(www.vknews.com) : ಬದ್ರಿಯಾ ಜುಮಾ ಮಸೀದಿ ಗೂನಡ್ಕ ಇದು ರಾಜ್ಯ ಹೆದ್ದಾರಿ ಬದಿಯ ಯಾತ್ರಿಕರ ಪಾಲಿಗೆ ಪ್ರಾಥಮಿಕ ಅವಶ್ಯಕತೆ ಪೂರೈಸಲು ಮತ್ತು ನಮಾಝ್ ನಿರ್ವಹಣೆಗೆ ಪಾರ್ಕಿಂಗ್ ಸಮೇತ ಉತ್ತಮ ಸೌಕರ್ಯವಿರುವ ಮಸೀದಿ ಆಗಿರುವುದರಿಂದ ಇಲ್ಲಿಯ ಹಿಮಾಯತುಲ್ ಇಸ್ಲಾಂ ಜಮಾಅತ್ ಕಮಿಟಿಯು ಮುಂಜಾಗ್ರತಾ ಕ್ರಮವಾಗಿ ಉತ್ತಮ ನಿರ್ಧಾರಕ್ಕೆ ಬಂದಿರುತ್ತದೆ.
ಕೋವಿಡ್ 19 ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಮಸೀದಿಯ ಸಾಮೂಹಿಕ ಪ್ರಾರ್ಥನೆಗೆ ಅನುಮತಿಯಿದ್ದರೂ ಅವಸರ ಪಡದೇ ವೈರಸ್ ಅಲ್ಪ ಮಟ್ಟಿಗಾದರೂ ಹತೋಟಿಗೆ ಬರುವ ಸಮಯದ ವರೆಗೆ ಶುಕ್ರವಾರದ ಜುಮಾ ಸಾಮೂಹಿಕ ನಮಾಝ್ ನಾಡಿನ ಸುರಕ್ಷಾ ಹಿತದೃಷ್ಟಿಯಿಂದ ಮುಂದೂಡಲಾಗಿದೆ. ಆದರೆ ದೈನಂದಿನದ ಐದು ಸಮಯದ ನಮಾಝ್ ನಿರ್ವಹಣೆಗೆ ಸ್ಥಳೀಯ ಜಮಾಅತ್ತರಿಗೆ ಮಾತ್ರ ಶರತುಬದ್ಧ ಅವಕಾಶ ನೀಡಲಾಗುವುದು.ಮಸೀದಿಯ ಪ್ರಮುಖ ಗೇಟ್ ಗಳನ್ನು ಸಧ್ಯಕ್ಕೆ ತೆರೆಯುವುದಿಲ್ಲ.ಸರಕಾರದ ,ಆರೋಗ್ಯ ಇಲಾಖೆಯ, ಉಲಮಾಗಳ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಜಮಾಅತ್ತರಲ್ಲಿ ಸೂಚಿಸಲಾಗಿದೆ. ಮುಖ ಮಾಸ್ಕ್ ಕಡ್ಡಾಯವಾಗಿ ಧರಿಸುವುದು, ಅಂಗ ಶುದ್ಧಿ ಮನೆಯಿಂದಲೇ ಮಾಡಿ ಬರುವುದು, ಮಸೀದಿ ಪ್ರವೇಶಕ್ಕೆ ಮುನ್ನ ಮತ್ತು ಹೊರ ಹೋಗುವಾಗ ಸಾನಿಟೈಸರ್, ಸೋಪ್ ಬಳಸಿ ಕೈ ಶುಚಿತ್ವ ಗೊಳಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು,
ನಮಾಝ್ ಸಂಧಂರ್ಭ ಹಾಸಲು ಅವರವರು ಸ್ವಂತ ಹಾಸು ತರುವುದು, ವೃದ್ಧರು, ಮಕ್ಕಳು,ರೋಗಿಗಳು ಮಸೀದಿ ಪ್ರವೇಶಿಸದಿರುವುದು, ಅಪರಿಚಿತರು ಮತ್ತು ಯಾತ್ರಿಕರು ಸಧ್ಯಕ್ಕೆ ಮಸೀದಿ ಪ್ರವೇಶಿಸದಂತೆ ನೋಡಿಕೊಳ್ಳಲು , ಪ್ರತೀ ನಮಾಝ್ ಆಝಾನ್ ಸಮಯ ಮಸೀದಿ ಬಾಗಿಲು ತೆರೆದು ಹದಿನೈದು ನಿಮಿಷಗಳಲ್ಲಿ ಪುನಃ ಬಂದ್ ಮಾಡಲು ಮತ್ತು ಮಸೀದಿ ಪರಿಸರ ಅಣುಮುಕ್ತ ಮಾಡಲು ಕ್ರಮ ಕೈಗೊಳ್ಳಲು ಆಡಳಿತ ಮಂಡಳಿ ನಿರ್ಧರಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.