್ಚೆ ನೀರು ಹರಿಯುತ್ತದೆ ಎಂದು ತಿಳಿಸುತ್ತಾ, ನಗರಸಭೆ ವಿರುದ್ಧ ಬೇಸರವನ್ನು ವ್ಯಕ್ತಪಡಿಸಿದರು.
11ನೇ ವಾರ್ಡಿನ ಕೌನ್ಸಿಲರ್ ಮಂಜುಳಮ್ಮ ರವರಿಗೂ ಸಹ ತಮ್ಮ ತೊಂದರೆಯನ್ನು ತಿಳಿಸಿದ್ದು, ಅವರು ಕೂಡ ಯಾವುದೇ ರೀತಿಯಾದಂತಹ ಕ್ರಮವನ್ನು ಕೈಗೊಳ್ಳಲಿಲ್ಲ ಎಂದು ಅಲ್ಲಿನ ನಿವಾಸಿಗಳು ತಿಳಿಸಿದರು.
ದೇಶದ ಎಲ್ಲೆಡೆ ಈಗ ಕೊರೋನಾ ಎಂಬ ಮಹಾಮಾರಿ ಎಲ್ಲರನ್ನು ಕೊಲ್ಲುತ್ತಿದೆ. ಇದರ ಜೊತೆಗೆ ಈಗ ಸ್ವಚ್ಛತೆಯನ್ನು ಕಾಪಾಡುವಲ್ಲಿ ನಗರದ ನಗರಸಭೆಯವರು ನಿರ್ಲಕ್ಷ್ಯ ತೋರುತ್ತಿರುವುದರಿಂದ ಅಲ್ಲಿನ ನಿವಾಸಿಗಳು ತುಂಬಾ ತೊಂದರೆಯನ್ನು ಅನುಭವಿಸುವಂತಾಗಿದೆ. ನಗರಸಭೆಗೆ ಹತ್ತಿರವಿರುವ 11ನೇ ವಾರ್ಡ್ನಲ್ಲಿಯೇ ಇಷ್ಟು ತೊಂದರೆಯಿದ್ದರೇ ಇನ್ನು ನಗರದ ಬೇರೆ ವಾರ್ಡ್ಗಳಲ್ಲಿ ಯಾವ ರೀತಿ ತೊಂದರೆಯಾಗುತ್ತಿದೆ ಎಂದು ಮನಗೊಂಡು ಇನ್ನಾದರೂ ನಗರಸಭೆಯವರು ಎಚ್ಚೆತ್ತುಕೊಂಡು ನಗರದಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.
ವಿಶೇಷ ಲೇಖನ: ವಿ.ಅರ್ಪಿತ್ ಕುಮಾರ್, ಚಿಕ್ಕಬಳ್ಳಾಪುರ ವರದಿಗಾರರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.